ಇಂಡಿ : ತಾಲೂಕಿನ ತಾಂಬಾ ಗ್ರಾಮದಲ್ಲಿ ನಡೆಯುತ್ತಿರುವ ಗುತ್ತಿಬಸವಣ್ಣ ಹೋರಾಟ 200ನೇ ದಿನ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ದಿವಂಗತ ಉಮೇಶ್ ಕತ್ತಿಯವರು ಭಾಷೆ ಕೊಟ್ಟಂತೆ ಬಳಗಾನೂರು ಏತ ನೀರಾವರಿ ಮೂಲಕ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕೆಂದು, ಗುತ್ತಿ ಬಸವಣ್ಣ ಹೋರಾಟ ಸಮಿತಿ ಸದಸ್ಯರು ಬೆಂಗಳೂರಿಗೆ ದೌಡಾಯಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಭೇಟಿಯಾಗಿ ವಿಶೇಷ ಸಭೆಗೆ ಮನವಿ ಮಾಡಿದರು.
ಈ ಸಮಯದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಯ್ಯ ಸಾರಂಗಮಠ, ಮಹದೇವ ಮೂಲಿಮನಿ, ಸಿದ್ದಣ್ಣ ಕಿಣಗಿ, ಶಿವರಾಜ್ ಕೆಂಗನಾಳ, ಗುರಪ್ಪ ಜಂಬಿಗಿ, ಅಡಿಯಪ್ಪ ರೊಟ್ಟಿ ಬಸವರಾಜ್ ಉಪ್ಪಿನ, ಪರಶು ಬಿಸನಾಳ, ಮಾಸಿಮ್ ವಾಲಿಕರ್, ಸಿಗಪ್ಪ ಸೋಮನಿಂಗ, ಶಾಂತಪ್ಪ ಚಿಂಚೋಳಿ, ಮುನ್ನ ಮೊಮೀನ್ ಹಾಗೂ ರೈತ ಮುಖಂಡರು ಇದ್ದರು.