ಕಾಂಗ್ರೆಸ್ ಪತನ..! ಭವಿಷ್ಯ ನುಡಿದ ಸಂಸದ ರಮೇಶ್
ಇಂಡಿ: ಶೋಷಿತ, ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳುವ ರಾಜ್ಯ ಸರಕಾರ, ಆ ಜನಾಂಗದ ಶ್ರೇಯೋಭಿವೃದ್ದಿ ಮಿಸಲಿಟ್ಟಿರುವ ಹಣವನ್ನು ನುಂಗಿ ಭ್ರಷ್ಟಾಚಾರದಲ್ಲಿ ಮುಳುಗಿ ಚಾಂಪಿಯನ್ ಆಗಿದ್ದಾರೆ. ಒಂದು ವೇಳೆ ಭ್ರಷ್ಟಚಾರದಲ್ಲಿ ಪಾಲುದಾರಿಕೆ ಇಲ್ಲವೆಂದರೆ ಸಿಬಿಐ ತನಿಖೆಗೆ ನೀಡಿ ಎಂದು ಸಂಸದ ರಮೇಶ್ ಜಿಗಜಿಣ ಗೆ ರಾಜ್ಯ ಸರಕಾರಕ್ಕೆ ಸವಾಲು ಹಾಕಿದರು.
ಅವರು ಬುಧವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ನೂತನ ಸಂಸದರಿಗೆ ಸನ್ಮಾನ ಹಾಗೂ ಕಾರ್ಯಕಾರಣ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾವು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮುಖಂಡರು ಎಂದು ಸಾರಿ ಹೇಳಿಕೊಳ್ಳುತ್ತೀರಿ, ಅವರ ಅಭಿವೃದ್ಧಿ ಮಾಡಬೇಕು ಎಂಬುದನ್ನು ಮರೆತು ಅವರಿಗಾಗಿ ಮೀಸಲಿಟ್ಟ ಹಣವನ್ನೇ ಗುಳುಂ ಮಾಡುತ್ತೀರಿ, ನೀವೆಲ್ಲ ಅಹಿಂದ ನಾಯಕರಾ ಎಂದು ಪ್ರಶ್ನಿಸಿದರು.
ಜೀವನದಲ್ಲಿ ಧೀರ್ಘಕಾಲ ರಾಜಕಾರಣ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ ಜನರ ಆಶೀರ್ವಾದ, ಕಾರ್ಯಕರ್ತರ ಶ್ರಮದಿಂದ ರಾಜಕಾರಣ ಮತ್ತು ಜನರ ಸೇವೆ ಮಾಡಲು ಅವಕಾಶ ದೊರೆತಿದೆ ಎಂದು ಹೇಳಿದರು. ನನ್ನ ಗೆಲುವಿಗೆ ಕಾರ್ಯಕರ್ತರೇ ನೇರ ಕಾರಣ, ಈ ಗೆಲುವು ನನ್ನದಲ್ಲ ಕಾರ್ಯಕರ್ತರದ್ದು ಎಂದರು.
ನಾನು ಕೇಂದ್ರ ಸಚಿವನಾಗಬೇಕೆಂದು ಯಾರ ಮನೆಯ ಬಾಗಿಲಿಗೂ ಹೋಗಿಲ್ಲ ನಾನು ಸಚಿವ ನಾಗಬೇಕೆಂಬುದು ಜಿಲ್ಲೆಯ ಜನರ ಹಾಗೂ ನಮ್ಮ ಸಮಾಜದ ಜನರ ಆಶಯವಾಗಿತ್ತು, ಹೀಗಾಗಿ ನಾನು ಒಂದೆರಡು ಬಾರಿ ಆ ಕುರಿತು ಮಾತನಾಡಿದ್ದೇನೆ, ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಪಕ್ಷದವರಿಗೆ ಬಿಟ್ಟಿದ್ದು ಎಂದರು.
ನಾನು ಪಕ್ಷದ ಪ್ರಾಮಾಣ ಕ ಕಾರ್ಯಕರ್ತನಾಗಿ ದುಡಿದಿದ್ದೇನೆ ಮುಂದೆಯೂ ದುಡಿಯುತ್ತೇನೆ ಸತತ ಏಳು ಬಾರಿ ಸಂಸದನಾಗಿದ್ದೇನೆ ನನ್ನ ರಾಜಕೀಯ ಇಲ್ಲಿಗೆ ಮುಗಿಯಲ್ಲ ಇನ್ನೂ ಮುಂದೆ ಏನೇನಿದೆಯೋ ನೋಡಬೇಕು ಎಂದು ತಿಳಿಸಿದ ಅವರು ನಾನು ನನ್ನ ಮಕ್ಕಳನ್ನು ರಾಜಕೀಯಕ್ಕೆ ತರುವುದಿಲ್ಲ. ನನ್ನ ತಲೆಯ ಮಾರಿಗೆ ನನ್ನ ಮನೆತನದ ರಾಜಕಾರಣ ಮುಕ್ತಾಯವಾಗುತ್ತದೆ ಎಂದು ತಿಳಿಸಿದರು.
ಶೀಘ್ರದಲ್ಲಿಯೇ ಅಕ್ಕಲಕೋಟ-ವಿಜಯಪೂರ ರಾಷ್ಟೀಯ ಹೆದ್ದಾರಿ ಕಾಮಗಾರಿಗೆ ಪೂಜೆ ನೆರವೇರಿಸಲಾಗುವುದು ಎಂದರು.
ಮಾಜಿ ವಿ.ಪ ಸದಸ್ಯ ಅರುಣ ಶಹಾಪೂರ ಮಾತನಾಡಿ, ಸಂಸದ ರಮೇಶ ಜಿಗಿಜಿಣಗಿ ಅವರು ರಾಜಕೀಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು, ಇಂಡಿ ತಾಲೂಕಿನವರಾದ ಅಪ್ಪು ಪಟ್ಟಣಶೆಟ್ಟಿ ಹಾಗೂ ವಿಠ್ಠಲ ಕಟಕ ದಂಡ ಅವರನ್ನು ಶಾಸಕರನ್ನಾಗಿ ಮಾಡಿದ್ದು ಇದೇ ಜಿಗಜಿಣಗಿಯವರು ಎಂದ ಅವರು ಜಿಲ್ಲೆಗೆ ೧ ಲಕ್ಷಕ್ಕೂ ಅಧಿಕ ಕೋಟಿ ಹಣವನ್ನು ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ, ಅವರಿಗೆ ರಾಜಕಾರಣದಲ್ಲಿ ಇನ್ನೂ ಸಹ ಭವಿಷ್ಯವಿದೆ ಎಂದರು.
ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿ, ರಮೇಶ್ ಜಿಗಜಿನಗಿ ಅವರ ಗೆಲುವಿಗೆ ಶ್ರಮಿಸಿದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿ, ಜಿಗಜಿಣಗಿ ಸಾಹೇಬರಿಗೆ ಸಚಿವ ಸ್ಥಾನ ಸಿಗಬೇಕಾಗಿತ್ತು. ಅವರ ರಾಜಕೀಯ ಹಿರಿತನಕ್ಕೆ ಪಕ್ಷದಲ್ಲಿ ಗುರುತಿಸುವ ಕಾರ್ಯ ಮಾಡಬೇಕಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಬೆಲೆ ಏರಿಕೆ ಮಾಡುವುದಲ್ಲದೆ ಬ್ರಷ್ಟಾಚಾರದಲ್ಲಿ ಮುಳಗಿ ಹೋಗಿದೆ. ಸ್ಥಳೀಯ ಶಾಸಕರು ಅಭಿವೃಧ್ಧಿ ವಿಷಯದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತಗಳು ಬಂದ ಸ್ಥಳದಲ್ಲಿ ಕಾಲುವೆ ನೀರು ಹರಿಸುತ್ತಿಲ್ಲ ಅದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಮುಖಂಡ ಶೀಲವಂತ ಉಮರಾಣ , ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ್, ಮರೆಪ್ಪ ಗಿರಣ ವಡ್ಡರ ಮಾತನಾಡಿದರು.
ವೇದಿಕೆಯಲ್ಲಿ ಶಂಕರಗೌಡ ಪಾಟೀಲ್ ಡೋಮನಾಳ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ಅಣ್ಣಪ್ಪ ಖೈನೂರ, ರಾಜಕುಮಾರ ಸಗಾಯಿ, ಮುತ್ತಪ್ಪ ಪೋತೆ, ಶ್ರೀಶೈಲಗೌಡ ಪಾಟೀಲ್,ಅಶೊಕಗೌಡ ಪಾಟೀಲ, ಸಿದ್ದು ಡÀಂಗಾ, ಅಯೂಬ ನಾಟಿಕಾರ, ಮಲ್ಲು ವಾಲಿಕಾರ, ರವಿ ವಗ್ಗೆ, ಸುನಂದಾ ವಾಲಿಕಾರ್, ಎಸ್.ಜೆ. ವಾಲೀಕಾರ, ಸಿದ್ದಪ್ಪ ಗುನ್ನಾಪೂರ, ಚನ್ನುಗೌಡ ಪಾಟೀಲ ಇದ್ದರು.
ಶ್ರೀಪತಿಗೌಡ ಬಿರಾದಾರ, ಹಣಮಂತ್ರಾಯಗೌಡ ಬಿರಾದಾರ, ವಿಜಯಲಕ್ಷಿö್ಮÃ ರೂಗಿಮಠ, ಅನಸೂಯಾ ಮದರಿ, ಶಾಮಲಾ ಬಗಲಿ, ಭೌರಮ್ಮ ನಾವಿ, ದೇವೆಂದ್ರ ಕುಂಬಾರ, ರಾಜಶೇಖರ ಯರಗಲ್, ನಾಗೇಶ ಹೆಗಡ್ಯಾಳ, ಧಾನಯ್ಯ ಮಠ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಜನಾಂಗದ ಶ್ರೇಯೋಭಿವೃದ್ದಿ ಮಿಸಲಿಟ್ಟಿರುವ ಹಣವನ್ನು ನುಂಗಿ ಭ್ರಷ್ಟಾಚಾರದಲ್ಲಿ ಮುಳುಗಿ ಚಾಂಪಿಯನ್ ಆಗಿದ್ದಾರೆ. ಕೆಲವೆ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಪತನವಾಗುತ್ತೆ ಎಂದು ಭವಿಷ್ಯ ನುಡಿದರು. ಅದಲ್ಲದೇ ನಾವು ಚುನಾವಣೆ ಎದುರಿಸಿ ಸರಕಾರ ರಚಿಸುತ್ತೆವೆ.
ಸಂಸದ ರಮೇಶ್ ಜಿಗಜಿಣಿಗಿ, ವಿಜಯಪುರ
ಇಂಡಿ: ಬುಧವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ನೂತನ ಸಂಸದರಿಗೆ ಸನ್ಮಾನ ಹಾಗೂ ಕಾರ್ಯಕಾರಣ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.

algolist: 0;
multi-frame: 1;
brp_mask:0;
brp_del_th:0.0000,0.0000;
brp_del_sen:0.0000,0.0000;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;



















