ವಧು-ವರರ ಸಮಾವೇಶ ಆಯೋಜನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಅಖಿಲ ಕರ್ಕ ಸಜ್ಜನ/ಗಾಣಿಗರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಅಡಿಯಲ್ಲಿ ದಿ 21 ಭಾನುವಾರ ಬೆಳಿಗ್ಗೆ 9.30 ಕ್ಕೆ ಬೆಂಗಳೂರಿನ ಪಾರ್ವತಿ ಕಲ್ಯಾಣ ಮಂಟಪ, ವೆಸ್ಟ್ ಆಫ್ ಕಾರ್ಡ್ ರಸ್ತೆ ಇಲ್ಲಿ ರಾಜ್ಯ ಹಾಗೂ ಅಂತರ್ ರಾಜ್ಯ ಮಟ್ಟದಲ್ಲಿ ಗಾಣಿಗ ವಧು-ವರರ ಸಮಾವೇಶ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಯೊಳಗೆ ಆಸಕ್ತಿ ಇದ್ದವರು ನೋಂದಣಿ ಮಾಡಿಸಿ, ಭಾಗವಹಿಸಿ, ಸಮಾವೇಶದ ಸದುಪಯೋಗಪಡಿಸಿಕೊಳ್ಳಲು ಸಮಾಜ ಬಾಂಧವರಲ್ಲಿ ಸಂಘಟಕರು ಮನವಿ ಮಾಡಿದ್ದಾರೆ.
ದೂರವಾಣಿ ಸಂಪರ್ಕ ಶರಣಪ್ಪ ಸಜ್ಜನ ಬೆಂಗಳೂರು 9448208712 ಹಾಗೂ ಕಳಕಪ್ಪ ಸಜ್ಜನ, ಹುಬ್ಬಳ್ಳಿ 9844379738 ಇವರನ್ನು ಸಂಪರ್ಕಿಸಬೇಕೆಂದು ರಾಜಶೇಖರ ಸಜ್ಜನ ತಿಳಿಸಿದ್ದಾರೆ


















