ವಿಜಯ ಸಂಕಲ್ಪ ಯಾತ್ರೆಗೆ ಹತ್ತು ಸಾವಿರ ಕಾರ್ಯಕರ್ತರು..!
ವಿಜಯ ಸಂಕಲ್ಪ ಹೊಸ ಇತಿಹಾಸವಾಗಲಿದೆ..!
ಮಾರ್ಚ್ 20 ರಂದು ಹತ್ತು ಸಾವಿರ ಜನ…!
ಇಂಡಿ : ಸುಮಾರು ಹತ್ತು ಸಾವಿರ ಕಾರ್ಯಕರ್ತರಿಂದ ವಿಜಯ ಸಂಕಲ್ಪ ಅಭಿಯಾನದ ಬೃಹತ್ ಪ್ರಮಾಣದ ರಥಯಾತ್ರೆ ಪಟ್ಟಣದಲ್ಲಿ ಮಾರ್ಚ್ 20 ರಂದು ನಡೆಯಲಿದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಶನಿವಾರ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು,ಮಾರ್ಚ 20, ಸಾಯಂಕಾಲ 4 ಘಂಟೆಗೆ ವಿಜಯ ಸಂಕಲ್ಪದ ರಥಯಾತ್ರೆ ಆಗಮಿಸಿಲಿದೆ. ನಗರದಲ್ಲಿ ಅಲಂಕಾರದೊಂದಿಗೆ ರಥಯಾತ್ರೆ ಸೇವಲಾಲ ವೃತದಿಂದ ಪ್ರಾರಂಭಸಿ ಬಸವೇಶ್ವರ ವೃತ್, ಅಂಬೇಡ್ಕರ್ ವೃತ್, ಮಹಾವೀರ ವೃತ್ ಮರಳಿ ಡಿವಾಯ್ಎಸ್ಪಿ ಕಛೇರಿಯ ಮಾರ್ಗವಾಗಿ ಬಸವೇಶ್ವರ ವೃತ್ ಕ್ಕೆ ಆಗಮಿಸಿ ಬಹಿರಂಗ ಸಭೆಯಲ್ಲಿ ಸಚಿವರು ಮಾತಾನಾಡಲಿದ್ದಾರೆ ಎಂದು ಹೇಳಿದರು. ಇನ್ನೂ ಕಾರ್ಯಕ್ರಮಕ್ಕೆ ಜಲ ಸಂಪನ್ಮೂಲ ಸಚಿವರು ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಮಾಜಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ, ಸಂಸದ ರಮೇಶ ಜಿಗಜಿಣಿಗಿ, ಶಾಸಕ ಬಸನಗೌಡ ಯತ್ನಾಳ ಜಿಲ್ಲೆಯ ಎಲ್ಲಾ ಶಾಸಕರು ಇನ್ನೂ ಪಕ್ಷದ ಮುಖಂಡರು ಭಾಗವಹಿಸಲ್ಲಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ರೈತ ಮೂರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಅನಿಲ ಜಮಾದಾರ, ಎಸ್ ಎ ಡೊಮನಾಳ, ಶ್ರೀಶೈಲಗೌಡ ಬಿರಾದಾರ, ಹಣಮಂತರಾಯಗೌಡ ಪಾಟೀಲ, ಯಲ್ಲಪ್ಪ ಹದರಿ, ಶಾಂತು ಕಂಬಾರ, ರಾಜಶೇಖರ ಯರಗಲ್ ಉಪಸ್ಥಿತರಿದ್ದರು.