ವಿಜಯಪುರ: ಕಲಬುರ್ಗಿಯಲ್ಲಿ ಜವಳಿ ಪಾರ್ಕ್ ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ಸಂಗತಿ, ಈ ಜವಳಿ ಪಾರ್ಕ್ ಉದ್ಯೋಗ, ಕಚ್ಛಾ ವಸ್ತುಗಳ ಖರೀದಿ ಹೀಗೆ ಪ್ರತಿ ಕಾರ್ಯಚಟುವಟಿಕೆಗಳಲ್ಲಿಯೂ ನೇಕಾರ ಸಮಾಜ ಬಂಧನಬಾಂಧವರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ನೇಕಾರ ಸಮಾಜದ ಮುಖಂಡರಾದ ಶಶಿಕಾಂತ ಕಿಟ್ಟದ ನೇತೃತ್ವದ ಏಕ ವ್ಯಕ್ತಿ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನೇಕಾರ ಸಮಾಜದ ಮುಖಂಡ ಶಶಿಕಾಂತ ಕಿಟ್ಟದ, ನೇಕಾರ ಸಮಾಜ ಉದ್ಯೋಗ ಭದ್ರತೆಯಿಲ್ಲದೇ ನಲಗುತ್ತಿದೆ, ಈ ನಿಟ್ಟಿನಲ್ಲಿ ನೇಕಾರ ಸಮಾಜಕ್ಕೆ ಆರ್ಥಿಕ ಪುನಶ್ಚೇತನ ನೀಡುವ ಕಾರ್ಯ ನಡೆಯಬೇಕಿದೆ, ಸರ್ಕಾರ ಸೌಲಭ್ಯಗಳನ್ನೂ ನೀಡಿದರೂ ಸಹ ಅವುಗಳ ಪ್ರಯೋಜನ ಸಮಾಜಕ್ಕೆ ಇಂದಿಗೂ ದೊರಕುತ್ತಿಲ್ಲ ಎಂದರು.
ಕಚ್ಚಾ ವಸ್ತುಗಳು ಸಮಯಕ್ಕೆ ಸರಿಯಾಗಿ ದೊರಕದೇ ಉದ್ಯೋಗಕ್ಕೆ ದೊಡ್ಡ ಹೊಡೆತ ಬೀಳುತ್ತಿದ್ದು ನೇಕಾರಿಕೆಯನ್ನು ನಂಬಿ ಬದುಕುವ ಅನೇಕ ಕುಟುಂಬಗಳು ತೀವ್ರ ಆರ್ಥಿಕ ಅಡಚಣೆಯನ್ನು ಎದುರಿಸುತ್ತಿವೆ ಎಂದರು.
ಕಲಬುರ್ಗಿಯಲ್ಲಿ ಜವಳಿ ಪಾರ್ಕ್ ನಿರ್ಮಿಸುತ್ತಿರುವುದು ಸಂತೋಷದ ಸಂಗತಿ, ಈ ಜವಳಿ ಪಾರ್ಕ್ ಸಮಗ್ರ ಕಾರ್ಯಚಟುವಟಿಕೆಗಳಲ್ಲಿ ನೇಕಾರ ಸಮಾಜ ಬಾಂಧವರಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದರು.
ಪ್ರಮುಖವಾದ ಬೇಡಿಕೆಗಳನ್ನು ಮಂಡಿಸಿದ ಕಿಟ್ಟದ ಅವರು, ಜವಳಿ ಪಾರ್ಕ್ನಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕಾತಿ ಸಂದರ್ಭದಲ್ಲಿ ನೇಕಾರ ಸಮಾಜಕ್ಕೆ ಪ್ರಥಮಾದ್ಯತೆ ನೀಡುವ ಜೊತೆಗೆ ಹೆಚ್ಚಿನ ಹುದ್ದೆಗಳನ್ನು ನೇಕಾರ ಸಮಾಜಕ್ಕೆ ನೀಡುವುದು, ಜವಳಿ ಪಾರ್ಕ್ಗೆ ಸಂಬAಧಿಸಿದ ಯಾವುದೇ ಗುತ್ತಿಗೆ, ಟೆಂಡರ್ ಪ್ರಕ್ರಿಯೆ ಕರೆಯುವ ವೇಳೆಯಲ್ಲಿಯೂ ನೇಕಾರ ಸಮಾಜಕ್ಕೆ ಆದ್ಯತೆ ನೀಡಬೇಕು, ನೇಕಾರ ಸಮಾಜದ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೀಸಲಾತಿ ಪ್ರಮಾಣವನ್ನು ಕೂಡಲೇ ಏರಿಕೆ ಮಾಡುವುದು, ನೇಕಾರ ಸಮಾಜ ಬಾಂಧವರಿಗೆ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸೆ ಒದಗಿಸುವ ಸೌಲಭ್ಯ ಕಲ್ಪಿಸುವುದು, ನೇಕಾರ ಸಮಾಜದವರಿಗೆ ಆರ್ಥಿಕ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಸೂಕ್ಷö್ಮ, ಮಧ್ಯಮ ಉದ್ಯಮಗಳನ್ನು ಸ್ಥಾಪನೆಗೆ ಶೇ.ನೂರಕ್ಕೆ ನೂರರಷ್ಟು ಸಹಾಯಧನ ಕಲ್ಪಿಸುವುದು, ನೇಕಾರಿಕೆಗೆ ಪೂರಕವಾದ ಕಚ್ಛಾ ಸಾಮಗ್ರಿಗಳು ಸೂಕ್ತ ಸಮಯದಲ್ಲಿ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ ಪ್ರಮುಖವಾಗಿ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ೧ ಸಾವಿರ ಕೋಟಿ ರೂ. ಅನುದಾನ ನೀಡುವುದು, ನೇಕಾರ ಸಮುದಾಯದವರಿಗೆ ಈ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಹಾಗೂ ನೇಕಾರ ನಿಗಮದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನು ನೇಕಾರ ಸಮುದಾಯದವರಿಗೆ ನೇಮಕ ಮಾಡಬೇಕು, ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ನೇಕಾರ ಭವನ ನಿರ್ಮಾಣ ಮಾಡುವುದು, ನೇಕಾರ ವಿದ್ಯಾರ್ಥಿಗಳಿಗಾಗಿ ಉಚಿತವಾದ ಸುಸಜ್ಜಿತ ವಸತಿ ನಿಲಯ ಆರಂಭಿಸುವುದು ಸೇರಿದಂತೆ ವಿವಿಧ ಪ್ರಮುಖವಾದ ಬೇಡಿಕೆಗಳನ್ನು ಮಂಡಿಸಿದರು.
ಧನ್ಯವಾದಗಳೊಂದಿಗೆ
ತಮ್ಮ ವಿಶ್ವಾಸಿ
ಶಶಿಕಾಂತ ಕಿಟ್ಟದ
ನೇಕಾರ ಸಮಾಜದ ಮುಖಂಡರು
8105157048


















