ಇಂಡಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕಾನೂನು ಬದ್ದವಾಗಿ ಶೇ ೧೦% ರಷ್ಟು ಶುಲ್ಕವನ್ನು ಹೆಚ್ಚಳ ಮಾಡಬೇಕಾಗಿತ್ತು. ಆದರೆ ಯಾವುದೇ ಪರಿಮಿತಿ ಅನುಸರಿಸದೇ ನಿಗದಿತಕ್ಕಿಂತಲೂ ಶುಲ್ಕ ಹೆಚ್ಚಳ ಮಾಡಿದ್ದು ನೂರಾರು ಬಡ ವಿಧ್ಯಾರ್ಥಿಗಳಿಗೆ ಸಮಸ್ಯೆ ಯಾಗುತ್ತಿದೆ. ಕೂಡಲೇ ಅಧಿಕ ಶುಲ್ಕವನ್ನು ಖಡಿತಗೊಳಿಸಲು ಆಗ್ರಹಿಸಿ ಕಂದಾಯ ಇಲಾಖೆಯ ಶಿರಸ್ತೆದಾರ ಎಸ್.ಆರ್ ಮುಜಗೊಂಡ ಅವರಿಗೆ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ತ್ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಅಡಳಿತ ಸೌಧಕ್ಕೆ ತೆರಳಿ ಮನವಿ ಸಲ್ಲಿಸಿ ತದನಂತರ ಮಾತಾನಾಡಿದ ನಗರ ಕಾರ್ಯದರ್ಶಿ ಪ್ರಪುಲ್ ಕಟ್ಟಿಮನಿ, ವಿಟಿಯು ರಾಜ್ಯ ಮಟ್ಟದ ವಿಶ್ವವಿದ್ಯಾಲಯವಾಗಿದ್ದು ಲಕ್ಷಾಂತರ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ನೀಡಿದೆ. ಆದರೆ ವಿಟಿಯು ಎಲ್ಲಾ ವಿಭಾಗದಲ್ಲಿ ನೂತನವಾಗಿ ಶುಲ್ಕವನ್ನು ಹೆಚ್ಚಳ ಮಾಡಿದೆ. ಇಂಜಿನಿಯರಿಂಗ್ ಪದವಿ, ಸ್ನಾತಕೋತ್ತರ ಪದವಿ ಜೊತೆಗೆ ಪರೀಕ್ಷಾ ಶುಲ್ಕವನ್ನು ಶೇ ೨೫%, ಹೆಚ್ಚಳ ಮಾಡಿದೆ. ಇನ್ನೂ ಅಂಕಪಟ್ಟಿ ಶುಲ್ಕವನ್ನು ಶೇ ೧೦೦%, ಡಿಗ್ರಿ ಸರ್ಟಿಫಿಕೇಟ್ ನೀಡಲು ಶೇ ೫೦% ರಷ್ಟು ಹೆಚ್ಚಳ ಮಾಡಿದ್ದು ವಿಧ್ಯಾರ್ಥಿಗಳಿಗೆ ತುಂಬಾ ಕಷ್ಟಕರವಾಗಿದೆ. ಈಗಾಗಲೇ ಕಳೆದ ಎರಡು ವರ್ಷಗಳ ಹಿಂದೆ ಕೊವಿಡ್ ಎಂಬ ಮಹಾಮಾರಕ ರೋಗ ವಿವಿಧ ಕ್ಷೇತ್ರದ ಜೊತೆಗೆ ಶಿಕ್ಷಣ ಕ್ಷೇತ್ರ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಆದರೆ ಇಂತಹ ಕೆಟ್ಟ ಸಂದರ್ಭದಲ್ಲಿಯೂ ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಶುಲ್ಕವನ್ನು ನಿಗದಿತ 10 % ಗಿಂತ ಅಧಿಕವಾಗಿ ಏರಿಸಿರುವ VTU ವಿಶ್ವ ವಿದ್ಯಾನಿಲಯದ ನಡೆಯ ವಿರುದ್ಧ ಖಂಡಿನಿಯ ಎಂದರು.
ಈ ಸಂದರ್ಭದಲ್ಲಿ ಸಚೀನ ದಾನಗೊಂಡ, ಸಮರ್ಥ ಗಾಯಕವಾಡ, ಸಚೀನ ಪವಾರ, ಪ್ರಜ್ವಲ್ ಬೀಸೆ, ಮಹದೇವ ಸಲಗೊಂಡ, ಈರಣ್ಣ ಸಿಂದಗಿ, ಗಣೇಶ ಹಂಜಗಿ, ರವಿ ನೀರವಣಶೆಟ್ಟಿ, ದರ್ಶನ್ ತೋಳನೂರ ಉಪಸ್ಥಿತರಿದ್ದರು.