ಇಂಡಿ : ಡೆಂಗ್ಯೂ ಅತ್ಯಂತ ದೊಡ್ಡ ರೋಗವೇನಲ್ಲ. ಆದರೆ ಡೆಂಗ್ಯೂನ ಬಗ್ಗೆ ನರ್ಲಕ್ಷ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ನಮ್ಮ ಮನೆಯ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈ ಸೊಳ್ಳೆಗಳ ಮೇಲೆ ವಿಶೇಷ ನಿಗಾ ವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ತಿಳಿಸಿದರು.
ಬುಧವಾರ ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಡೆಂಗ್ಯು ನಿಯಂತ್ರಣ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಿನೇದಿನೆ ಉಲ್ಬಣಗೊಳ್ಳುತ್ತಿರುವ ಡೆಂಗ್ಯೂ ನಿಯಂತ್ರಣ ಹಾಗೂ ನರ್ಮೂಲಕ್ಕಾಗಿ ಜನಜಾಗೃತಿ ಹಾಗೂ ಸರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲಾಡಳಿತ, ತಾಲೂಕಾ ಆಡಳಿತ ಹಾಗೂ ಆರೋಗ್ಯ ಇಲಾಖೆಯು ಪ್ರತೀ ಶುಕ್ರವಾರ ಸೊಳ್ಳೆ ನರ್ಮೂಲನ ದಿನವಾಗಿ ವಿಭಿನ್ನ ಕರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ.
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗಿ ತಡೆಯ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ನಿರಂತರ ಆರೋಗ್ಯ ಶಿಕ್ಷಣದ ಮೂಲಕ ಜನರಿಗೆ ಅಧಿಕಾರಿಗಳು-ಸಿಬ್ಬಂದಿ ಜಾಗೃತಿ ಮೂಡಿ ಸುವಂತೆ ಕರೆ ನೀಡಿದರು.
ಈ ರ್ಷ ಸಮುದಾಯದೊಂದಿಗೆ ಸೇರಿ ಡೆಂಗ್ಯು ಜ್ವರವನ್ನು ನಿಯಂತ್ರಿಸೋಣ. ಲರ್ವಾ ರ್ವೇ ಮಾಡುವ ಬಗ್ಗೆ ಮಾತನಾಡಿದ ಅವರು, ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಮತ್ತು ಸ್ವಚ್ಚ ನೀರಿನಲ್ಲಿ ಲರ್ವಗಳು ಇರುತ್ತವೆ. ಅದಕ್ಕಾಗಿ ಮುಂಜಾಗೃತವಾಗಿ ಮಕ್ಕಳು ಮತ್ತು ವೃದ್ದರು ಸೊಳ್ಳೆ ಪರದೆ ಹಾಗೂ ಮಕ್ಕಳು ಮೈತುಂಬಾ ಬಟ್ಟೆ ಧರಿಸಲು ತಿಳಿಸಿದರು.
ಈಡೀಸ್ ಸೊಳ್ಳೆಗಳು ಮನೆಯಲ್ಲಿನ ಸ್ವಚ್ಚ ನೀರಿನ ಸಂಗ್ರಹಗಳಲ್ಲಿ ಉತ್ಪತ್ತಿಯಾಗುತ್ತದೆ. ಈ ಜ್ವರವನ್ನು ರಕ್ತ ಪರೀಕ್ಷೇಯಿಂದ ಮಾತ್ರ ಪತ್ತೆ ಹಚ್ಚಬಹುದು. ನಿಮ್ಮ ಮನೆಯಲ್ಲಿನ ತೊಟ್ಟಿ, ಬ್ಯಾರಲ, ಡ್ರಮ್ಗಳಲ್ಲಿ ಸಂಗ್ರಹ ಮಾಡಿದ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಸ್ವಚ್ಚಗೊಳಿಸಿ ಪುನಃ ನೀರು ತುಂಬಿಸಬೇಕು ಮತ್ತು ಎಲ್ಲಾ ನೀರಿನ ಶೇಖರಣೆಗಳನ್ನು ಮುಚ್ಚಿ ಇಡಲು ತಿಳಿಸಿದರು.
ಪುರಸಭೆ ಅವರಿಗೆ ಪಟ್ಟಣದ ಸ್ವಚ್ಚತೆ ಕಾಪಾಡಿಕೊಳ್ಳಲು ಸೂಚಿಸಿದರು. ಪ್ರತಿ ವರ್ಡಗಳಲ್ಲಿ ಫಾಗಿಂಗ್ ಮಾಡಬೇಕು, ವಾರದಲ್ಲಿ ೨ ದಿನ ಲರ್ವಾ ರ್ವೇ ಮಾಡಬೇಕು, ಸರ್ವಜನಿಕರಿಗೂ ಸ್ವಚ್ಚತೆ ಕಾಪಾಡಿಕೊಳ್ಳಲು ತಿಳಿಸಿದರು. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಚವಾಗಿಡಬೇಕು. ತಪ್ಪದೇ ರಾತ್ರಿ ವೇಳೆಯಲ್ಲಿ ಸೊಳ್ಳೆ ಪರದೆ. ಸೊಳ್ಳೆ ಬತ್ತಿಗಳನ್ನು ಉಪಯೋಗಿಸಲು ಸರ್ವಜನಿಕರಿಗೆ ಸೂಚಿಸಿದರು.
ಕಂದಾಯ ಉಪವಿಭಾಗಾಧಿಕಾರಿ ಅಭೀದ ಗದ್ಯಾಳ್ ಡೆಂಗ್ಯೂ ಬಗ್ಗೆ ಸರ್ವಜನಿಕರಿಗೆ ಸ್ವಚ್ಚತೆ ಕಾಪಾಡಿಕೊಳ್ಳಲು ಮನವಿ ಮಾಡಿಕೊಂಡರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ರ್ಚನಾ ಕುಲರ್ಣಿ ಮಾತನಾಡಿ, ಡೆಂಗಿ ರೋಗದ ಲಕ್ಷಣಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು. ಸದರಿ ಡೆಂಗಿ ಜ್ವರವು ವೈರಸನಿಂದ ಉಂಟಾಗುತ್ತದೆ. ಇದ್ದಕ್ಕಿಂದಂತೆಯೇ ತೀವ್ರ ಜ್ವರ ವೀಪರೀತ ತಲೆನೋವು ಕಣ್ಣಿನ ಹಿಂಬಾಗದಲ್ಲಿ ನೋವು ಮೌಂಸಖಂಡಗಳ ಮತ್ತು ಕೀಲುಗಳ ವೀಪರೀತ ನೋವು ವಾಕರಿಕೆ ವಾಂತಿ ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂರ್ಕಿಸಲು ಸೂಚಿಸಿದರು.
ಬೃಹತ ಡೆಂಗ್ಯೂ ಜನಜಾಗೃತಿ ಜಾಥಾ ಕರ್ಯಕ್ರಮವನ್ನು ಮಿನಿ ವಿಧಾನಸೌದ ದಿಂದ ಬಸವೇಶ್ವರ ರ್ಕಲ್, ಕುಂಬಾರ ಓಣ , ಶಾಂತೇಶ್ವರ ಓಣ , ರ್ಗಾ ಓಣ , ಮಹಾವೀರ ರ್ಕಲ್, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿಗೆ ತಲುಪಿತು.
ಜಾಥಾದಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿ ಹೆಚ್.ಕೆ. ಮಳಗೊಂಡ (ದೈಹಿಕ ಶಿಕ್ಷಕರು), ಪ್ರಕಾಶ ರಾಠೋಡ, ತಾಲ್ಲೂಕು ಪಂಚಾಯತ (ಎ.ಡಿ.ಪಿ.ಆರ್), ಪ್ಯಾರಾಮೆಡಿಕಲ್ ಕಾಲೇಜ ಉಪನ್ಯಾಸಕ ಮಹಾಂತೇಶ ಪಾಟೀಲ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಪುರಸಭೆಯ ಸಿಬ್ಬಂದಿಗಳು, ಪೌರಕರ್ಮಿಕರು, ಪ್ಯಾರಾಮೆಡಿಕಲ್ ಕಾಲೇಜ ವಿದ್ಯರ್ಥಿಗಳು, ಆಶಾ ಕರ್ಯರ್ತೆಯರು ಉಪಸ್ಥಿತರಿದ್ದರು.