ಅಫಜಲಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವು ಜಿಲ್ಲಾ ಪಂಚಾಯತ್ ಕಲಬುರ್ಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅಂಧತ್ವ ವಿಭಾಗ ಕಲಬುರ್ಗಿ ಮತ್ತು ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಸಾರ್ವಜನಿಕ ಆಸ್ಪತ್ರೆ ಮತ್ತು ಜನ ಹಿತ ಐ ಕೇರ್ ಸೆಂಟರ್ ಬೆಂಗಳೂರು, ಅವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು ಎಂದು ನೇತ್ರಾಧಿಕಾರಿ ಸುರೇಶ ಬಂಡಗಾರ ಹೇಳಿದರು.
ಈ ಶಿಬಿರದಲ್ಲಿ ಸುಮಾರು 240 ಜನರಿಗೆ ಉಚಿತ ನೇತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಲಾಯಿತು.
ಶಿಬಿರ ಕಾರ್ಯಗಾರಕ್ಕೆ ತಾಲೂಕ ವೈದ್ಯಾಧಿಕಾರಿಗಳು, ತಾಲೂಕ ಆಡಳಿತ ವೈದ್ಯಾಧಿಕಾರಿಗಳು, ಸಂಘ ಸಂಸ್ಥೆಗಳು ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ.
ಶಿಬಿರದಲ್ಲಿ ಡಾ.ರಾಜಕುಮಾರ, ಡಾ. ರತ್ನಾಕರ್ ತೋರಣ, ಡಾ.ಕೃಷ್ಣ, ಮೋಹನ, ಡಾ.ಹರಿಪ್ರಸಾದ, ಡಾ.ವಿನೋದ ಸಂಗಮೇಶ ಟಕ್ಕಳಕಿ,ಡಾ, ಮುಸ್ತಫ್ ಕುಮಾರಿ ಅರ್ಚನಾ, ಶ್ರೀಮತಿ ಅನಿಸ್, ವೈಜನಾಥ ಮೇತ್ರೆ, ಈರಣ್ಣ ಹಾಗೂ ಸಿಬ್ಬಂದಿಗಳು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ