ಇಂಡಿ: ಕರ್ನಾಟಕರತ್ನ ಡಾ. ಪುನೀತ್ ರಾಜಕುಮಾರ ಅನಾಥ ಆಶ್ರಮ ಹಾಗೂ ವೃದ್ಧಾಶ್ರಮ ಸಮೀತಿ ಹಂಜಗಿ ಎಲ್.ಟಿ. ಇವರ ಆಶ್ರಯದಲ್ಲಿ ಹಂಜಗಿ ಗ್ರಾಮದಲ್ಲಿ, ಬಡ ನಿರ್ಗತಿಕರಿಗಾಗಿ ವೃದ್ಧಾಶ್ರಮವನ್ನು ಹಂಜಗಿ ಎಲ್ಲ್.ಟಿ.ಯಲ್ಲಿ ಸಂಘಟನೆಯ ಅಧ್ಯಕ್ಷರಾದ ಗಣಪತಿ ರಾಠೋಡ ರವರ ನಿರ್ಧಾರದಂತೆ ಇಂದು ಜೆಡಿಎಸ್ ಮುಖಂಡರಾದ ಬಿ ಡಿ.ಪಾಟೀಲರ ಹಸ್ತದಿಂದ ಭೂಮಿ ಪೂಜೆ ನೆರವೇರಿಸಿದರು.
ನಂತರ ಬಿ ಡಿ ಪಾಟೀಲರು ಮಾತನಾಡಿ ಬಡ ನಿರ್ಗತಿಕ ಜನರಿಗೆ ತಾಲೂಕಿನಲ್ಲಿ ಡಾ ಪುನೀತ್ ರಾಜಕುಮಾರ ಅಭಿಮಾನಿಗಳ ಸಮಿತಿಯ ಅಡಿಯಲ್ಲಿ ಹಂಜಗಿ ಗ್ರಾಮದಲ್ಲಿ ವೃದ್ಧಾಶ್ರಮ ಸ್ಥಾಪನೆ ಮಾಡಿ ಅನಾಥ, ಬಡ ವಯಸ್ಸಾದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಮಿತಿ ಕೈಗೊಂಡ ನಿರ್ಧಾರ ಸ್ವಾಗತಾರ್ಹ ಎಂದು ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಪ್ರಕಾಶ ಮಹಾರಾಜರು ವಹಿಸಿದ್ದರು. ಅತಿಥಿಗಳಾಗಿ ಗ್ರಾ. ಪಂಚಾಯತ ಅಧ್ಯಕ್ಷರಾದ ಶ್ರೀಮತಿ ರೀಯಾನ ಕಾರಬಾರಿ, ಮುತ್ತಪ್ಪ ಪೋತೆ, ಶಿವಾನಂದ ಹಂಜಗಿ, ಜಗದೀಶ್ ರಾಠೋಡ್, ಸಚಿನ್ ರಾಠೋಡ್, ಗಣೇಶ ರಾಠೋಡ್, ಪ್ರಕಾಶ್ ಪೋತೆ, ಅಬ್ಬಾಸ್ ಜಮಖಂಡಿ, ಸಂಜು ಪಾಯಕರ, ಫಯಾಜ್ ಕಾರಬಾರಿ, ಈರಪ್ಪ ಮಾಳಿಗೆ, ಹಣಮಂತ ಕಂಟಿಕಾರ ಮುಂತಾದವರು ಉಪಸ್ಥಿತರಿದ್ದರು.