ಇಂಡಿ: ಮಸೀದಿಗಳ ಧ್ವನಿವರ್ಧಕ ತೆರವಿಗೆ ಆಗ್ರಹ..! | VHP–ಬಜರಂಗದಳದಿಂದ ಎಸಿ ಅವರಿಗೆ ಮನವಿ
ಇಂಡಿ: ನಗರದ ಮಸೀದಿಗಳ ಮೇಲೆ ಅಳವಡಿಸಲಾಗಿರುವ ಧ್ವನಿವರ್ಧಕಗಳಿಂದಾಗಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೆ ಧ್ವನಿ ವರ್ಧಕಗಳನ್ನು ಎರವುಗೊಳಿಸುವಂತೆ ಆಗ್ರಹಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ ಇಂಡಿ ಪ್ರಖಂಡ ಸಮೀತಿ ಕಾರ್ಯಕರ್ತರು ಶನಿವಾರ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ.ಹಿಂ.ಪ ಜಿಲ್ಲಾ ಧರ್ಮಾಚಾರಿ ಸಂಪರ್ಕ ಪ್ರಮುಖ ಪ್ರಕಾಶ ಬಿರಾದಾರ, ಧ್ವನಿವರ್ಧಕಗಳ ಮೂಲಕ ಪ್ರತಿದಿನ ಐದಾರು ಬಾರಿ ಅತ್ಯಂತ ಹೆಚ್ಚಿನ ಶಬ್ದದೊಂದಿಗೆ ಪ್ರಾರ್ಥನೆ (ನಮಾಜ್) ಮಾಡಲಾಗುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ದಿನನಿತ್ಯದ ವಿದ್ಯಾಭ್ಯಾಸದ ಮೇಲೆ ಗಮನ ಹರಿಸಲು ಮತ್ತು ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ, ವೃದ್ಧರು, ರೋಗಿಗಳು ಹಾಗೂ ಸಣ್ಣ ಮಕ್ಕಳು ಸಹ ಈ ಅತಿಯಾದ ಶಬ್ದ ಮಾಲಿನ್ಯದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಧ್ವನಿವರ್ಧಕಗಳ ಬಳಕೆಗೆ ಸಂಬAಧಿಸಿದAತೆ ಮಾನ್ಯ ನ್ಯಾಯಾಲಯಗಳು ಹಾಗೂ ಸರ್ಕಾರದ ನಿಯಮಾವಳಿಗಳಿದ್ದರೂ ಸಹ, ಇಲ್ಲಿ ಅವುಗಳ ಉಲ್ಲಂಘನೆಯಾಗುತ್ತಿದೆ. ಆದ್ದರಿಂದ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ನಿಯಮ ಬಾಹಿರವಾಗಿ ಅಳವಡಿಸಲಾಗಿರುವ ಧ್ವನಿವರ್ಧಕಗಳನ್ನು ಆದಷ್ಟು ಬೇಗ ತೆರವುಗೊಳಿಸಲು ಸಂಬAಧಪಟ್ಟವರಿಗೆ ಸೂಕ್ತ ಕಾನೂನು ಕ್ರಮ ಅಥವಾ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರೆ.
ಈ ಸಂದರ್ಭದಲ್ಲಿ ವಿಠ್ಠಲ ಹೊಸಮನಿ, ನೇತಾಜಿ ಪವಾರ, ಬಸವರಾಜ ಕಂಬಾರ, ಅದೃಷ್ಯಪ್ಪ ವಾಲಿ, ಬಾಳು ಮುಳಜಿ, ಮಹೇಶ ಹೂಗಾರ, ಬಸವರಾಜ ಜಮಖಂಡಿ, ಶಾಂತು ಕಂಬಾರ, ಶ್ರೀಧರ ಝಂಪಾ, ರೇವಪ್ಪ ಹೂಗಾರ, ಆದುತಯ ಸಿಂಧೆ, ಶಿವರಾಜ ಬಿರಾದಾರ, ಈರಣ್ಣ ಸಿಂದಗಿ, ಅಭಿಷೇಕ ಸಿಂದಗಿ ಸೇರಿದಂತೆ ಮತ್ತಿತರರು ಇದ್ದರು.
ಇಂಡಿ: ನಗರದ ಮಸೀದಿಗಳ ಮೇಲೆ ಅಳವಡಿಸಲಾಗಿರುವ ಧ್ವನಿವರ್ಧಕಗಳಿಂದಾಗಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೆ ಧ್ವನಿ ವರ್ಧಕಗಳನ್ನು ಎರವುಗೊಳಿಸುವಂತೆ ಆಗ್ರಹಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ ಇಂಡಿ ಪ್ರಖಂಡ ಸಮೀತಿ ಕಾರ್ಯಕರ್ತರು ಶನಿವಾರ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಗಳಿಗೆ ಮನವಿ ಸಲ್ಲಿಸಿದರು.


















