ಇಂಡಿಯಲ್ಲಿ ಏಡ್ಸ್ ಜಾಗೃತಿಯ ಬಿದಿ ನಾಟಕ ಲೋಕಾಪುರ ತಂಡದಿಂದ
ಇಂಡಿ: ಪಟ್ಟಣದಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಶ್ರೀ ಜ್ಞಾನೇಶ್ವರ ಶ್ರೀ ಕೃಷ್ಣ ಪಾರಿಜಾತ ಕಲಾತಂಡದ ಲೋಕಾಪುರ ಜಿಲ್ಲಾ ಬಾಗಲಕೋಟ ಇವರ ಮೂಲಕ ಹೆಚ್.ಐ.ವಿ /ಏಡ್ಸ್ ಕುರಿತು ಜನಜಾಗೃತಿ ಆಂದೋಲನವನ್ನು ಬೀದಿ ನಾಟಕ ಹಮ್ಮಿಕೊಂಡಿದ್ದು, ಏಡ್ಸ್ ರೋಗಿಗಳು ಚಿಕಿತ್ಸೆ ಪಡೆಯಲು ಯಾವುದೇ ಹಿಂಜರಿಕೆ ಪಡಬಾರದು ಎಂದು ಆಯುಷ್ಮಾನ ಭಾರತ ಆರೋಗ್ಯ ಮಿತ್ರ ಶಿವಾಜಿ ಮಾನೆ ಹೇಳಿದರು.
ಗುರುವಾರ ಪಟ್ಟಣದ ಅಗರಖೇಡ ರಸ್ತೆಯ ಎಪಿಎಂಸಿ
ಎದುರುಗಡೆ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ
ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ವಿಜಯಪುರ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ನಿರೋಧಕ ಘಟಕ ವಿಜಯಪುರ ಹಾಗೂ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಏಡ್ಸ್ ಜಾಗೃತಿ ಬಿದಿ ನಾಟಕದಲ್ಲಿ ಅವರು ಮಾತನಾಡಿದರು. ನಿರೋಧ್ ಬಳಸಿ ಏಡ್ಸ್ ನಿಂದ ದೂರವಿರಿ, ಏಡ್ಸ್ ಬಗ್ಗೆ ಅರಿತುಕೊಳ್ಳಿ, ಏಡ್ಸ್ನಿಂದ ದೂರವಿರಿ, ಪರಸ್ಪರ ನಂಬಿಕೆಯ ದಾಂಪತ್ಯ ಜೀವನವೆ ಏಡ್ಸ್ ತಡೆಗಟ್ಟಲು ಸುಲಭ ಸಾಧನ, ಏಡ್ಸ್ ಬರುವ
ಮುನ್ನ ತಡೆಯಿರಿ ಎಂಬ ಘೋಷಣಾ ಫಲಕಗಳನ್ನು
ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ಆಸ್ಪತ್ರೆಯ ಐಸಿಟಿಸಿ ಆಪ್ತ
ಸಮಾಲೋಚಕ ಕೆ.ಜಿ. ಶೀಲವಂತ, ಸಂಘ ಸಂಸ್ಥೆಯ, ಏಡ್ಸ್ ಜಾಗೃತಿ ಮಹಿಳಾ ಸಂಘದ ಸಿಬ್ಬಂದಿಗಳು ಔಟ್ರಿಚ್ ವರ್ಕರ್. ಮಲ್ಲಮ್ಮ. ಛಲವಾದಿ ಹಾಗೂ ಆಪ್ತ ಸಮಾಲೋಚಕ ರೇಷ್ಮಾ ಇಂಗಳೆಶ್ವರ ಸೇರಿದಂತೆ ಅನೇಕರು ಇದ್ದರು.
ಇಂಡಿ: ಪಟ್ಟಣದಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಶ್ರೀ ಜ್ಞಾನೇಶ್ವರ ಶ್ರೀ ಕೃಷ್ಣ ಪಾರಿಜಾತ ಕಲಾತಂಡದ ಲೋಕಾಪುರ ಜಿಲ್ಲಾ ಬಾಗಲಕೋಟ, ಹೆಚ್.ಐ.ವಿ /ಏಡ್ಸ್ ಕುರಿತು ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮದಲ್ಲಿ ಶಿವಾಜಿ ಮಾನೆ ಮಾತನಾಡಿದರು.