ಇಂಡಿ : ನಿಂಬೆ ನಾಡಿನಲ್ಲಿ ಬಿಜೆಪಿ ಸರಕಾರ ಅನೇಕ ಅಭಿವೃದ್ಧಿ ಪರ ಕೆಲಸ ಮಾಡಿದೆ. ಅದರಲ್ಲೂ ತಾಲೂಕಿನ ಮಿನಿ ವಿಧಾನಸೌದ, ಪ್ರವಾಸಿ ಮಂದಿರ, ಕ್ರಿಡಾಂಗಣ, ಬಿಜೆಪಿ ಸರಕಾರ ಕಾಲಘಟ್ಟದಲ್ಲಿ ಮಂಜೂರು ಯಾಗಿದ್ದು, ಸುಮ್ನೆ ಇಂದ್ರಲೋಕ ಚಂದ್ರಲೋಕ ತಂದಿನಿ ಅಂತಾ ಹೇಳೊದು ಸರಿನಾ ! ಶಾಸಕರು ಮಾಡಿದ್ದು ಅದು ಒಂದೇ ಭೀಮಾಶಂಕರ ಸಕ್ಕರೆ ಕಾರ್ಖಾನೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಕರಾರು ವಾಕಾಗಿ ಮಾತಾನಾಡಿದರು.
ಹೌದು ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಕೇಂದ್ರ ರಾಜ್ಯ ಸರಕಾರಗಳ ಸಾಧನೆ ಮತ್ತು ಎಪಿಜೆ ಅಬ್ದುಲ್ ಕಲಾಂ ರ ಜನ್ಮ ದಿನ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮಲ್ಲಿ ವಿಶೇಷವಾಗಿ ಮೋದಿ ಸರಕಾರದ ದೂರದೃಷ್ಟಿಯ ಯೋಜನೆಗಳ ಬಗ್ಗೆ ಹೇಳಿದರು.
ಇನ್ನೇನು ೨೦೨೩ ರ ಚುನಾವಣೆ ಬರುತ್ತಿದೆ. ಹಣ, ಹೆಂಡ, ಜಾತಿಯ ಅಜೆಂಡ್ ತೆಗೆದುಕೊಂಡು ಕೆಲವರು ಬರುತ್ತಾರೆ. ಅವರ ಬಗ್ಗೆ ಎಚ್ಚರಿಕೆ ವಿರಲಿ. ನಮ್ಮ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸುಮಾರು ೭೦ ವರ್ಷ ಆಳ್ವಿಕೆ ಮಾಡಿದೆ. ಆದರೆ ಬದಲಾವಣೆ ಕಂಡಿದ್ದೇನು ಜಾತಿ ಧರ್ಮದ ಹೆಸರಲ್ಲಿ ಮತ ಬ್ಯಾಂಕ್ ಮಾಡಿದ್ದು ಮಾತ್ರ, ಅಭಿವೃದ್ಧಿಶೂನ್ಯ ಎಂದರು. ಇನ್ನೊಂದು ಪಕ್ಷವಿದೆ ಕರ್ನಾಟಕದಲ್ಲಿ ಅದು ಮನೆತನಕ್ಕೆ ಸಿಮೀತವಾಗಿದೆ. ದೇಶದಲ್ಲಿ, ರಾಜ್ಯದಲ್ಲಿ ಬದಲಾವಣೆ ಕಾಣಲು ಹೇಗೆ ಸಾಧ್ಯ ಎಂದರು.
ಇಂದು ಬಿಜೆಪಿ ಸರಕಾರ ಅದ್ಬುತ ಯೋಜನೆಗಳನ್ನ ತಂದಿದೆ. ಜೆಜೆಎಮ್ ಯೋಜನೆ ಮೂಲಕ ಕುಡಿಯುವ ನೀರು, ಜೀರೈತರಿಗೆ ಬೆಂಬಲ ಬೆಲೆ, ರೈತರ ಖಾತೆ ನೇರವಾಗಿ ನಗದು ಹಾಕುವುದು, ಎಸಿ ಎಸ್ಟಿ ಮೀಸಲಾತಿ ಅನೇಕ ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ಸರಕಾರ ಕೊಟ್ಟಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ದೇವೇಂದ್ರ ಕುಂಬಾರ, ಬಾಳು ಮುಳಜಿ, ಸೋಮಶೇಖರ್ ದೇವರ, ಯಂಟಮನ, ಕೆ ಎಸ್ ಪಾಟೀಲ, ಶರಣಗೌಡ ಬಂಡಿ, ಆರ್ ಡಿ ಪಾಟೀಲ, ಶ್ರೀಶೈಲ ಮದರಿ, ಮಲ್ಲನಗೌಡ ಬಿರಾದಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.