ಒಳಮೀಸಲಾತಿಯಲ್ಲಿ ಬಂಜಾರ ಸಮಾಜಕ್ಕೆ ಮಾಡಿದ ಅನ್ಯಾಯ
ವಿಜಯಪುರ – ಗೋರ ಸೇನಾ ರಾಷ್ಟ್ರೀಯ ಸಂಘಟನೆ ವತಿಯಿಂದ ವಿಷಯ ಸಚಿವ ಸಂಪುಟದ ಸಭೆಯಲ್ಲಿ ಒಳಮೀಸಲಾತಿಯಲ್ಲಿ ಬಂಜಾರ ಸಮಾಜಕ್ಕೆ ಮಾಡಿದ ಅನ್ಯಾಯ ವಾಗಿರುವುದನ್ನು ಖಂಡಿಸಿ ಅಪಾರ ಜಿಲ್ಲಾಧಿಕಾರಿಗಳಾದ ಸೋಮನಿಂಗ ಗೆನ್ನೂರ ಅವರಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಗೋರ ಸೇನಾ ರಾಷ್ಟ್ರೀಯ ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಅರುಣ್ ನಾಯಕ ಮಾತನಾಡಿ ಕೋಲಂಬೊ(ಕೊರಮ, ಕೊರಚ್, ಲಂಬಾಣಿ & ಭೋವಿ) ಸಮಾಜಕ್ಕೆ ಒಳಮಿಸಲಾತಿಯಲ್ಲಿ ಶೇಕಡಾ ೭% ಕೊಡುವಂತೆ ಅಗ್ರಹಿಸುತ್ತೇವೆ ನಾಗಮೋಹನದಾಸ ವರದಿಯ ಪ್ರಕಾರ ಕೋಲಂಬೊ (ಕೊರಚ್, ಕೊರಮ, ಲಂಬಾಣಿ ಮತ್ತು ಭೋವಿ ) ಸಮಯದ ಜನಸಂಖ್ಯೆ ಬಲಗೈ ಹಾಗೂ ಎಡಗೈ ಸಮಾಜದ ಜನಸಂಖ್ಯೆಕ್ಕಿAತ ಹೆಚ್ಚಿದೆ ಶೈಕ್ಷಣಿಕ, ರಾಜಕೀಯ & ಆರ್ಥಿಕವಾಗಿಯೂ ಮಾದಿಗ ಸಮಾಜ ಮೊದಲನೆಯ ಸ್ಥಾನಲ್ಲಿದ್ದ ಮೇಲಿನ ಎರಡು ದತ್ತಾವಂಶವನ್ನು ಗಮನಿಸಿದಾಗ ಕೋಲಂಬೊ ಸಮಾಜ ಹಿಂದುಳಿದಿರುವುದ ವರದಿಯಿಂದ ಗೊತ್ತಾಗುತ್ತೆ. ಅಲ್ಲದೆ ಇನ್ನು ಸೌಲಭ್ಯದಿಂದ ವಂಚಿತರಾದ ೫೯ ಜಾತಿಗಳನ್ನು ನಮ್ಮೊಟ್ಟಿಗೆ ಸೇರಿಸಿದ್ದೀರಿ ಹೀಗಾಗಿ ಈ ಸಮಾಜಕ್ಕೆ ಹೆಚ್ಚಿನ ಪ್ರಧಾನ್ಯತೆ ಕೊಡಬೇಕಾದರೆ ಈ ಸಮಾಜಕ್ಕೆ ೭% ಒಳಮೀಸಲಾತಿ ಕೊಡಬೇಕೆಂದು ಆಗ್ರಹಿಸುತ್ತೇವೆ ೩.೧೭% ಮೀಸಲಾತಿ ಏರಿಯಾಗಿದ್ದು ಸ್ವೀಕಾರ ಆಗಿದೀಯಾ?ಸ್ಪರ್ಶ ಹಾಗೂ ಅಸ್ಪರ್ಶ ಕಾನೂನು ಬಾಹಿರ ಪದವೆಂದು ಮಾನ್ಯ ಸುಪ್ರೀಂಕೋರ್ಟ್ ಹೇಳಿದೆ ಆದರೂ ಬಳಕೆ ಒಳಮೀಸಲಾತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಆದರೂ ಮಾಡಿದ್ದೀರಿಮಾನ್ಯ ನಾಗಮೋಹನದಾಸರ ವರದಿ ದೋಷಪುರಿತವಾಗಿದೆ ಎಂದರು ಈ ಸಂದರ್ಭದಲ್ಲಿ ಗೋರ ಸೇನಾ ರಾಷ್ಟ್ರೀಯ ಸಂಘಟನೆ ಜಿಲ್ಲಾ ಉಪಾಧ್ಯಕ್ಷರಾದ ಬಾಬು ಚವಾಣ್ ಶಾರದಾ ಬಾಯಿ ಚವಾಣ್ ಕಸ್ತೂರಿಬಾಯಿ ಚೌಹಾಣ್ ಮತ್ತಿತರರು ಉಪಸ್ಥಿತರಿದ್ದರು.


















