ಶ್ರೀ ಸತ್ಯ ನಾರಾಯಣ ದೇವಸ್ಥಾನದಲ್ಲಿ ಶ್ರೀರಾಮನನ್ನು ಭಕ್ತಿ ಭಾವದಿಂದ ಪೂಜೆ..
ಇಂಡಿ: ಪಟ್ಟಣದ ಶ್ರೀ ಸತ್ಯ ನಾರಾಯಣ ದೇವಸ್ಥಾನದಲ್ಲಿ
ವಿಪ್ರ ಬಾಂಧವರೆಲ್ಲ ಸೇರಿಕೊಂಡು ಬೆಳಿಗ್ಗೆ 9:00
ಘಂಟೆಗೆ ಶ್ರೀರಾಮನ ಭವ್ಯವಾದ ಮೆರವಣಿಗೆಯೊಂದಿಗೆ ಭಜನೆ, ನೃತ್ಯ ಗೀತಾದಿಗಳೊಂದಿಗೆ, ಬಾಲರಾಮನ
ವೇಶಧಾರಿಗಳೊಂದಿಗೆ ರಾಮನಾಮ ಸಂಕೀರ್ತನೆ
ಮಾಡಿ, ಸಂಭ್ರಮಿಸಿದರು.
ನಂತರ ರಾಮನ ಮಹಿಮೆ ಮತ್ತು ರಾಮಾಯಣದ
ಅನೇಕ ದುಷ್ಠಾಂತಗಳನ್ನು ತಮ್ಮ ಪ್ರವಚನದ ಮೂಲಕ ಪಂಡಿತ ಸರ್ವೇಶಾಚಾರ್ಯ ಅಕಮಂಚಿಯವರು ರಾಮನಲ್ಲಿರುವ ಪಿತೃಭಕ್ತಿ ಹಾಗೂ ರಾಮರಾಜ್ಯದ ಕಲ್ಪನೆಯನ್ನು ತಿಳಿ ಹೇಳಿದರು. ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ಸಾಯಂಕಾಲ ದೀಪೋತ್ಸವದ ಮೂಲಕ ಶ್ರೀರಾಮನನ್ನು ಭಕ್ತಿ ಭಾವದಿಂದ ಪೂಜಿಸಿದರು.
ಇಂಡಿ: ಪಟ್ಟಣದ ಶ್ರೀ ಸತ್ಯ ನಾರಾಯಣ ದೇವಸ್ಥಾನದಲ್ಲಿ ವಿಪ್ರ ಸಮಾಜ ಬಾಂಧವರಿಂದ ಶ್ರೀರಾಮೋತ್ಸವ ನಿಮಿತ್ಯ ಪಂಡಿತ ಸರ್ವೇಶಾಚಾರ್ಯ ಅಕಮಂಚಿಯವರು ಪ್ರವಚನ ನೀಡಿದರು.
ಇಂಡಿ: ಪಟ್ಟಣದ ಶ್ರೀ ಸತ್ಯ ನಾರಾಯಣ ದೇವಸ್ಥಾನದಲ್ಲಿ ವಿಪ್ರ ಸಮಾಜ ಬಾಂಧವರಿಂದ ಶ್ರೀರಾಮೋತ್ಸವ ನಿಮಿತ್ಯ ಮಕ್ಕಳು ಬಾಲರಾಮನ ವೇಶದಲ್ಲಿ ಕಂಡಿದ್ದು ಹೀಗೆ.