ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪುರಸಭೆ ಕಾರ್ಯಾಲಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ರವರ ಭಾವಚಿತ್ರಕ್ಕೆ ಪುರಸಭೆ ಸಿಬ್ಬಂದಿ ಚನ್ನಮ್ಮ ರವರು ಹೂ ಮಾಲೆ ಹಾಕಿ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಜಯಂತಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷರಾದ ಶಿವನಾಗಪ್ಪ ಬಡುಕುರಿ, ಮುಖ್ಯಾಧಿಕಾರಿ ಮರಿಲಿಂಗಪ್ಪ , ಪುರಸಭೆ ಸದಸ್ಯ ದುರುಗಪ್ಪ ಕಟ್ಟಿಮನಿ, ಬಾಬು ಉಪ್ಪಾರ, ಹನುಮಂತ ವಾಲ್ಮೀಕಿ, ಮುಖಂಡ ಸೈಯದ್ ಸಾಬ್, ಮಹೆಬೂಬ್ ಬಾರಿಗಿಡ, ನಾಗರಾಜ್ ತಳವಾರ, ಹುಸೇನ್ ಅಲಿ, ಪುರಸಭೆ ಸಿಬ್ಬಂದಿ ನಿಸಾರ್ ಅಹಮದ್, ಮಲ್ಲಿಕಾರ್ಜುನ, ಆರೀಫಾವುನಿಸಾ, ಕುಪ್ಪಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.