– 2022-23 ನೆ ರಾಜ್ಯ ಬಜೆಟ್ ನಲ್ಲಿ ಸೌಲಭ್ಯಗಳನ್ನು ನೀಡದಿರುವಕ್ಕೆ ಅಂಗವಿಕಲರ ಅಸಮಾಧಾನ.
– ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಿಂದ ಅನ್ಯಾಯ.
– ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ.
ಇಂಡಿ : ಅಂಗವಿಕಲರ ಬೇಡಿಕೆಗಳನ್ನು ಆಲಿಸುವಲ್ಲಿ ಸರ್ಕಾರ ವಿಫಲ, 2022-23 ನೇ ಸಾಲಿನ ಬಜೆಟ್ ನಲ್ಲಿ ಯಾವುದೇ ರೀತಿಯ ಸೌಲಭ್ಯ ನೀಡದೆ ಕಡೆಗಣಿಸಿದಕ್ಕೆ
ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳ ಸಭೆ ಸೇರಿ, ಹಲವಾರು ವಿಷಯಗಳ ಕುರಿತು ದೀರ್ಘಕಾಲ ಚರ್ಚಿಸಿದರು. ತದನಂತರ ರಾಜ್ಯ ಸರ್ಕಾರದ ವಿರುದ್ಧ ತಹಶೀಲ್ದಾರರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಂಡರು.
ಇಂಡಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕು ಘಟಕದ
ಸಭೆ ಕರೆದು ಹಲವಾರು ವಿಷಯಗಳ ಕುರಿತು ಚರ್ಚಿಸಿ, ಇದೇ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯ ಅಶೋಕ್ ವಾಲಿಕಾರ ಮಾತಾನಾಡಿ ರಾತ್ರೊ ರಾತ್ರಿ ಯಾವುದೇ ಚರ್ಚೆ ಇಲ್ಲದೇ ಜನಪ್ರತಿನಿಧಿಗಳು ತಮ್ಮ ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಅಂಗಿಕಾರ ಪಡಿಸಿಕೊಳ್ಳುತ್ತಾರೆ. ಆದರೆ ಅಂಗವಿಕಲರಿ ಸಮಸ್ಯೆ ಗಳು ಬಗ್ಗೆ ಮತ್ತು ಜನ ಸಾಮನ್ಯ ಜನರ ಪರಿಸ್ಥಿತಿ ಅರ್ಥಮಾಡಿಕೊಳ್ಳದೇ ಪಜ್ಞಾ ಪೂರ್ವಕ ಕಳೆದುಕೊಂಡಂತ್ತಾಗಿದೆ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶ್ರೀ ವಿನೋದ್ ಖೇಡ ಮಾತಾನಾಡಿದ ಅವರು, ಸರ್ಕಾರದ ವಿವಿಧ ಇಲಾಖೆಯಲ್ಲಿ ಹೊರಗುತ್ತಿಗೆ ನೇಮಕಾತಿ ಮಾಡಿಕೊಳ್ಳುವಲ್ಲಿ ಅಂಗವಿಕಲರಿಗೆ ಜಿಲ್ಲೆಯ ಎಲ್ಲಾ ಸರ್ಕಾರದ ವಿವಿಧ ಇಲಾಖೆಯ ಮುಖ್ಯಸ್ಥರು ಅಂಗವಿಕಲರಿಗೆ ಅನ್ಯಾಯ ಮಾಡಿರುತ್ತಾರೆ ಎಂದು ಆರೋಪ ಮಾಡಿದರು.
ಇನ್ನೂ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಉಮ್ರಾಣಿ ಮಾತಾನಾಡಿದ ಅವರು, ಜಿಲ್ಲೆಯಲ್ಲಿ ವಿವಿಧ ಇಲಾಖೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳು ಅಂಗವಿಕಲರು ವಂಚಿತರಾಗಿರುತ್ತಿರುವ ಹಾಗೂ ಅಂಗವಿಕಲರ 2016ರ ಕಾಯ್ದೆ ಜಿಲ್ಲೆಯಲ್ಲಿ ಜಾರಿಗೆ ಆಗಿದ್ದಕ್ಕೆ ಕಾರಣರಾದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಆಶು ನಧಾಪ ಇವರೆ ಹೊಣೆಗಾರರು ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಇಂಡಿ ತಾಲ್ಲೂಕು ಅಧ್ಯಕ್ಷ ಎಸ್ ಎಮ್ ಮಕಾಂದರ, ಉಪಾಧ್ಯಕ್ಷ ನಿಂಗರಾಜ ಬಿಸನಾಳ, ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ನಾಯಕೋಡಿ, ಬಾಬು ಸಂಗೊಗಿ , ಸುಮಯ್ಯ ಮೋಮಿನ, ಪಾಂಡು ರಾಠೋಡ, ಕನ್ನಯ್ಯಸಿಂಗ ಹಜಾರೆ, ಪರಸುರಾಮ ಪುಜಾರಿ, ಈರಣ್ಣ ಡಂಗಿ, ರೇಖಾ ಕ್ಷತ್ರಿಯ, ಶಿಕ್ಷಕ ಪ್ರಕಾಶ್ ಐರೋಡಗಿ, ರಾಜು ಹಣಕಟ್ಟಿ, ಬಿಜೆಪಿ ಧುರಿಣ ಪಾಪು ಕಿತ್ತಲಿ, ವಿಕಾಸ ಖೇಡ, ಸಾಗರ ಸಾವಳಗಿ, ವಾಹಿದ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.