ವಿಜಯಪುರ : ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ಮತ್ತು ರಕ್ತಹೀನತೆಯ ಪ್ರಮಾಣವು ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಮಕ್ಕಳೊಡನೆ ಮತ್ತು ಗರ್ಭಿಣಿ ಬಾಣಂತಿಯರೊಡನೆ ಹೆಚ್ಚಿನ ಒಡನಾಟ ಇರಬೇಕಾಗಿದೆ. ಆದರೆ ಇಂದು ಚುನಾವಣೆಯ ಬಿ ಎಲ್ ಓ ಮತ್ತು ಐ ಸಿ ಐ ಡಿ ಎಸ್ ಯೇತರ , ಇಲಾಖೇತರ ಹಾಗೂ ದಾಖಲೆಗಳನ್ನು ನಿರ್ವಹಿಸುವಲ್ಲಿಯೇ ಸಮಯ, ಶ್ರಮ ಪಡಬೇಕಾಗಿದೆ. ಹಾಗಾಗಿ ಮಕ್ಕಳ ಮತ್ತು ಗರ್ಭಿಣಿಯರ ಬಗ್ಗೆ ಕಾಳಜಿಯವಹಿಸಲು ತೊಂದರೆ ಯಾಗುತ್ತಿದೆ. ಹಾಗಾಗಿ ಅಂಗನವಾಡಿ ಕಾರ್ಯಕರ್ತರನ್ನು ಚುನಾವಣೆ ಕಾರ್ಯದ ಬಿಎಲ್ ಓ ದಿಂದ ಕೈ ಬಿಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಉಪ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅವರಿಗೆ ಮನವಿ ಸಲ್ಲಿಸಿದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ 6 ವರ್ಷದೊಳಗಿನ ಮಕ್ಕಳನ್ನು ಮುಂದಿನ ಪ್ರಶ್ನೆಗಳನ್ನಾಗಿ ರೂಪಿಸುವ ಅತ್ಯಂತ ಮಹತ್ತರದ ಉದ್ದೇಶವನ್ನು ಇಟ್ಟುಕೊಂಡು ಐ.ಸಿ.ಡಿ.ಎಸ್, ಯೋಜನೆ ಪ್ರಾರಂಭವಾಗಿದೆ. 6 ವರ್ಷದೊಳಗಿನ ಮಕ್ಕಳ ಮಾನಸಿಕ ಮಕ್ಕಳ 80% ದೈಹಿಕ ಬೆಳವಣಿಗೆ 40 ಆಗಿರುತ್ತದೆ. ಈ ಹಂತದಲ್ಲಿ ಮಗುವಿಗೆ ಬೇಕಾದ ಆಹಾರ ಆರೋಗ್ಯ ಮತ್ತು ಶಿಕ್ಷಣವನ್ನು ಕೊಡಲಿಕ್ಕಾಗಿ ಪ್ರಾರಂಭಿಸಲಾಗಿದೆ.
ಈಗಾಗಲೇ ರಾಜ್ಯದಲ್ಲಿ 2022-23ರಲ್ಲಿ ಲಕ್ಷ ಫಲಾನುಭವಿಗಳಿದ್ದು, 2023-24 ರಲ್ಲಿ 48 ಲಕ್ಷಕ್ಕೆ ಇಳಿದಿದೆ. ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಸಿಗುವುದಿಲ್ಲ. ಕಾರ್ಯಕರ್ತರು ತಮ್ಮ ಐ.ಸಿ.ಡಿ.ಎಸ್ ಯೇತರ ಮತ್ತು ಇಲಾಖೇತರ ಯೋಜನೆಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ ಎಂಬ ದೂರು ಸಾಮನ್ಯ ವಾಗಿರುತ್ತದೆ. ಮಾತ್ರವಲ್ಲದೇ ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ಮತ್ತು ರಕ್ತಹೀನತೆಯ ಪ್ರಮಾಣವು ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತೆ, ಮಕ್ಕಳೊಡನೆ ಮತ್ತು ಗರ್ಭಿಣಿ, ಬಾಣಂತಿಯರೊಡನೆ ಹೆಚ್ಚಿನ ಒಡನಾಟ ಬೇಕಿದೆ. ಆದರೆ ದಾಖಲೆಗಳನ್ನು ನಿರ್ವಹಿಸುವ ತಾಂತ್ರಿಕ ಕೆಲಸಗಳೇ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡಲು ಆಗುತ್ತಿಲ್ಲ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಬರೆಯಲಾಗಿದೆ. ಆದರೂ ಹೆಚ್ಚುವರಿ ಕೆಲಸಗಳು ನಿಂತಿಲ್ಲ, ಆದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಐ.ಸಿ.ಡಿ.ಎಸ್, ಯೋಜನೆಯ ಉದ್ದೇಶಗಳನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಡಬೇಕು. ಮತ್ತು ಕೇಂದ್ರ ಸರ್ಕಾರದ ಇಲಾಖಾ ಸಚಿವರ ಮೂಲಕ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕು. ಬಿ.ಎಲ್.ಓ. ಕಾರ್ಯದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸುನಂದಾ ನಾಯಕ ಮತ್ತು ಪ. ಕಾರ್ಯದರ್ಶಿ ಅಶ್ವೀನಿ ತಳವಾರ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಸೇರಿ ಮನವಿ ಸಲ್ಲಿಸಿದರು.