ಅಫಜಲಪುರ: ಕಳೆದೆರಡು ದಿನಗಳಿಂದ ಜೋರಾಗಿ ಗಾಳಿ ಬೀಸಿದ ಪರಿಣಾಮವಾಗಿ ಜಮೀನಿನಲ್ಲಿ ಬೆಳೆದ ಬಾಳೆ ನಾಶವಾದ ಘಟನೆ ನಡೆದಿದೆ. ತಾಲ್ಲೂಕಿನ ಚಿಂಚೋಳಿ ಗ್ರಾಮದ ಶಿವಶಂಕರ ಮದರಿ ಯವರ ಜಮೀನಿನಲ್ಲಿ ಬೆಳೆದ ಮೂರು ಎಕರೆ ಬಾಳೆ ಗಾಳಿ ಮಳೆಗೆ ನೆಲಕಚ್ಚಿದೆ.
ಬಾಳೆ ನೆಲಕ್ಕುರಳಿದ್ದನ್ನು ಕಂಡು ರೈತ ಕಂಗಾಲಾಗಿದ್ದಾನೆ. ಇನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆ ಸಂಘಟನೆ ಪದಾಧಿಕಾರಿಗಳು ಅಫಜಲಪುರ ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಬಾರಿ ಗಾಳಿ ಇರುವುದರಿಂದ ಬಾಳಿಗಿಡಗಳು ಬಿದ್ದು ರೈತರಿಗೆ ನಷ್ಟ ವಾಗಿದೆ.
ಕೂಡಲೆ ತೋಟಗಾರಿಕೆ A.D ಮತ್ತು A.H.O ಸರ್ವೇ ನಡೆಸಿ ತಸಿಲ್ದಾರರಿಗೆ ವರದಿ ನೀಡಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೊರಟ ಮಾಡಲಾಗುವುದು ಎಂದು ಹಸಿರು ಸೇನೆ ಅಧ್ಯಕ್ಷ ಮಾಹಾಂತೇಶ ಎಸ್ ಜಮಾದಾರ ಆಗ್ರಹಿಸಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.