ಲಿಂಗಸೂಗೂರು: ವರದಕ್ಷಿಣೆಗಾಗಿ ಹೆಂಡತಿಯನ್ನು ಗಂಡ ಹಾಗೂ ಗಂಡನ ಕುಟುಂಬಸ್ಥರು ಹತ್ಯೆಗೈದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾಲಿಂಗಸುಗೂರು ಗ್ರಾಮದಲ್ಲಿ ನಡೆದಿದೆ. ಚೈತ್ರಾ ಕುಪ್ಪಣ್ಣ ಭೂಪುರದವರ ಹತ್ಯೆಗೈಯಾಗಿರುವ ಗೃಹಿಣಿ. ಇನ್ನು ಗಂಡ ಕುಪ್ಪಣ್ಣ ಭೂಪುರದವರ, ಕುಪ್ಪಮ್ಮ ಭೂಪುರದವರ, ನಾಗಪ್ಪ ಭೂಪುರದವರ, ನಿರುಪಾದಿ ಭೂಪುರದವರ, ಮಲ್ಲಪ್ಪ ಭೂಪುರದವರ, ನಾಗಪ್ಪ ಭೂಪುರದವರ ಹತ್ಯೆಗೈದಿರುವ ಆರೋಪಿಗಳು. ಇನ್ನು ಗಂಡ ಕುಪ್ಪಣ್ಣ ಕಳೆದ ನಾಲ್ಕು ತಿಂಗಳಿಂದ ಚೈತ್ರಾ ಜೊತೆಗೆ ಅನ್ಯೋನ್ಯವಾಗಿ ಸಂಸಾರ ನಡೆಸಿ, ಬಳಿಕ ವರದಕ್ಷಿಣೆ ತರುವಂತೆ ಮಾನಸಿಕ, ದೈಹಿಕವಾಗಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಇನ್ನು ಚೈತ್ರಾನ್ನು ಹತ್ಯೆಗೈದು ಬಳಿಕ ನೇಣಿಗೆ ಶರಣಾಗಿರುವಂತೆ ಬಿಂಬಿಸಿದ್ದಾರೆ. ತನಿಖಾನಂತರ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. ಈ ಕುರಿತು ಲಿಂಗಸೂಗುರು ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.