ಇಂಡಿ : ಕನ್ನಡ ಭಾಷಿಕರು ಹಲವು ಪ್ರಾಂತದಲ್ಲಿ ಹರಿದು ಹಂಚಿ ಹೋಗಿದ್ದರು. ಅದನ್ನು ಒಗ್ಗೂಡಿಸಿದ ಸುದೀನ ಎಂದು ಡಾ. ರಾಜೇಶ ಕೋಳೆಕರ ಹೇಳಿದರು.
ಪಟ್ಟಣದ ಡಾ.ವಿಷ್ಣುವರ್ಧನ ವೃತ್ ದಲ್ಲಿ ವಿಎಸ್ಎಸ್ ಸೇನೆ ಸಂಘಟನೆ ಆಶ್ರಯದಲ್ಲಿ ನಡೆದ ೬೭ ನೇ
ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರೆವರಿಸಿ ಮಾತಾನಾಡಿದ ಅವರು, ನಮ್ಮ ಭಾಷೆ, ನೆಲ, ಜಲ ,ಗಡಿ ಗೌರವಿಸಬೇಕು ಎಂದು ಹೇಳಿದರು. ನಮ್ಮ ನಾಡು ಕಟ್ಟಲು ಹಲವಾರು ಜನರು ನಮ್ಮ ಹಿರಿಯರು ಅವರ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪೊಟೊ ಪೂಜೆ ನೆರೆವಿರಿಸಿದ ವಿ ಎಸ್ ಎಸ್ ಸೇನಾ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಪಿ. ವರ್ಧನ ಮಾತಾನಾಡಿದ ಅವರು, ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಹುಟ್ಟಿಗೆ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905 ರಲ್ಲಿ ಆರಂಭಿಸಿದರು. ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956ರ ನವೆಂಬರ್ 01 ರಂದು ರಾಜ್ಯಗಳನ್ನು ವಿಂಗಡಿಸಿದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುರಳ, ಶೀವು ಬಡಿಗೇರ, ಪ್ರದೀಪ ಪವಾರ, ಆರಕ್ಷಕ ಸಿಬ್ಬಂದಿ ಬಸರಗಿ, ಪತ್ರಕರ್ತ ಶರಣು ಕಾಂಬಳೆ, ಶಂಕರ್ ಜಮಾದಾರ್ ಇನ್ನೂ ಅನೇಕರು ಉಪಸ್ಥಿತರಿದ್ದರು.