ಬಂಜಾರಾ ಸಮಾಜದ ಭೀಷ್ಟ ಎಂದೇ ಖ್ಯಾತಿ ಪಡೆದ ಎಲ್. ಆರ್. ನಾಯಕ
ವಿಜಯಪುರ : ಬಂಜಾರಾ ಸಮಾಜದ ಭೀಷ್ಟ ಎಂದೇ ಖ್ಯಾತಿ ಪಡೆದ ಶ್ರೀ ಎಲ್. ಆರ್. ನಾಯಕ ಭಾರತದ ರಾಜಕೀಯ ಇತಿಹಾಸದಲ್ಲಿ ಶೋಭಾಯ ಮಾನವಾಗಿ ಬೆಳಗಿದ ರಾಜ್ಯ, ರಾಷ್ಟ್ರ ರಾಜಕಾರಣಿಗಳಲ್ಲಿ ಒಬ್ಬರೆಂದು ಹೇಳಿಕೊಳ್ಳುವ ಹೆಮ್ಮೆ ನಮ್ಮದು. ಐತಿಹಾಸಿಕ ಸ್ಥಳ ವಿಜಯಪುರ ಜಿಲ್ಲೆಯ ಐನಾಪೂರ (ಮಹಾಲ) ತಾಂಡಾದ ಶ್ರೀಮತಿ ಮತ್ತು ಶ್ರೀ ಸೀತಾಬಾಯಿ ರಾಮಾ ನಾಯಕ ದಂಪತಿಗಳ ಐದನೆಯ ಮಗನಾಗಿ 18-09-1915 ರಲ್ಲಿ ಜನಿಸಿದರು. 1938. ಕರ್ನಾಟಕದ ಬಂಜಾರಾ ಪದವಿಧರ ಎಂಬ ಹೆಮ್ಮೆಗೆ ಪಾತ್ರರಾದವರು ನಂತರ ಇವರಿಗೆ ಡಾ| ಬಾಬಾಸಾಹೇಬ ಅಂಬೇಡ್ಕರರವರ ಒಡನಾಟ ಸಿಕ್ಕಿತು. ನಾಯಕರ ಪ್ರತಿಭೆಗೆ ಮಾರುಹೋದ ಬಾಬಾಸಾಹೇಬರವರ ಮುಂಬೈಯಲ್ಲಿ ತಾವು ಪ್ರಾಂಶುಪಾಲರಾಗಿದ್ದ ಕಾನೂನು ಕಾಲೇಜಿಗೆ ಸೇರಿಸಿ ತಮ್ಮ ಮನೆಯಲ್ಲಿ ಇಟ್ಟುಕೊಂಡು ಅವರ ಉತ್ತಮ ಭವಿಷ್ಯ ರೂಪಿಸಿದರು. ಡಾ| ಬಾಬಾಸಾಹೇಬರ ವ್ಯಕ್ತಿತ್ವದ ನೆರಳಿನಲ್ಲಿ ಬೆಳಗಿದ ಶ್ರೀ ನಾಯಕರು ತಮ್ಮರವಾಗಿ ಹರಡಿದ ಹಂತಗಳು ಕಾನೂನು ಪದವಿಧರನಾದ ನಂತರ ಹುಬ್ಬಳ್ಳಿಯಲ್ಲಿ ಮಾಮಲೆದಾರ (ತಹಶೀಲ್ದಾರ) ರಾಗಿ ವಣೂರನಲ್ಲಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ (ಪ್ರಾಂತ ಆಫೀಸರ್) ಆಗಿ ಬಡ್ತಿಯಾಗಿದ್ದರು. ಹೈದ್ರಾಬಾದ ಪೊಲೀಸ ಕಾರ್ಯಚರಣೆಯಲ್ಲಿ ನೇ ಇಂಡಿಯನ್ ಇನ್ಸಂಟಿ ಮ್ಯಾಜಿಸ್ಟ್ರೇಟಾಗಿ ಪ್ರಶಂಸನೀಯ ಕಾರ್ಯನಿರ್ವಹಿಸಿದರು.
1959 ರಲ್ಲಿ ರಾಜ್ಯ ಸರ್ಕಾರ ಶ್ರೀಯುತರನ್ನು ಟ್ರೇಡ್ ಕಮೀಷನರನ್ನಾಗಿ ಲಂಡನಿಗೆ ಕಳುಹಿಸಿದರು.ವ್ಯಾಪಾರ ವಹಿವಾಟಿಗಳ ಬಗ್ಗೆ ಅಧ್ಯಯನಕ್ಕಾಗಿ 85 ರಾಷ್ಟ್ರಗಳಿಗೆ ಬೇಟಿ ನೀಡಿದರು.ಲಂಡನ್ ರೋಟರಿ ಕ್ಲಬಿನ (ಸೀಡರ್ ಹೌಸ) ಕಾರ್ಯಬಾರಿಯಾಗಿ ಕಾರ್ಯನಿರ್ವಹಿಸಿದರು.
ಇದೇ ಸಮಯಕ್ಕೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮಹಾರಾಜರು, ಬ್ರಿಟನ್ ರಾಷ್ಟ್ರದ ಪ್ರಧಾನಿ ಆಟ್ಲಿ, ವಿಲ್ಸನ್, ಎಡ್ವರ್ಡ ಹೀತ್ ಹೆಸರಾಂತ ಭಾರತದ ಲಾಯಬಾರಿ ವಿಜಯಲಕ್ಷ್ಮೀ ಪಂಡಿತ, ಶ್ರೀ ಭಾಗ್ಲು, ಶ್ರೀ ಟಿ. ಎನ್. ಕೌಲ್, ಡಾ| ಚಿವರಾಜ ಮಹೆತಾರಂತವರ ಪ್ರಮುಖ ವ್ಯಕ್ತಿಗಳೊಂದಿಗೆ ಒಡನಾಟ ಹೊಂದುವ ಸದಾವಕಾಶ ಲಭಿಸಿತು.10 ವರ್ಷಗಳ ನಂತರ 1969 ರಲ್ಲಿ ಲಂಡನನಿಂದ ಭಾರತಕ್ಕೆ ಆಗಮಿಸಿದ ನಂತರ ರಾಜಕೀಯಕ್ಕೆ ಧುಮಿಕಿದ ಇವರು. ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಜಿ – ಯವರು ಕಟ್ಟಾ ಬೆಂಬಲಿಗರಾದರು. ಕೆ.ಪಿ.ಸಿ.ಸಿ. (ಐ) ಸದಸ್ಯರಾಗಿ 4 ವರ್ಷ ಸೇವೆ ಸಲ್ಲಿಸಿದರು. ವಿಜಯಪೂರ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿ 3 ವರ್ಷ ಸೇವೆ ಸಲ್ಲಿಸಿದರು. ಜಿಲ್ಲಾವಾರು ಹಿಂದುಳಿದ ಜನಾಂಗದವರ ಸಮಾವೇಶ ಹೊಂದಿ ಅವರ ಕುಂದು-ಕೊರತೆಗಳ ಮನನ ಮತ್ತು ಅಭಿವೃದ್ಧಿಗೆ ಶ್ರಮಿಸಿದರು.1972 ರಲ್ಲಿ ಹೂವಿನ ಹಿಪ್ಪರಗಿ ಮತಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. 1974 ರಲ್ಲಿ ವಿಜಾಪೂರದಲ್ಲಿ ಡಾ| ಬಿ. ಆರ್. ಅಂಬೇಡ್ಕರವರ ಕಂಚಿನ ಪ್ರತಿಮೆಯನ್ನು ಅಂದಿನ ಹಂಗಾಮಿ ರಾಷ್ಟ್ರಪತಿ ಹಾಗೂ ಸಹಪಾಠಿಯಾಗಿದ್ದ ಶ್ರೀ ಬಿ. ಡಿ. ಜತ್ತಿ ಮತ್ತು ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ ಅರಸ ರವರ ಹಸ್ತಾಕ್ಷರದಿಂದ ಅನಾವರಣಗೊಳಿಸಿದ ಹಿರಿಮೆಗೆ ಪಾತ್ರರಾದರು.1977 ಪ್ರಾಧಾನಿ ಇಂದಿರಾ ಗಾಂಧೀಜಿ ಅವರು ನಾಯಕರ ಕಾರ್ಯ ದಕ್ಷತೆಗೆ ಮನ್ನಣೆ ನೀಡಿ ರಾಜ್ಯಸಭಾ ಸದಸ್ಯರ ( M.P) ರನ್ನಾಗಿ ಆಯ್ಕೆ ಮಾಡಿದರು.
1978 ರಲ್ಲಿ ಮಂಡಲ ಆಯೋಗದ ಸದಸ್ಯರಾಗಿ ದೇಶದ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಏಳಿಗೆಗಾಗಿ ದೇಶ ತುಂಬೆಲ್ಲ ಅಧ್ಯಯನ ಮಾಡಿ ಆಯೋಗದ ವರದಿಯಿಂದಾಗಿಯೇ ಉತ್ತರ ಕರ್ನಾಟಕದ ಲಂಬಾಣಿ (ಬಂಜಾರ) ಜನಾಂಗಕ್ಕೆ ಪರಿಶಿಷ್ಟ ಜಾತಿ (SC) ಸೇರಿಸಿದ ಮಹಾನ ನಾಯಕರು.
1980 ರಲ್ಲಿ ಪರಿಶಿಷ್ಟ ಜಾತಿ ವರ್ಗ, ಅಲ್ಪಸಂಖ್ಯಾತರ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ “ಹೈಸರಸ್ಥಾನೆಲ್ ಸದಸ್ಯರಾಗಿ ಕಾರ್ಯನಿರ್ವಹಿಸಿದರು. 1988 ರಲ್ಲಿ ವಿಜಾಪೂರದಲ್ಲಿ ಅಖಿಲಭಾರತ ಬಂಜಾರಾ ಸಮ್ಮೇಳನ ಏರ್ಪಡಿಸಿ ಅಂದಿನ ಕೇಂದ್ರ ಗೃಹಮಂತ್ರಿಯಾಗಿದ್ದ ಶ್ರೀ ಸರದಾರ್ ಬೂಟಾಸಿಂಗ ರವರನ್ನು ಕರೆತಂದು ಸಮ್ಮೇಳನ ಯಶಸ್ವಿಯಾಗಿಸಿದರು.
7ನೇಯ ಪಂಚವಾರ್ಷಿಕ ಯೋಜನಾ ಅಧ್ಯಯನದ ಸದಸ್ಯರಾಗಿದ್ದರಲ್ಲದೆ.ದೂರದೃಷ್ಟಿಯ ನಿರಂತರ ಚಿಂತನಶೀಲರಾಗಿದ್ದ ನಾಯಕರು ಜನಸೇವಾ, ಏಕೈಕ ಮನೋಭಾವದಿಂದ ಜೀವನ ಸ್ವಾರ್ಥಕವಾಗಿಸಿದ ಮತ್ತು ರಾಷ್ಟ್ರದ ಪ್ರಗತಿಗಾಗಿ ದುಡಿದ ಮಹಾನಾಯಕರು 1998 ರ ಸೆಪ್ಟೆಂಬರ್ 2 ರಂದು ತಮ್ಮ 83ನೇ ವಯಸ್ಸಿನಲ್ಲಿ ನಮ್ಮಿಂದ ಅಗಲಿದರು.bಇಂದು ಅವರ ಜನ್ಮದಿನದ ಅಂಗವಾಗಿ ಸ್ವಗ್ರಾಮ ಐನಾಪುರ ತಾಂಡಾದಲ್ಲಿ 110 ನೇಯ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ಗೋರ್ ಸಿಕವಾಡಿ ಕಟಮಾಳೋ ವಿಜಯಪುರ ಜಿಲ್ಲಾ ಘಟಕ ಹಾಗೂ ಐನಾಪುರ ತಾಂಡಾದ ಎಲ್ಲ ಸಮಾಜದ ಸಹಯೋಗದಲ್ಲಿ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಮಹೇಂದ್ರಕುಮಾರ ನಾಯಕ, ಗೋರ್ ಸಿಕಾವಾಡಿ ವಿಜಯಪುರ ಜಿಲ್ಲಾ ಸಂಯೋಜಕ ಪ್ರೊ. ಡಾ. ನಾರಾಯಣ ಪವಾರ, ಡಿ. ಟಿ. ನಾಯಕ, ಮಹಾದೇವ ರಾಠೋಡ, ಕಿರಣ ರಾಠೋಡ, ಡಾ. ಬಾಬು ರಾಠೋಡ, ಡಾ. ಪ್ರಕಾಶ ರಾಠೋಡ, ಡಾ.ಸುರೇಖಾ ರಾಠೋಡ, ಪ್ರೊ.ಸಂಗೀತಾ ರಾಠೋಡ, ನ್ಯಾ. ಅರುಣ ನಾಯಕ, ಬಾಬು ಚವಾಣ, ರವಿ ರಾಠೋಡ, ಚಂದು ಚವಾಣ, ಮತ್ತಿತರರಿದ್ದರು.


















