ಲಿಂಗಸೂಗೂರು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಹಾಗೂ ಅಕ್ಕನ ಬಳಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಸಿರು ಕ್ರಾಂತಿಯ ಹರಿಕಾರರು, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ:ಮಾನಪ್ಪ ವಜ್ಜಲರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಮಾತನಾಡಿ ಹೆಣ್ಣು ಸಮಾಜದ ಕಣ್ಣು, ಹೆಣ್ಣಿಂದಲೇ ಪರ ಹೆಣ್ಣಿಂದಲೇ ಇಹ. ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಗಿರಿ ಮಲ್ಲನಗೌಡ ಪಾಟೀಲ್ ಕರಡಕಲ್, ಗುಂಡಪ್ಪ ಗೌಡ ಪೊಲೀಸ್ ಪಾಟೀಲ್, ಪರಮೇಶ್ ಯಾದವ್, ಬಾಲಪ್ಪ ನಾಯ್ಕ್, ಗುಂಡಪ್ಪಗೌಡ ಗುರಿಕಾರ್, ಸತ್ಯನಾರಾಯಣ ಶೆಟ್ಟಿ, ಯಂಕೋಬ್ ನಾಯಕ್, ರಮೇಶ್ ಉಳಿಮಹೇಶ್ವರ, ಮಾನಪ್ಪ, ರಾಜುಗೌಡ, ಗೋವಿಂದ ನಾಯಕ್, ಶಶಿ ಸೇರಿದಂತೆ ಕಂಪನಿಯ ಅಧಿಕಾರಿಗಳು ಮತ್ತು ಅಕ್ಕನ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.