ಇಂಡಿ : ಗುತ್ತಿಬಸವಣ್ಣ ಏತ ನೀರಾವರಿ ಯೋಜನೆ ಕಾಲುವೆ ಮುಗಿದು ದಶಕಗಳೇ ಕಳೆದಿವೆ. ಆದ್ರೇ, ಕೊನೆ ಭಾಗಕ್ಕೆ ಹನಿ ನೀರು ಬಂದಿಲ್ಲ ಎಂದು ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಹೇಳಿದರು. ಪಟ್ಟಣದಲ್ಲಿ ಮಾತನಾಡಿದ ಅವರು, ಇದಕ್ಕೆ ನೇರ ಹೊಣೆ ಅಧಿಕಾರಿಗಳ ನಿರ್ಲಕ್ಷ್ಯವೇ ಆಗಿದೆ. ಮೋಟಾರಗಳು ನಿರ್ವಹಣೆ ಇಲ್ಲದ ಕಾರಣ ಹಾಳಾಗಿ ಹೋಗಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ನೀರು ಹರಿಸಿ. ಇಲ್ಲದೇ ಹೋದರೆ ರೈತರಿಂದ ರಸ್ತೆ ತಡೆದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತೆ ಎಂದರು.
ಈ ಸಮಯದಲ್ಲಿ ಶಿವಯೋಗಿ ಸರಸಂಬಿ, ಗೋಪಾಲ ಅವರಾದಿ, ಸಿದ್ದು ದಿವಟಗಿ, ಸಂಜು ಜೇವೂರ, ಈರಣ್ಣ ಅಳ್ಳಗಿ, ರಾಜು ಕಂಬಾರ, ಚಿದಾನಂದ್ ಕೆಂಗನಾಳ, ಸಂಗಪ್ಪ ದಿವಟಗಿ, ಅಶೋಕ ಅವರಾದಿ, ರಮೇಶ ಸೋಮನಿಂಗ, ಗಂಗಾಧರ ಕಾಂಬಳೆ, ಬಾಬು ಅವಟಿ, ಶ್ರೀಮಂತ ದಿವಟಗಿ, ದಯಾನಂದ ಗೊಂಗಿ, ರಮೇಶ ರೊಟ್ಟಿ, ನಾಗರಾಜ ಮಾಳಿ ಹಾಗೂ ಇನ್ನೂ ಅನೇಕ ಕರವೇ ಕಾರ್ಯಕರ್ತರು ರೈತಭಾಂದವರು ಭಾಗವಹಿಸಿದರು.