ಮುದ್ದೇಬಿಹಾಳ: ಮತಕಳ್ಳತನ ಖಂಡಿಸಿ ಮುದ್ದೇಬಿಹಾಳ
ಎನ್ಎಸ್ಯುಐ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಭಾನುವಾರ ನಗರದ ಸಾರಿಗೆ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ವೋಟ್ ಚೋರಿ’ ಪ್ರಕರಣ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಬಸ್ಗಳಿಗೆ ಪೋಸ್ಟರ್ ಹಾಗೂ ಸ್ಪೀಕರ್ ಅಂಟಿಸಲಾಯಿತು. ಇತರೆ ವಾಹನ ಹಾಗೂ ಗೋಡೆಗಳಿಗೂ ಅಂಟಿಸಲಾಯಿತು.
ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಮಾತನಾಡಿ, ನರೇಂದ್ರ ಮೋದಿ ಮತಗಳ್ಳತನದಿಂದ ಪ್ರಧಾನಿಯಾಗಿದ್ದಾರೆ ಎಂಬುದು ಹಲವು ಘಟನೆಗಳಿಂದ ಸಾಬೀತಾಗುತ್ತಿದೆ. ಜನರಿಂದ ಮತಗಳಿಸದೇ ಮತಗಳ್ಳತನ ಮಾಡಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ
ಪಲ್ಲವಿ ನಾಡಗೌಡ ಮಾತನಾಡಿ, ಮುದ್ದೇಬಿಹಾಳ ಮತಕ್ಷೇತ್ರದಲ್ಲೂ ಅಲ್ಪಸಂಖ್ಯಾತ ಸಮುದಾಯದ ಹಲವರ ಮತಗಳು ಮತಪಟ್ಟಿಯಲ್ಲಿ ಕಾಣೆಯಾಗಿವೆ. ಅವರು ಜೀವಂತ ಇದ್ದರೂ ಅವರ ಹೆಸರು ಪಟ್ಟಿಯಲ್ಲಿ ಡಿಲೀಟ್ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಮೊಹಮ್ಮದ್ ಇಲಿಯಾಸ್ ಢವಳಗಿ, ವಿಜಾಪುರ ಜಿಲ್ಲಾ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ರಫೀಕ್ ಶಿರೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಚಲವಾದಿ, ರಾಜು ರಾಯಗೊಂಡ, ಸಿಕಂದರ್ ಜಾನ್ವೆಕರ್,, ಶರಣು ಚಲವಾದಿ, ಅಬೂಬಕರ್ ಹಡಗಲಿ, ರಂಜಾನ್ ನದಾಫ, ಸಂಗಮೇಶ ಚಲವಾದಿ, ಜಾಕಿರ್ ಮೂಲಮನಿ, ಗುರು ಬಿರಾದಾರ,
ತೌಸಿಫ್ ನಾಯ್ಯೋಡಿ, ಕಮಲಾ ಭಜಂತ್ರಿ, ಮಹಬೂಬಿ ಬಾಗವಾನ, ನೀಲಮ್ಮ ಚಲವಾದಿ,ಶಿವಲೀಲಾ ಬಿರಾದಾರ್, ಸೇರಿದಂತೆ ಉಪಸ್ಥಿತರಿದ್ದರು.