ಲಿಂಗಸೂಗೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ದೊಂಬಾರಾಟ ಶುರು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ್ ಹೇಳಿದರು.
ತಾಲೂಕಿನ ಮುದಗಲ್ ಪಟ್ಟಣದ ಪುರಸಭೆಯ ರಂಗ ಮಂದಿರದ ಆವರಣದಲ್ಲಿ ನಡೆದ ಭೂತ್ ವಿಜಯಾ ಅಭಿಯಾನದಲ್ಲಿ ಮಾತನಾಡಿದ ಅವರು ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ 30 ಗ್ರಾಂ. ಪಂಚಾಯತ್ಗಳ ಪೈಕಿ 29 ಗ್ರಾ.ಪಂ.ಗಳಲ್ಲಿ ಭೂತ್ ವಿಜಯ ಅಭಿಯಾನವನ್ನು ಮಾಡಿದ್ದೇವೆ. ಅಲ್ಲದೆ ಲಿಂಗಸೂಗೂರು ಹಾಗೂ ಹಟ್ಟಿ ಪಟ್ಟಣಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ಮಾಡಿದ್ದೇವೆ.
ಮಾನಪ್ಪ ವಜ್ಜಲ್ ರವರು 10 ವರ್ಷಗಳಲ್ಲಿ ಮಾಡಿದ ಅಭಿವೃಧ್ಧಿ ಕಾರ್ಯಗಳನ್ನು
ಮುಂದಿಟ್ಟುಕೊಂಡು ನಾವು ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತೇವೆ. ಚುನಾವಣೆಯಲ್ಲಿ ಗೆಲುವು ನಮ್ಮದಾಗಲಿದೆ.
ಜೆಡಿಎಸ್ನ ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ ಜನರಿಗೆ ಎಮೋಶನಲ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಸಿದ್ದು ಬಂಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 6 ಕ್ವಾರಿಗಳನ್ನು ಲೀಜ್ಗೆ ಪಡೆದುಕೊಂಡು ಮರೆಯುತ್ತಿದ್ದಾರೆ. ಆದರೆ ಕ್ಷೇತ್ರಕ್ಕೆ ಸಿದ್ದು ಬಂಡಿ ಕೊಡುಗೆ ಶೂನ್ಯ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ಕಾಂಗ್ರೆಸ್ನವರು 600 ಕಿ.ಮೀ. ನಿಂದ ಬಂದು ಪರಿವರ್ತನಾ ರ್ಯಾಲಿ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಮೂರು ಬಣಗಳಿವೆ. ಆ ಬಣಗಳ ನಾಯಕರಲ್ಲಿ ಬಡಿದಾಟ ನಡೆದಿದೆೆ.
ಮುದಗಲ್ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಶಾಸಕ ಡಿ.ಎಸ್.ಹೂಲಗೇರಿ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ. ಇನ್ನು ಶಾಸಕರು ಮುದಗಲ್ ಮುಖ್ಯ ರಸ್ತೆಯ ಅಗಲಿಕರಣದಲ್ಲಿ ಶ್ರೀಮಂತರಿಗೊಂದು ಬಡವರಿಗೊಂದು ತಾರತಮ್ಯ ಮಾಡಿ 50 ಲಕ್ಷ ರೂ ಲಂಚ ಪಡೆದು ಕಳಪೆ ಕಾಮಗಾರಿಗೆ ಕುಮ್ಮಕ್ಕು ನೀದಿದ್ದಾರೆ. ಅಲ್ಲದೆ ಮುದಗಲ್ ಪಟ್ಟಣಕ್ಕೆ ಶಾಸಕರ ಕೊಡುಗೆ ಏನೂ ಇಲ್ಲ ಎಂದು ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಡಳಿತದಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷ 150 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಗದ್ದುಗೆ ಏರುಲಿದೆ ಎಂದರು.