ವಿಜಯಪುರ ನಗರದಲ್ಲಿ ಜಿಲ್ಲಾಧ್ಯಕ್ಷ ಶ್ರೀ ಸಂಗಮೇಶ ಗುರವ ನೇತೃತ್ವದಲ್ಲಿ ಬಸವಾದಿ ಶರಣ ಶ್ರೀ ಹೂಗಾರ ಮಾದಯ್ಯನವರ ಜಯಂತಿ ಆಚರಣೆ
ವಿಜಯಪುರ: 12ನೇ ಶತಮಾನದ ಶ್ರೇಷ್ಠ ಶರಣರಲ್ಲಿ ಒಬ್ಬರಾದ ಹೂಗಾರ ಮಾದಯ್ಯನವರ ಜಯಂತಿಯನ್ನು ಸರ್ಕಾರದಿಂದಲೇ ಆಚರಣೆ ಮಾಡಲಿ ಎಂದು ಜಿಲ್ಲಾಧ್ಯಕ್ಷ ಸಮಾಜ ಚಿಂತಕ ಶ್ರೀ ಸಂಗಮೇಶ ಗುರವ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ಆಶ್ರಮ ಹತ್ತಿರ ಮಹಾನಗರ ಪಾಲಿಕೆಯ ಸಾರ್ವಜನಿಕ ಉದ್ಯಾನವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾದಯ್ಯನವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದ ಅವರು ಮಾದಯ್ಯನವರು ಬಸವಣ್ಣನವರ ಒಡನಾಡಿಯಾಗಿ ಕಾಯಕ ಮಾಡುತ್ತಾ ಸಮಾಜ ಕಟ್ಟುವ ಕೆಲಸ ಮಾಡಿರುವ ಶರಣರ ತತ್ವ ಆದರ್ಶಗಳು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ, ಹಾಗೂ ಹಿಗ್ಗದೆ ಕುಗ್ಗದೇ ತನುಮನ ಸಾಕ್ಷಿಯಾಗಿ ಅತ್ಯಂತ ಪ್ರಾಮಾಣಿಕವಾಗಿ ಕಂಡು ಕಾಣದಂತೆ ಬದುಕುತ್ತಿದ್ದರು. ಅವರು ಕಾಯಕ ದಾಸೋಹ ಸಿದ್ಧಾಂತದ ಬದುಕು ಕಟ್ಟಿಕೊಂಡಿದ್ದರು.ಹೀಗಾಗಿ ಮನುಕುಲದ ಉದ್ದಾರಕ್ಕಾಗಿ ಶ್ರಮಿಸಿದ ಬಸವಾದಿ ಶ್ರೇಷ್ಠ ಶರಣ ಶ್ರೀ ಹೂಗಾರ ಮಾದಯ್ಯನವರ ಜಯಂತಿಯನ್ನು ಸರ್ಕಾರದಿಂದಲೇ ಆಚರಣೆ ಮಾಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಹೇಶ ಗುರವ, ಸಮಾಜದ ಪದಾಧಿಕಾರಿಗಳಾದ ಶ್ರೀನಿವಾಸ ಸಾಲಿ, ಶ್ರೀ ರಾಮು ಪೂಜಾರಿ, ಶ್ರೀ ಲಕ್ಷ್ಮಣ ಪೂಜಾರಿ, ಶ್ರೀ ಗುರುನಾಥ ಹೂಗಾರ, ಶ್ರೀ ಶಂಕ್ರಪ್ಪ ಹೂಗಾರ, ಶ್ರೀ ರಮೇಶ ಪೂಜಾರಿ, ಶ್ರೀ ವಿಠಲ ಪೂಜಾರಿ, ಶ್ರೀ ಚಿದಾನಂದ ಹೂಗಾರ, ಶ್ರೀ ಬಸವರಾಜ ಹೂಗಾರ, ಶ್ರೀ ಮಂಜುನಾಥ ಹೂಗಾರ, ಶ್ರೀ ವಿಕ್ರಂ ಹೊನವಾಡ, ಶ್ರೀ ಬಸವರಾಜ ತಾಂಬೋಲಿ, ಶ್ರೀ ಸಿದ್ದರಾಮಯ್ಯ ಮಠ ಸೇರಿದಂತೆ ಸಮಾಜದ ಹಲವರು ಉಪಸ್ಥಿತರಿದ್ದರು.


















