ಇಂಡಿ : ಸುಮಾರು ೭೦ ವರ್ಷ ಈ ದೇಶದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಮಾಡಿ ಅನೇಕ ಅಭಿವೃದ್ಧಿ ಪರ ಹಾಗೂ ಅನೇಕ ಅವಶ್ಯಕ ಯೋಜನೆಗಳನ್ನು ರೂಪಿಸಿ ಜಾರಿಗೆ ಮಾಡಿದ ಇತಿಹಾಸ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಇದೆ. ಅದರಲ್ಲಿ ರಸ್ತೆಗಳು , ತಂತ್ರಜ್ಞಾನ ಹಾಗೂ ಪಂಚ ವಾರ್ಷಿಕ ಯೋಜನೆಗಳ ಜೊತೆಗೆ ಇನ್ನಿತರ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ತಲುಪಿಸುವ ಜವಾಬ್ದಾರಿಯುತ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಆದರೆ ಪ್ರಸ್ತುತ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ಪ್ರತಿ ಸಂಕಷ್ಟ ಪರಿಸ್ಥಿತಿಯಲ್ಲೂ ಕಾಂಗ್ರಸ್ ಪಕ್ಷಕ್ಕೆ ಕರ್ನಾಟಕ ರಾಜ್ಯ ಆಶ್ರಯನೀಡಿದೆ . ಕಾರ್ಯಕರ್ತರು ಪಕ್ಷದ ಜೀವಾಳ ಆಗಿದ್ದರಿಂದ ಭಾರತ ಜೋಡೊ ಪಾದಯಾತ್ರೆಗೆ ಯುವಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಭಾರತ ಜೋಡೊ ಪಾದಯಾತ್ರೆ ಪೂರ್ವಭಾವಿ ಸಭೆ ಮತ್ತು ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿರುವ ಶಾಸಕ ಯಶವಂತರಾಯಗೌಡ ಪಾಟೀಲ ನೇತೃತ್ವದಲ್ಲಿ ಇಂಡಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಜಾವೀದ ಮೋಮಿನ್ ಅವರಿಗೆ, ನಿಕಟ ಪೂರ್ವ ಅಧ್ಯಕ್ಷ ಇಲಿಯಾಸ್ ಬೊರಾಮಣಿ ಅವರಿಂದ ಪಕ್ಷದ ದ್ವಜ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಇಂಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಇಲಿಯಾಸ್ ಬೊರಾಮಣಿ, ನೂತನ ಅಧ್ಯಕ್ಷ ಜಾವಿದ ಮೋಮಿನ್ ಮತ್ತು ಬಸವರಾಜ ಕೊಕಟನೂರ ಮಾತಾನಾಡಿದರು. ಪಕ್ಷಕ್ಕಾಗಿ ದುಡಿದವರಿಗೆ ಒಳ್ಳೆಯ ಭವಿಷ್ಯವಿದೆ, ನಿಷ್ಠಾವಂತ ಪ್ರಾಮಾಣಿಕ ಸೇವೆಗೆ ಪಕ್ಷ ಒಳ್ಳೆಯ ಹುದ್ದೆ ಕೊಡುತ್ತದೆ. ಭಾರತದಲ್ಲಿ ಯುವ ಶಕ್ತಿ ದೊಡ್ಡ ಪ್ರಮಾಣದಲ್ಲಿದೆ. ಅಂತಹ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಕೊಂಡು ಪಕ್ಷ ಮತ್ತು ದೇಶ ಉಳಿಸಲು ಸಹಕಾರ ವಾಗುತ್ತದೆ ಎಂದು ಮಾತಾನಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಲ್ಲಮಗೌಡ ಪಾಟೀಲ್,ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಸಂಬಾಜಿ ಮಿಸಾಳೆ, ಅಣ್ಣಪ್ಪ ಬಿದರಕೋಟಿ, ಭೀಮಣ್ಣ ಕವಲಗಿ, ಅಬ್ಜಲ್ ಹವಾಲ್ದಾರ್, ಪ್ರಶಾಂತ್ ಕಾಳೆ, ಶ್ರೀಕಾಂತ್ ಕುಡಿಗನೂರ, ಮಂಜುನಾಥ್ ಕಾಮಗೊಂಡ, ಮಹಿಬೂಬ್ ಅರಬ, ಧರ್ಮರಾಜ ವಾಲಿಕಾರ, ಭೀಮಾಶಂಕರ ಮೂರಮನ, ಹರಿಶ್ಚಂದ್ರ ಪವಾರ ಇನ್ನೂ ಅನೇಕ ಮುಖಂಡರು ಉಪಸ್ಥಿತಿರು..