ಇಂಡಿ : ಇಂದು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ ಜನಪ್ರಿಯತೆಯಿಂದ ಕೂಡಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್! ಎನ್ನುವ ಘೋಷ ವಾಕ್ಯದಂತೆ ನಡೆಯುತ್ತಿದೆ ಮೋದಿ ಸರ್ಕಾರ. ಇಂಡಿಯ ಭಾಜಪ ಯುವ ಮುಖಂಡ ರಾಮಸಿಂಗ ಕನ್ನೂಳಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮದ್ಯಮವರ್ಗದ ಜನರ ಹಿತಕ್ಕಾಗಿ ಆದಾಯ ತೆರಿಗೆ ಮಿತಿಯನ್ನು ₹5 ಲಕ್ಷದಿಂದ ₹7 ಲಕ್ಷಕ್ಕೆ ಏರಿಸಿ ಬದ್ಧತೆ ಪ್ರದರ್ಶಿಸಿದೆ. ಯುವ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಿ ಯುವ ಕೌಶಲ್ಯ ಯೋಜನೆ ಅನುಷ್ಠಾನ. ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಪ್ರೋತ್ಸಾಹ, ರೈತರ ಕಲ್ಯಾಣ ಸಲುವಾಗಿ ಬಡ್ಡಿ ರಹಿತ ಕೃಷಿ ಸಾಲ ಮುಂದುವರಿಕೆ, ದೇಶದ ಭವ್ಯ ಪರಂಪರೆಯನ್ನು ವಿಶ್ವಕ್ಕೆ ಬಿಂಬಿಸುವ ಗುರಿ ಹೊಂದಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು.