ಹೆಸ್ಕಾಂ ಕಚೇರಿ ಎದುರು ರೈತರಿಂದ ಬೃಹತ ಪ್ರತಿಭಟನೆ
ಸರಿಯಾದ ವಿದ್ಯುತ್ ಪೂರೈಕೆ ಆಗ್ರಹಿಸಿ ರೈತರಿಂದ ಪ್ರತಿಭಟನೆ
ಇಂಡಿ : ತಾಲೂಕಿನ ಹಿರೇಬೇವನೂರ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಿAದ ಸರಿಯಾಗಿ ವಿದ್ಯುತ್ ವಿತರಣೆಯಾಗುತ್ತಿಲ್ಲ ಎಂದು ಆಗ್ರಹಿಸಿ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.
ಹಗಲು ಹೊತ್ತಿನಲ್ಲಿ ಏಳು ಗಂಟೆ ಸರಿಯಾಗಿ ವಿದ್ಯುತ್ ವಿತರಣೆ ಮಾಡಬೇಕು. ಆದರೆ ಪ್ರತಿ ಗಂಟೆಗೆ ವಿದ್ಯುತ್ ಹೋಗುತ್ತದೆ. ನಂತರ ಕನಿಷ್ಠ ಒಂದು ತಾಸು ಬರುವದಿಲ್ಲ. ಒಟ್ಟು ಏಳು ಗಂಟೆಯಲ್ಲಿ ಮೂರು ಗಂಟೆಯೂ ವಿತರಣೆಯಾಗುತ್ತಿಲ್ಲ ಎಂದರು.
ಇಲಾಖೆಗೆ ಕೇಳಿದರೆ ಗಾಳಿ ಬಹಳ ಇದೆ. ಹೀಗಾಗಿ ಎಲ್ಲಿಯಾದರೂ ಗಿಡಮರಗಳಿಂದ ತೊಂದರೆಯಾಗಿರಬಹುದು ಎಂಬುದು ಹಾರಿಕೆಯ ಉತ್ತರ ನೀಡುತ್ತಾರೆ. ನಾವು ತಪಾಸಣೆ ಮಾಡುತ್ತಿದ್ದೇವೆ. ಪಾಲ್ಟ ಎಲ್ಲಿ ಇದೆ ಸಿಗುತ್ತಿಲ್ಲ ಎಂಬ ಉತ್ತರ ಸದಾ ಇರುತ್ತದೆ. ಹೀಗಾಗಿ ರೈತರ ಮೋಟಾರುಗಳು ಮತ್ತು ಟ್ರಾನ್ಸಫಾರಮರಗಳು ಸುಡುತ್ತಿವೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಅಂದಾಜು ಮೂವತ್ತು ಸಾವಿರ ಹೇಕ್ಟರ ಪ್ರದೇಶದಲ್ಲಿ ಇದೇ ಬಾರಿ ಕಬ್ಬು ಮತ್ತು ಕಳೆದ ಬಾರಿ ಕಬ್ಬು ಇದೆ. ಹೀಗಾಗಿ ನೀರಿನ ಅವಶ್ಯಕತೆ ಇದೆ. ಮತ್ತು ರೈತರು ತೊಗರಿ, ಮೆಕ್ಕೆಜೋಳ ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದು ಇತ್ತ ಮಳೆಯೂ ಬಾರದೇ ರೈತರು ತೊಂದರೆಯಲ್ಲಿದ್ದಾರೆ. ಇತ್ತು ವಿದ್ಯುತ್ ಕಾಡುತ್ತಿದೆ ಎಂದರು.
ವಿದ್ಯುತ್ ಇಲಾಖೆ ಕೆಳ ಮಟ್ಟದ ಅಧಿಕಾರಿಗಳಿಗೆ ಫೋನು ಮಾಡಿದರೆ ಹಾರಿಕೆ ಉತ್ತರ ಕೊಡುತ್ತಾರೆ. ಹೀಗಾಗಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸರಿಯಾದ ವಿದ್ಯುತ್ ಕೊಡುವ ಭರವಸೆ ನೀಡಬೇಕೆಂದು ಪಟ್ಟು ಹಿಡಿದರು.
ಆದರೆ ಸ್ಥಳಕ್ಕೆ ಯಾವದೇ ಅಧಿಕಾರಿಗಳು ಭೇಟಿ ನೀಡಲಿಲ್ಲ.
ಪ್ರತಿಭಟನೆಯಲ್ಲಿ ಗುರು ಅಜಗೊಂಡ, ಪ್ರಭು ಗೋಳಸಾರ, ನಿಂಗು ಚಿಕ್ಕಮಣೂರ, ಬಸವರಾಜ ಹೊಸಮನಿ, ಗಡ್ಡೆಪ್ಪ ಆಳೂರ, ಮಲ್ಲು ಪರೀಟ್, ರಮೇಶ ಅರಸನವರ, ಸಿದ್ದು ಪೂಜಾರಿ, ಶಿವು ಇರಗೊಂಡ, ಪ್ರಫುಲ ಲಾಳಸಂಗಿ, ಸಂಜು ತಳವಾರ, ಅಮಸಿದ್ದ ಬಿರಾದಾರ, ಆನಂದ ಗೋಳಸಾರ, ಬಾಬು ಚಿಕ್ಕಮಣೂರ, ಅನೀಲ ಬಿಸನಾಳ, ಸಿದಗೊಂಡ ಪೂಜಾರಿ, ಕೃಷ್ಣಾ ಮಕಣಾಪುರ, ನಾಗು ಲಾಳಸಂಗಿ ಮತ್ತಿತರಿದ್ದರು.