ಕುಡಿತಕ್ಕೆ ಬಲಿ ಆಗದೆ ಉತ್ತಮ ಜೀವನ ನಡೆಸಬೇಕು. ಸಮಾಜಮುಖಿ ಕೆಲಸ ಮಾಡಲು ಪೂಜ್ಯರಿಗೆ ಮತ್ತಷ್ಟು ಶಕ್ತಿ ಬರುತ್ತದೆ.
ಜೀವನದಲ್ಲಿ ಕುಡಿತಕ್ಕೆ ಒಳಗಾಗದೆ ಒಳ್ಳೆಯ ದಾರಿಯಲ್ಲಿ ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಜೀವನ ಮಾಡಬೇಕೆಂದು
ಮುದ್ದೇಬಿಹಾಳ : ಯಾವುದೋ ಕಾರಣದಿಂದಾಗ ಕುಡಿತದ ದಾಸರಾಗಿದ್ದುಕೊಂಡು ಮನ,ಮನೆಯ ಸ್ಥಿತಿಯನ್ನು ಹಾಳುಮಾಡಿಕೊಂಡಿದ್ದವರು ಮದ್ಯವರ್ಜನ ಶಿಬಿರದ ಮೂಲಕ ಸುಧಾರಣೆ ಕಂಡಿದ್ದೀರಿ. ಇದೀಗ ನವಜೀವನ ಸಮೀತಿಯ ಸದಸ್ಯರಾಗಿದ್ದೀರಿ.ಪಾನಮುಕ್ತರು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರಮಾಣ ಪತ್ರಗಳನ್ನು ನಿಮಗೆ ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಮೋಹನ್ ನಾಯ. ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತ್ತೆ ಕುಡಿತಕ್ಕೆ ಬಲಿ ಆಗದೆ ಉತ್ತಮ ಜೀವನ ನಡೆಸಬೇಕು. ಸಮಾಜಮುಖಿ ಕೆಲಸ ಮಾಡಲು ಪೂಜ್ಯರಿಗೆ ಮತ್ತಷ್ಟು ಶಕ್ತಿ ಬರುತ್ತದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶ್ರೀಶೈಲ್ ದೊಡಮನಿ ಮಾತನಾಡಿ, ನವಜೀವನ ಸಮಿತಿ ಸದಸ್ಯರು ಹೊಸ ಜೀವನ ಆರಂಭಿಸಿದ್ದು ಎಂದು ಹೇಳಿದರು.
ಜಾಗೃತಿ ವೇದಿಕೆ ಸದಸ್ಯ ಡಾ.ವೀರೇಶ ಪಾಟೀಲ ಮಾತನಾಡಿ, ಮುಂದಿನ ಜೀವನದಲ್ಲಿ ಕುಡಿತಕ್ಕೆ ಒಳಗಾಗದೆ ಒಳ್ಳೆಯ ದಾರಿಯಲ್ಲಿ ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಜೀವನ ಮಾಡಬೇಕೆಂದು ಹೇಳಿದರು.
ಕಲಬುರ್ಗಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ರಾಜೇಶ ಕೆ ಮಾತನಾಡಿ, ಕುಡಿತ ಬಿಟ್ಟ ನಂತರ ಕ್ಷೇತ್ರ ಧರ್ಮಸ್ಥಳದಿಂದ ಬರುವಂತಹ ಹಲವು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರಲ್ಲದೇ ಪಾನಮುಕ್ತರಾಗಿರುವ ಜೀವನದ ಕಥೆ ಇನ್ನೊಬ್ಬರಿಗೆ ಮಾರ್ಗದರ್ಶನ ಮಾಡುವಂತೆ
ಸಾಧನೆ ಮಾಡಲು ಹೇಲಿದರು.
ಈ ಸಂದರ್ಭದಲ್ಲಿತಾಲ್ಲೂಕು ಯೋಜನಾಧಿಕಾರಿ ಶಿವಾನಂದ ಪಿ.ನಾಗೇಶ ಎಸ್.ಕೆ.,ನಿಂಗನಗೌಡ ಪಾಟೀಲ್ ಸೇವಾಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು ಇದ್ದರು.ಮಲ್ಲೇಶ ಕೆ.,ನಿಂಗನಗೌಡ ಪಾಟೀಲ್ ನಾಗೇಶ್ ಎಸ್.ಕೆ ಸೇರಿದಂತೆ ಉಪಸ್ಥಿತರಿದ್ದರು.



















