ಇಂಡಿ : ಮುಸ್ಲಿಂ ಸಮುದಾಯದವರು ಮೋದಿ ನಾಯಕತ್ವನ್ನ ಒಪ್ಪಿಕೊಳ್ಳುತ್ತಿದ್ದಾರೆ. ಸ್ವಯಂ ಸೇವಕ ಮತ್ತು ಸಂಘ ಪರಿವಾರದ ಕಲ್ಪನೆಯಂತೆ ಕಾಶ್ಮೀರಕ್ಕೆ ಇರುವ ವಿಶೇಷ ವಿಧಿ ತೆಗೆಯುವ, ರಾಮ ಮಂದಿರ ಕಟ್ಟವ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಂತೆ ನಡೆದಿದೆ. ಆದರೆ ಸಮಾನ ನಾಗರಿಕ ಸಂಹಿತೆ ಮತ್ತು ಅಖಂಡ ಭಾರತದ ಕನಸ್ಸು ಹಾಗೇ ಉಳಿದಿದೆ ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಕುಂಬಾರ ಒಣಿಯಲ್ಲಿ ಬಾಜಪ ಪಕ್ಷದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತಾನಾಡಿದರು.
ಪಾಕಿಸ್ತಾನದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಅಲ್ಲಿ ಏನು ಉಳಿದಿಲ್ಲ. ಅಲ್ಲಿಯ ಜನರು ಹಸಿವಿನಿಂದ ಕಷ್ಟ ಪಡುತ್ತಿದ್ದಾರೆ. ಇಂದು ಭಾರತದ ಜೊತೆಗೆ ವೈರತ್ವ ಮಾಡುವುದಿಲ್ಲ ಸಹಬಾಳ್ವೆಯಿಂದ ಇರೋಣ ಅಂತಾ ಪಾಕ್ ಪ್ರಧಾನಿ ಅವರೇ ಹೇಳುತ್ತಿದ್ದಾರೆ. ಈಗ ಮುಸ್ಲಿಂ ಸಮುದಾಯದ ನಾಯಕ ಮುಖಂಡರು ನರೇಂದ್ರ ಮೋದಿ ಅವರ ನಾಯಕತ್ವ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಬಾಜಪ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಅನೀಲ ಜಮಾದಾರ, ಪುಟ್ಟುಗೌಡ ಪಾಟೀಲ, ಶಂಕರಗೌಡ ಪಾಟೀಲ (ಡೊಮನಾಳ) ಸಿದ್ಧಲಿಂಗ ಹಂಜಗಿ, ಶೀಲವಂತ ಉಮರಾಣಿ, ಯಲ್ಲಪ್ಪ ಹದರಿ, ಸೋಮನಾಥ ನಿಂಬರಗಿಮಠ ಮಾದ್ಯಮ ಪ್ರತಿನಿಧಿ ರಾಜಶೇಖರ ಯರಗಲ್ ಹಾಗೂ ಇನ್ನೂ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.