ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಡಿಎಚ್ಒ ಬೇಟಿ, ಸಿಬ್ಬಂದಿಗಳಿಗೆ ಕ್ಲಾಸ್..!
ಇಂಡಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ
ಆರೋಗ್ಯ ಅಧಿಕಾರಿ ಬಸವರಾಜ್ ಹುಬ್ಬಳ್ಳಿ ಧಿಡೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಲ್ಲಿನ ವೈದ್ಯ,
ಸಿಬ್ಬಂದಿಗಳ ವಿರುಧ್ಧ ಹರಿಹಾಯ್ದರು. ಅವರು ಬರುವ ಪೂರ್ವದಲ್ಲಿಯೇ ಮುಖ್ಯ ವೈಜ್ಞಾಧಿಕಾರಿಗಳಿಗೆ ತಾವು ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರೂ ಸಹ ಹಲವು ಸಿಬ್ಬಂದಿಗಳು, ವೈದ್ಯರು ಗೈರು ಹಾಜರಾಗಿದ್ದನ್ನು ಕಂಡು ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲು ತಿಳಿಸಿದರು.
ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡ ಅವರು ಅಲ್ಲಿನ
ಮುಖ್ಯ ವೈದ್ಯಾಧಿಕಾರಿಗಳು ಹಾಗೂ ವೈದ್ಯರು,
ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು, ನೀವೆಲ್ಲ
ಬದಲಾಗಬೇಕು. ಸರಿಯಾಗಿ ನಿಮ್ಮ ನಿಮ್ಮ ಕಾರ್ಯ
ಮಾಡಬೇಕು. ಇಲ್ಲವಾದರೆ ಸೂಕ್ತ ಕ್ರಮ
ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ
ಕೊಟ್ಟರು. ಜಿಲ್ಲಾ ಆರೋಗ್ಯಾಧಿಕಾರಿಗಳು ಬರುತ್ತಿದ್ದರೂ
ಆಸ್ಪತ್ರೆಯಲ್ಲಿ ವಿದ್ಯುತ್ ಬಲ್ಬಗಳು ಉರಿಯದೇ ಕತ್ತಲು
ಆವರಿಸಿದ್ದನ್ನು ಕಂಡು ಅಲ್ಲಿನ ಸಿಬ್ಬಂದಿಗಳಿಗೆ ತರಾಟೆಗೆ
ತೆಗೆದುಕೊಂಡು ನಾಳೆ ಸಾಯಂಕಾಲದ ಒಳಗಾಗಿ ಇಲ್ಲಿ
ವಿದ್ಯುತ್ ದೀಪ ಹಾಕಿಸಬೇಕು ಎಂದು ತಿಳಿಸಿದರು.
ಅಧಿಕಾರಿಗಳು ಬಂದಾಗಲೂ ಆಸ್ಪತ್ರೆಯಲ್ಲಿ ವಿದ್ಯುತ್ ದೀಪ ಇರಲಿಲ್ಲ, ಡಯಾಲಿಸಿಸ್ ಕೋಣೆಯನ್ನು ಮುಚ್ಚಲಾಗಿತ್ತು,ಡಯಾಲಿಸಿಸ್ ಕೋಣೆ ತೆರೆಯಲು ಸುಮಾರು ಅರ್ಧ ಗಂಟೆಗಳ ಕಾಲ ಡಿಹೆಚ್ಓ ಕಾಯ್ದರು.
ಡಿಹೆಚ್ಓ ಮುಂದೆ ಆಸ್ಪತ್ರೆಯ ಸಮಸ್ಯೆಗಳನ್ನು
ತೆರೆದಿಟ್ಟ ಸಾರ್ವಜನಿಕರು: ಸಾರ್ವಜನಿಕರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಭೇಟಿ ಮಾಡಿ
ಅಲ್ಲಿನ ಅವ್ಯವಸ್ಥೆಗಳಾದ ಸ್ವಚ್ಛತೆ, ವಿದ್ಯುತ್
ಇಲ್ಲದಿರುವುದು, ಬಾಣಂತಿಯರಿಗೆ ಬಿಸಿ ನೀರಿಲ್ಲ, ಬಾಣಂತನದ ನಂತರ ಅವರನ್ನು ಅಡ್ಮಿಟ್ ಮಾಡಿಕೊಳ್ಳಲ್ಲ, ಅವರಿಗೆ ಊಟ ನೀಡಲಾಗುತ್ತಿಲ್ಲ, ಯೂಎಸ್ಜಿ ಮಷೀನ್ ಪ್ರಾರಂಭವಾಗಿಲ್ಲ,
ಆಸ್ಪತ್ರೆಗೆ ಕೆಲ ಸಿಬ್ಬಂದಿಗಳು ಕುಡಿದ ನಶೆಯಲ್ಲಿ ಬಂದು
ಕಾರ್ಯ ಮಾಡುತ್ತಾರೆ. ಸಿಬ್ಬಂದಿಗಳು ಸರಿಯಾದ
ಸಮಯಕ್ಕೆ ಬರುವುದಿಲ್ಲ ಎಂಬಿತ್ಯಾದಿ ಇತ್ಯಾದಿ
ಆರೋಪಗಳನ್ನು ಮಾಡಿದರು.vಆರೋಗ್ಯಧಿಕಾರಿಗಳು ಇನ್ನು 15 ದಿನಗಳ ಒಳಗಾಗಿ ಈ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಿ ಎಲ್ಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಾಗಿ ಬರವಸೆ ನೀಡಿದರು.
ಬುಧವಾರ ಡಯಾಲಿಸಸ್ ಚಿಕಿತ್ಸೆಗೆ ಬಂದ ಮಹಿಳೆಗೆ ಸಿಬ್ಬಂದಿಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ್ದು ಮಹಿಳೆ ಸಾವನ್ನಪ್ಪಿದ್ದು ಅದಕ್ಕೆ ಏನು ಕ್ರಮ ಕೈಗೊರ್ಳಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಈಗಾಗಲೆ ಈ ಕುರಿತು ದೂರು ದಾಖಲಾಗಿ ತನಿಖೆ ನಡೆಯುತ್ತಿದೆ. ಮುಂದೆ ಈ ರೀತಿಯಾಗದಂತೆ ನಿಗಾ ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಜೆ.ಎಂ. ಬೀಳಗಿ, ವೈದ್ಯರಾದ ವಿಪುಲ್ ಕೋಳೆಕರ್, ಅಮಿತ್ ಕೊಳೇಕರ್, ಜಗದೀಶ ಬಿರಾದಾರ, ವಿಕಾಸ ಸಿಂದಗಿ, ಸಂತೋಶ ಪವಾರ, ಶ್ರೀಮಂತ ತೋಳನೂರ, ಶಾಂತೇಶ ಹಿಪ್ಪರಗಿ, ಗಜಾಕೋಶ, ಶಿವಾಜಿ ಮಾನೆ, ಪ್ರವೀಣ ಕೆ, ಶಾಂತು ಹೊಸಮನಿ, ಗುರುರಾಜ ಪಾಟೀಲ, ಬಸವರಾಜ ಡವಳಗಿ ಸೇರಿದಂತೆ ಮತ್ತಿತರರು ಇದ್ದರು