ಇಂಡಿ : ತಡವಲಗಾ ಗ್ರಾಮದ ನಮ್ಮ ಕನ್ನಡ ಮಾಧ್ಯಮ ಶಾಲೆಯಿಂದ 11 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ, ದೀಪೋತ್ಸವದ ಕಾರ್ಯಕ್ರಮ ಹಾಗೂ ಮುದ್ದು ಮಕ್ಕಳ ಮನರಂಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಎಂ. ಡಿ ಮೇತ್ರಿಯವರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ಭದ್ರ ಬುನಾದಿ ಹಾಕಿಕೊಡುವಲ್ಲಿ ನಮ್ಮ ಕಿರಿಯ ಪ್ರಾಥಮಿಕ ಶಾಲೆ ತಡವಲಗಾ ಮಾದರಿ ಶಾಲೆಯಾಗಿದೆ.
ಇನ್ನು ಅತಿಥಿ ಉಪನ್ಯಾಸ ನೀಡಿದ ತಮ್ಮಣ್ಣ ಪೂಜಾರಿ ಮಾತನಾಡಿ, ಭವ್ಯ ಭಾರತದ ನಿರ್ಮಾಣ ಮಾಡುವ ಮಕ್ಕಳಿಗೆ ಉತ್ತಮ ಸಂಸ್ಕಾರ , ಭವ್ಯ ಸಂಸ್ಕೃತಿ ಹಾಗೂ ದೇಶಪ್ರೇಮ ಬೆಳವಣಿಗೆಯಲ್ಲಿ ನಮ್ಮ ಕಿರಿಯ ಶಾಲೆ ವಿಶೇಷವಾಗಿದೆ.
ಕಾರ್ಯಕ್ರಮದಲ್ಲಿಡಾ. ಸಿ. ಎಮ್. ಹೂಗಾರ, ಉಸ್ಮಾನ್ ಕಸಾಬ ಗ್ರಾಂ.ಪ ಅಧ್ಯಕ್ಷರು ಗೌರವಾಧ್ಯಕ್ಷೆ ಶ್ರೀಮತಿ ಸುನಂದಾ ವಾಲಿಕಾರ, ಚಂದ್ರಶೇಖರ ರೂಗಿ, ಅಶೋಕ್ ಮಿರ್ಜಿ, ಸಂತೋಷ್ ಹೊಟಗಾರ , ಶ್ರೀ ರಮೇಶ್ ಮೇತ್ರಿ, ತಮ್ಮಾರಾಯ ಮಿರ್ಜಿ, ಆನಂದ್ ವಾಲಿಕಾರ, ಬಸವರಾಜ, ಕಲ್ಯಾಣಿ ಗಣವಲಗ, ರಮೇಶ್ ಹೊಸಮನಿ, ಜೆಟ್ಟೆಪ್ಪ ಸೂರಪೂರ, ಶರಣು ಕುಂಬಾರ, ಮಲ್ಲಕಪ್ಪ ತೇಲಿ, ಧರೇಪ್ಪ ಮೇತ್ರಿ , ಸಚಿನ್, ಇಂಡಿ ಶರಣು ಕುಂಬಾರ ಭಾಗವಹಿಸಿದ್ದರು.
ಭವ್ಯ ಕಾರ್ಯಕ್ರಮದಲ್ಲಿ ಪೂಜಾ ಗೊಳ್ಳಗಿ ನಿರೂಪಿಸಿದರೆ, ಎನ್. ಎ ತಳವಾರ ಸ್ವಾಗತಿಸಿದರು. ಪಾರಿತೋಷಕವನ್ನು ಕುಮಾರ್ ಸಂತೋಷ ಬಿರಾದಾರ ,ಶ್ರೀಮತಿ ಲಕ್ಷ್ಮೀ ತಳವಾರ ವಂದಿಸಿದರು. ಮಕ್ಕಳ ಮನರಂಜನಾ ಕಾರ್ಯಕ್ರಮದಲ್ಲಿ ಮುದ್ದು ಮಕ್ಕಳು ಊರಿನ ಹಿರಿಯರು, ಮಾತೆಯರು ಭಾಗವಹಿಸಿದರು.