ರಾಜಯೋಗದ ಮೂಲಕ ಆಧ್ಯಾತ್ಮಿಕ ಜ್ಞಾನೋದಯ ಮಾಡಿದ ಸಂಸ್ಥೆ
ಇಂಡಿ ; ಪ್ರಜಾಪಿತ ಬ್ರಹ್ಮಕುಮಾರಿ ವಿ ವಿಯು ರಾಜಯೋಗದ ಮೂಲಕ ಆಧ್ಯಾತ್ಮಿಕ ಜ್ಞಾನೋದಯ ಮಾಡಿದ ಸಂಸ್ಥೆಯಾಗಿದೆ ಎಂದು ಕವಲಗಿ ಸಂಸ್ಥಾನಮಠದ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.
ನಗರದ ಶ್ರೀ ಸಿದ್ದಿವಿನಾಯಕ ಸ್ವಾಗತ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಅಂಬಿಕಾರವರ ೭೫ ನೇ ವರ್ಷ ಮತ್ತು ಬಿ.ಕೆ ಯಮುನಾ ಅಕ್ಕವನರ ೬೦ ನೇ ವರ್ಷದ ಷಷ್ಠಪೂರ್ತಿ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದರು.
ಇವರಿಬ್ಬರೂ ವಿಶ್ವವಿದ್ಯಾಲಯಕ್ಕೆ ಬರುವವರಿಗೆ ವೈಯಕ್ತಿಕ ಪರಿವರ್ತನೆ ಮತ್ತು ನವೀಕರಣಕ್ಕೆ ಆಧ್ಯಾತ್ಮಿಕ ಸ್ಪೂರ್ತಿ ನೀಡಿ ತಮ್ಮ ಜೀವನವನ್ನೇ ವಿವಿಗೆ ಸಮರ್ಪಿಸಿಕೊಂಡಿದ್ದಾರೆ ಎಂದರು.
ಚಡಚಣದ ಷಡಷ್ಕರಿ ಶ್ರೀಗಳು ಮಾತನಾಡಿ ಅಂಬಿಕಾ ಅಕ್ಕನವರು ಮತ್ತು ಯಮುನಾ ಅಕ್ಕನವರು ಜನರಿಗೆ ಆಧ್ಯಾತ್ಮ ಪರಿವರ್ತನೆಗೆ ಸಹಾಯ ಮಾಡಿದ್ದಾರೆ. ಇವರು ನೀಡಿದ ಸಾಮೂಹಿಕ ಶಾಂತಿ ಪ್ರಜ್ಞೆ ಶಾಂತಿ ಸಂದೇಶ ಪ್ರತಿಯೊಬ್ಬರ ಆತ್ಮದ ಘನತೆ ಬೆಳೆಸಿದ್ದಾರೆ ಎಂದರು.
ಗೋಕಾಕದ ಬಿ.ಕೆ. ಮೀರಾ ಅಕ್ಕನವರು, ಬೆಳಗಾವಿ ವಲಯ ಕೇಂದ್ರದ ಅಂಬಿಕಾ ಅಕ್ಕನವರು, ಇಂಡಿಯ ಯಮುನಾ ಅಕ್ಕನವರು, ನಿವೃತ ಪ್ರಾಚಾರ್ಯ ಶೈಲಜಾ ಬಿರಾದಾರ, ಗಂಗಾ ಗಲಗಲಿ, ನಾಗರತ್ನಾ ಶ್ರೀದೇವಿ ಅಕ್ಕನವರು ಮಾತನಾಡಿದರು.
ವೇದಿಕೆಯ ಮೇಲೆ ಮಲ್ಲಿಕಾರ್ಜೂನ ದೇವರ , ಅರವಿಂದ ಕಠಾರೆ ಉಪಸ್ಥಿತರಿದ್ದರು. ನಿವೃತ್ತ ಸಿವಿಲ್ ಆಭಿಯಂತರ ಅಪ್ಪಣ್ಣ ಬಡಿಗೇರ, ಗುರುನಾಥ ಗೋಟ್ಯಾಳ, ಭಾಗಿರಥಿ ಸಿವಸಿಂಪಿ, ಗಂಗಮ್ಮ ಗಲಗಲಿ ಇವರನ್ನು ಸನ್ಮಾನಿಸಲಾಯಿತು.
ರಾಜೇಶ್ವರಿ ಕೋಳೆಕರ, ರೇಣುಕಾ ಅಕ್ಕಾ, ಮಹೇಶ ಕೆಸೆಟ್ಟಿ ಮಾತನಾಡಿದರು.
ಇದಕ್ಕೂ ಪೂರ್ವ ಪ್ರಜಾಪಿತ ವಿವಿಯಿಂದ ಮಹಾವೀರ ವೃತ್ತದ ಮೂಲಕ ಸ್ವಾಗತ ಭವನದ ವರೆಗೆ ಭವ್ಯ ಮೆರವಣೆಗೆ ನಡೆಯಿತು..
ಇಂಡಿ ನಗರದ ಶ್ರೀ ಸಿದ್ದಿವಿನಾಯಕ ಸ್ವಾಗತ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಅಂಬಿಕಾರವರ ೭೫ ನೇ ವರ್ಷ ಮತ್ತು ಬಿ.ಕೆ ಯಮುನಾ ೬೦ ನೇ ವರ್ಷ ಅಕ್ಕವನರ ಷಷ್ಠಪೂರ್ತಿ ಸಮಾರಂಭದ ಸಾನಿದ್ಯ ವಹಿಸಿ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿದರು.




















