ಅಫಜಲಪುರ: ರಾಜ್ಯ ಅತಿಥಿ ಉಪನ್ಯಾಸಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಾನಂದ ಕಲ್ಲೂರ ಅವರ ಅಗಲಿಕೆಯೂ ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರಿಗೆಲ್ಲ ಅತೀವ ದುಃಖವನ್ನುಂಟು ಮಾಡಿದೆ ಸರಕಾರ ಕೂಡಲೇ ಅವರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಬೇಕು ಎಂದು ಅಫಜಲಪುರ ಸರಕಾರಿ ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ.ಸಂಗಣ್ಣ ಎಂ.ಸಿಂಗೆ ತಿಳಿಸಿದರು.
ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಶಿವಾನಂದ ಕಲ್ಲೂರ ಅವರು ರಾಜ್ಯಾದ್ಯಾಂತ ಅತಿಥಿ ಉಪನ್ಯಾಸಕರ ಸೇವೆಯನ್ನು ಪರಿಗಣಿಸಿ ಅತಿಥಿ ಉಪನ್ಯಾಸಕರಿಗೆ ಭದ್ರತೆ ಒದಗಿಸಿಕೊಡಬೇಕು ಎಂದು ನಿರಂತರವಾಗಿ ಸರಕಾರದ ವಿರುದ್ಧ ಹೋರಾಟ ಮಾಡುತ್ತಲಿದ್ದರು. ಅವರ ಪ್ರಯತ್ನವು ಫಲ ನೀಡಲಿದೆ ಎಂಬ ಆಸೆ ಭಾವನೆ ಎಲ್ಲರಿತ್ತು. ದುರ್ದೈವ ಅವರು ನಮ್ಮನ್ನಗಲಿರುವುದು ನಿಜಕ್ಕೂ ದುಃಖವನ್ನುಂಟು ಮಾಡಿದೆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕ ರಾಜೇಶ್ವರಿ ಸರಸಂಬಿ, ಸುರೇಶ, ಸಂತೋಷ ಡಾ.ಗಿರಿಜಾ ಪಾಟೀಲ, ಶ್ವೇತಾ ಗಜಾಕೋಶ, ಸುರೇಶ ಮುಗಳಿ, ಗೌರಿಶಂಕರ ಭೂರೆ, ಶಾಂತಪ್ಪ ಮೇಲಕೇರಿ, ನಾಗೇಶ ಇದ್ದರು.