ಕೇಂದ್ರೀಯ ಏಕಲವ್ಯ ವಸತಿ ಶಾಲೆ ಮಂಜೂರು ಮಾಡುವಂತೆ ಒತ್ತಾಯಿಸಿ ಮನವಿ
ಇಂಡಿ: ಜಿಲ್ಲೆಯಲ್ಲಿ ಕೇಂದ್ರೀಯ ಏಕಲವ್ಯ ವಸತಿ ಶಾಲೆ ಮಂಜೂರು ಮಾಡುವಂತೆ ಒತ್ತಾಯಿಸಿ ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ರವಿಕಾಂತ ವಗ್ಗಿ ನೇತೃತ್ವದಲ್ಲಿ ತಳವಾರ ಸಮಾಜ ಬಾಂಧವರು ವಿಜಯಪೂರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಜಿಲ್ಲಾಧ್ಯಕ್ಷ ಅನೀಲ ಜಮಾದಾರ, ರವಿಕಾಂತ ವಗ್ಗೆ ಮಾತನಾಡಿ, ಜಿಲ್ಲೆಯಲ್ಲಿ ಪರಿಶಿಷ್ಠ ಪಂಗಡದಲ್ಲಿ ಬರುವ ತಳವಾರ, ವಾಲ್ಮೀಕಿ, ಬೇಡ, ಬೇಡರ ಹಾಗೂ ಹರಣಶಿಕಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಈ ಎಲ್ಲ ಸಮುದಾಯಗಳು ಶಿಕ್ಷಣವಂಚಿರಾಗಿದ್ದರಿAದ ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಕಾಣಲು ಸಾಧ್ಯವಾಗಿಲ್ಲ. ಈ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕಾದರೆ ಶೈಕ್ಷಣಿಕ ರಂಗ ಅವಶ್ಯವಾಗಿದ್ದು ಕೇಂದ್ರೀಯ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರು ಮಾಡಿ ಈ ಸಮುದಾಯಗಳ ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ರವಿ ರಾಯಜಿ, ರಮೇಶ ಗುಡ್ಡೇವಾಡಿ, ಸಂತೋಶ ಕೋಳಿ, ಮಂಜು ಜಮಾದಾರ, ವಿವೇಕಾನಂದ ಡಬ್ಬಿ, ರಮೇಶ ಕೋಳಿ, ಗುರು ತಳವಾರ, ಅಣ್ಣಪ್ಪ ತಳವಾರ, ಶಾಂತು ವಾಲೀಕಾರ, ಸಂತೋಶ ವಾಲೀಕಾರ, ಸುರೇಶ ಕೋಲ್ಕರ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ವಿಜಯಪೂರ ಜಿಲ್ಲೆಯಲ್ಲಿ ಕೇಂದ್ರೀಯ ಏಕಲವ್ಯ ವಸತಿ ಶಾಲೆ ಮಂಜೂರು ಮಾಡುವಂತೆ ಒತ್ತಾಯಿಸಿ ತಳವಾರ ಸಮಾಜ ಬಾಂಧವರು ವಿಜಯಪೂರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು.



















