ವಿಜಯಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜ್ಞಾನಯೋಗಾಶ್ರಮದ ವರೆಗೆ ಶ್ರೀ ಸಿದ್ದೇಶ್ವರ ಅಪ್ಪಗಳು ಬರೆದ ಗ್ರಂಥಗಳನ್ನು ಹಾಗೂ ಬುತ್ತಿಗಳನ್ನು ತಲೆಯ ಮೇಲೆ ಹೊತ್ತು ಸಾವಿರಾರು ಮಹಿಳೆಯರು ಜ್ಞಾನ ಗ್ರಂಥಗಳ ಮೆರವಣಿಗೆ ನಡೆಸಿದರು.
ತಾಯಿ ಎದೆ ಹಾಲಿನಲ್ಲಿ ಶೌರ್ಯ, ಸಾಹಸ ದೇಶ ಭಕ್ತಿಯಂತಹ ಗುಣಗಳಿರುತ್ತವೆ-ಪ್ರೊ.ಡಾ.ನಾಗಮಣಿ ಖಂಡ್ರೆ
ವಿಜಯಪುರ : ಹೆಣ್ಣು ತಾಯಿಯಾಗುವುದು ಆ ಭಗವಂತ ಕೊಟ್ಟ ವರ, ಈ ಅವಕಾಶವನ್ನು ಹೆಣ್ಣು ಮಾತ್ರ ಅನುಭವಿಸಲು ಸಾಧ್ಯ. ಆ ಹೆಣ್ಣು ಮನೆ ಮಗಳಾಗಿ, ಸೊಸೆಯಾಗಿ ಹಾಗೂ ತಾಯಿಯಾಗಿ ಮನೆ ಬೆಳಗಬೇಕು ಇದು ನಮ್ಮ ಭಾರತೀಯ ಸಂಸ್ಕೃತಿ ಎಂದು ಮೈಸೂರಿನ ಸಂಸ್ಕೃತ ಚಿಂತಕರು ಪ್ರೊ.ಡಾ.ನಾಗಮಣಿ ಖಂಡ್ರೆ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ ೩ನೇ ವರ್ಷದ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ `ಆಧ್ಯಾತ್ಮ ಮತ್ತು ಮಹಿಳೆ’ ಎಂಬ ವಿಷಯದ ಕುರಿತು ಅನುಭಾವ ನುಡಿಗಳನ್ನಾಡಿದರು. ತಾಯಿಯಾಗುವ ಅವಕಾಶವನ್ನು ಈ ಸೃಷ್ಠಿ ಕೇವಲ ಹೆಣ್ಣು ಮಕ್ಕಳಿಗೆ ಕೊಟ್ಟಿದೆ. ಪುರುಷರು ತಾಯಿಯಾಗಲು ಸಾಧ್ಯವೇ ಇಲ್ಲ. ಮಹಿಳೆ ತಾಯಿಯಾಗಿ ಮಗುವಿಗೆ ಹಾಲು ಕೊಡುತ್ತೇವೆ. ಆ ಹಾಲಿನಲ್ಲಿ ಕೇವಲ ಆಹಾರ ಇರಲ್ಲ ನಮ್ಮ ಉನ್ನತ ಸಂಸ್ಕೃತಿ ಇರುತ್ತದೆ. ಶೌರ್ಯ, ಸಾಹಸ ದೇಶ ಭಕ್ತಿಯಂತಹ ಗುಣಗಳನ್ನು ನಾವು ಆ ಎದೆ ಹಾಲಿನ ಮೂಲಕ ನೀಡುತ್ತೆವೆ ಎನ್ನುವುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಹೆಣ್ಣು ಮಕ್ಕಳು ಭಗವಂತನ ನಾಮಸ್ಮರಣೆ ಮಾಡಿ, ಮಕ್ಕಳಿಗೆ ಆಧ್ಯಾತ್ಮಿಕ-ಧಾರ್ಮಿಕ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿ ಅವರನ್ನು ಸುಂಸ್ಕೃತರನ್ನಾಗಿ ಮಾಡುವುದರ ಮೂಲಕ ಈ ದೇಶಕ್ಕೆ ಎರಡು ಒಳ್ಳೆಯ ಮಕ್ಕಳನ್ನು ದೇಶಕ್ಕೆ ಕೊಡುತ್ತೇನೆ ಎನ್ನುವ ಪ್ರತಿಜ್ಞೆ ಮಾಡಿ ಎಂದು ಕರೆ ನೀಡಿದರು.
ವಿಶ್ವದಲ್ಲೇ ಅತ್ಯಂತ ಪ್ರಾಚೀನ ಇತಿಹಾಸವನ್ನು ಹೊಂದಿರುವ ಭಾರತ ಅನೇಕ ಅವತಾರಿ ಪುರಿಷರಿಗೆ ಜನ್ಮ ನೀಡಿದ ಪುಣ್ಯ ಭೂಮಿ. ಸಾವಿರಾರು ಭಾಷೆ, ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಭಾರತ ಭೂಮಿಯ ಮೇಲಿನ ಪ್ರತಿಯೊಂದು ಜೀವರಾಶಿಯನ್ನು ಪ್ರೀತಿಸುವ ನಾಡು. ಪುರುಷರು ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು, ಹೆಣ್ಣು ಮಕ್ಕಳು ಪುರುಷರಿಗೆ ಪ್ರೀತಿ ಕೊಡಬೇಕು ಇದು ಭಾರತೀಯ ಕುಟುಂಬದ ಸಂಸ್ಕೃತಿಯಾಗಿದೆ. ಜೀವನ ಎಂದರೆ ಹೊಂದಾಣಿಕೆ, ಈ ಬದುಕು ಸುಂದರವಾಗಬೇಕಾದರೆ ಗಂಡ-ಹೆAಡತಿ ಒಂದಾಗಿ ಬದುಕಬೇಕಿದೆ ಎಂದರು.
ಜೀವನದಲ್ಲಿ ಅಡೆತಡೆಗಳು ಬಂದರೂ ಅವುಗಳನ್ನೆಲ್ಲ ಉತ್ಸಾಹದಿಂದ ಕಳೆಯಬೇಕು. ಗುರುಗಳು ತಂದೆ-ತಾಯಿಗೆ ಸಮಾನರು. ಭಾರತೀಯ ಕುಟುಂಬ ಪರಂಪರೆಯಲ್ಲಿ ಎಲ್ಲರೂ ಉತ್ಸಾಹದಿಂದ ಇರಬೇಕು. ಆಧ್ಯಾತ್ಮ, ಸಂಸ್ಕೃತಿ, ವಿಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರು ಸಾಕಷ್ಟು ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಹೆಣ್ಣು ಮಕ್ಕಳು ಮದುವೆ ಮುಂದೂಡಬೇಡಿ, ಮಕ್ಕಳಾಗುವುದನ್ನು ತಡೆಯಬೇಡಿ ಭಾರತೀಯ ಮಹಿಳೆಯರು ಕುಟುಂಬ, ಪತಿ-ಮಕ್ಕಳನ್ನು ಪ್ರೀತಿಸಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿಗಳಾದ ಪ್ರೋ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಜ್ಞಾನವೇ ಸಂಪತ್ತು, ಜ್ಞಾನವೇ ಬಂಗಾರ ಎಂದು ಪುಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಮಗೆ ನೀಡಿ ಹೋಗಿದ್ದಾರೆ.
ಆಧ್ಯಾತ್ಮದಲ್ಲಿ ಮಹಿಳೆ ತನ್ನನ್ನು ತೊಡಗಿಸಿಕೊಂಡರೆ ಇಡೀ ಕುಟುಂಬವೇ ಸುಂದರ, ಬದುಕು ಬಂಗಾರವಾಗುತ್ತದೆ ಎನ್ನುವುದನ್ನು ಶ್ರೀ ಸಿದ್ದೇಶ್ವರ ಅಪ್ಪಗಳು ನಮಗೆ ತಿಳಿಸಿದ್ದಾರೆ. ನಾವು ಅವರ ಮಾತುಗಳನ್ನು ಪಾಲಿಸಬೇಕು ಎಂದರು.
ತAದೆ-ತಾಯಿಗಳು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಅವರಲ್ಲಿ ಧೈರ್ಯ ಸಾಹಸ ಹಾಗೂ ಸಾದನೆಯ ಮಾರ್ಗವನ್ನು ತೋರಿಸಬೇಕು. ನೀವು ಕಲಿಸುವ ಶಿಕ್ಷಣ ಒಂದು ಒಳ್ಳೆಯ ಕುಟುಂಬ ನಿರ್ಮಾಣಕ್ಕೆ ದಾರಿಯಾಗಲಿದೆ. ಸಂಸ್ಕಾರ ಉಳ್ಳು ಸುಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳಾ ಶಿಕ್ಷಣ ಅತೀ ಮುಖ್ಯ ಎಂದರು.
ಕಲಬುರಗಿಯ ಖ್ಯಾತ ಗ್ರಂಥಿ ಶಾಸ್ತçಜ್ಞೆ ಪದ್ಮಶ್ರೀ ಡಾ.ವಿಜಯಲಕ್ಷಿö್ಮÃ ದೇಶಮಾನೆ ಮಾತನಾಡಿ, ಇಂದು ಕುಟುಂಬದಲ್ಲಿ ಅಪ್ಪ-ಅಮ್ಮ ಇಬ್ಬರಿಗೂ ಆಧ್ಯಾತ್ಮದ ಅವಶ್ಯಕತೆ ಇದೆ. ಮಹಿಳೆಯನ್ನು ಹೊರತುಪಡಿಸಿ ಆಧ್ಯಾತ್ಮವಿಲ್ಲ. ನಾವೆಲ್ಲರೂ ಅರಿವಿನಿಂದ ಬದುಕಲು ಶ್ರೀ ಸಿದ್ದೇಶ್ವರ ಅಪ್ಪಗಳು ನಮ್ಮನ್ನು ಜ್ಞಾನಯೋಗಾಶ್ರಮ ಪುಣ್ಯ ಭೂಮಿಯಲ್ಲಿ ಸೇರಿಸಿದ್ದಾರೆ ಎಂದರು.
ಬುರಣಾಪುರ ಶ್ರೀ ಸಿದ್ಧಾರೂಢ ಮಠದ ಮಾತೋಶ್ರೀ ಯೊಗೇಶ್ವರಿ ಮಾತಾಜಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಮಹಿಳೆ ಮತ್ತು ಆಧ್ಯಾತ್ಮ ಎನ್ನುವುದು ನಮ್ಮ ಜಿಲ್ಲೆಗೆ ಹೊಸದಲ್ಲ ಯಾಕೆಂದರೆ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಗಳು ನಮಗೆಲ್ಲ ಇದನ್ನು ಹೇಳಿ ಕೊಟ್ಟಿದ್ದಾರೆ. ರವಿವಾರಕ್ಕೊಮ್ಮೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಆಧ್ಯಾತ್ಮ ಕೇಂದ್ರ ಆಶ್ರಮಗಳಿಗೆ ಕರೆದುಕೊಂಡು ಹೋಗಬೇಕು. ನಾವು ಆಧ್ಯಾತ್ಮದ ರೂಢಿ ಮಾಡಿಕೊಳ್ಳಬೇಕು. ರೂಢಿಯಿಂದ ಕುಟುಂಬ ಬದಲಾಗುತ್ತದೆ, ಸಮಾಜ ಬದಲಾಗುತ್ತದೆ. ಭಾರತದ ಪರಂಪರೆ ಬೆಳಗುತ್ತದೆ ಎಂದರು.
ಹುಟ್ಟಿದ ಮಗು ಕೊಟ್ಟ ಮನೆಯನ್ನು ಬೆಳಗಬೇಕು. ಆ ರೀತಿ ಮಕ್ಕಳನ್ನು ಬೆಳೆಸುವ ಸಂಕಲ್ಪ ಮಾಡಬೇಕು. ಶ್ರೀ ಸಿದ್ದೇಶ್ವರ ಅಪ್ಪಗಳ ಬಿತ್ತಿದ ಆಧ್ಯಾತ್ಮದ ಜ್ಞಾನವನ್ನು ನಾವು ಸವಿಯಬೇಕು. ಅಪ್ಪಗಳ ವಿಚಾರ-ಸಂಸ್ಕೃತಿ, ಜ್ಞಾನಕ್ಕೆ ಗೌರವ ಬರುವ ರೀತಿಯಲ್ಲಿ ನಾವು ನಡೆದುಕೊಳ್ಳಬೇಕು. ಈ ಪೂಣ್ಯ ಭೂಮಿಗೆ ಬಂದಿರುವ ನಾವೆಲ್ಲ ಪುಣ್ಯವಂತರು ಎಂದರು.
ಗದಗ ಕದಳಿ ಬನದ ಮಾತೋಶ್ರೀ ಅಕ್ಕಮಹಾದೇವಿ ಮಾತಾಜಿ ಆರ್ಶೀವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ರಾಷ್ಟç ಸಂತರು. ಆತ್ಮ ಸಂಬAಧಿ ವಿಷಯವನ್ನು ಅರಿತುಕೊಳ್ಳುವುದೇ ಆಧ್ಯಾತ್ಮ. ಮಕ್ಕಳು ಎಂದರೆ ನಮ್ಮ ಆತ್ಮ ಇದ್ದಂತೆ, ದೇಹ ಮಿತ್ಯಾತ್ಮ, ಬ್ರಹ್ಮ ಎನ್ನುವುದು ಮುಖ್ಯಾತ್ಮ ಧರ್ಮವನ್ನು ಉಳಿಸಲು ನಿಂತವರನ್ನು ಆಧ್ಯಾತ್ಮ ಚಿಂತಕರು ಎನ್ನುತ್ತಾರೆ ಎಂದರು.
ತಾಯಂದಿರು ಪ್ರಪಂಚ ಬಿಡಿ ಎಂದು ಎಲ್ಲಿಯೂ ಹೇಳಿಲ್ಲ. ಆಧ್ಯಾತ್ಮ ಪ್ರಾರಂಭವಾಗುವುದೇ ಮಹಿಳೆಯಿಂದ. ಮೊದಲು ಬೆಳಿಗ್ಗೆ ಎದ್ದು ಅಂಗಳ ಕಸ ಗೂಡಿಸಿ, ಅಂಗಳದಲ್ಲಿ ರಂಗ ಹೊಯ್ದು, ಹೊರಸಲು ಪೂಜೆ ಮಾಡುತ್ತಿದ್ದರು. ನಂತರ ಒಲೆಯನ್ನು ಸ್ವಚ್ಚಗೊಳಿಸಿ ಅಗ್ನಿ ದೇವನಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಇದರ ಅರ್ಥ ಇಷ್ಟೇ ಮಹಿಳೆಯಿಂದಲೇ ಆಧ್ಯಾತ್ಮ ಪ್ರಾರಂಭವಾಗಿದೆ.
ಉಡುಗೆ-ತೊಡುಗೆ, ಆಚಾರ-ವಿಚಾರಗಳಲ್ಲಿ ತಾಯಿಯಾದವಳು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಆ ಸಂಸ್ಕಾರದಿAದ ಮಕ್ಕಳಲ್ಲಿ ಉನ್ನತ ವಿಚಾರಗಳು ಬರುತ್ತವೆ. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಮಹಿಳೆ ಎಂದರೆ ದೊಡ್ಡ ಭೂಮಿ ಎನ್ನುವ ಅರ್ಥ ಕೊಡುತ್ತದೆ. ತಾಯಿ ಆಧ್ಯಾತ್ಮ ರೂಢಿಸಿಕೊಂಡರೆ ಸಾಕು ಮಗಳಲ್ಲಿಯೂ ಸದ್ಗುಣಗಳು ಬರುತ್ತವೆ. ಮಹಿಳೆಯರು ವಚನ ಸಾಹಿತ್ಯ ರೂಪಿಸಿದರು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾರೆ. ಹಾಗಾಗಿ ನಾವು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಹಾಕಿ ಕೊಟ್ಟಂತಹ ಆಧ್ಯಾತ್ಮದ ದಾರಿಯಲ್ಲಿ ನಾವೆಲ್ಲ ಸಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಪೂಜ್ಯ ಬಸವಲಿಂಗ ಸ್ವಾಮೀಜಿ, ಮಹಿಳಾ ಸಾಧಕೀಯರು, ನಾಡಿನ ಪೂಜ್ಯರು ಹಾಗೂ ಜ್ಞಾನಯೋಗಾಶ್ರಮದ ಭಕ್ತರು ಭಾಗವಹಿಸಿದ್ದರು.


















