ಕಾಂಗ್ರೆಸ್ ಸರ್ಕಾರದ ವೈಫಲ್ಯಗಳಿಗೆ 100% ನೀಡುವೆ..! ಕಾರಜೋಳ
ವಿಜಯಪುರ : ಅನೇಕ ಸಾಧನೆಗಳನ್ನು ಮಾಡಿರುವ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರು ೦% ಸಾಧನೆ ಎಂದಿದ್ದಾರೆ, ರಾಜ್ಯ ಸರ್ಕಾರ ವೈಫಲ್ಯಗಳಿಗೆ ೧೦೦% ನೀಡುವೆ ಎಂದು ಬಿ.ಜೆ.ಪಿ ಎಸ್ ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.
ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಂತರ ಆ ವರ್ಗಗಳ ಕಲ್ಯಾಣಕ್ಕೆ ಇರಿಸಿದ ಎಸ್.ಸಿ.ಎಸ್. ಪಿ ಟಿಎಸ್.ಪಿ ಅನುದಾನ ಸರಿಸುಮಾರು ೩೬ ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಿರುವ ವೈಫಲ್ಯಕ್ಕೆ ೧೦೦% ಕೊಡುವೆ.
ಇತಿಹಾಸದಲ್ಲಿಯೇ ಅತೀ ಹೆಚ್ಚು ಹಿಂದೆಂದಿಗಿಂತಲೂ ಸಾಲ ಮಾಡಿದ ಅಪಕೀರ್ತಿ ಮಾಡಿರುವಲ್ಲಿ ಈ ಕಾಂಗ್ರೆಸ್ ಸರ್ಕಾರಕ್ಕೆ ೧೦೦% ಕೊಡುವೆ. ನೀತಿ ಆಯೋಗದ ಸಭೆಗೆ ರಾಜಕೀಯ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಾಗದೇ ರಾಜ್ಯಕ್ಕೆ ಬರಬೇಕಾದ ಅನುದಾನ ಪಡೆಯಲು ವೈಫಲ್ಯವಾಗಿರುವಲ್ಲಿಯೂ ಕಾಂಗ್ರೆಸ್ ಸರ್ಕಾರಕ್ಕೆ ೧೦೦% ನೀಡುವೆ.
ಕೃಷ್ಣೆಗೆ ಒಂದೇ ಒಂದು ರೂ. ಅನುದಾನ ನೀಡಿಲ್ಲ ಈ ವೈಫಲ್ಯಕ್ಕೂ ಶೇ.೧೦೦ ರಷ್ಟು, ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಸ್ಮಾರ್ಟ್ ಮೀಟರ್ ಅಳವಡಿಕೆ ಹಗರಣ ಹೀಗೆ ಹಗರಣಗಳಿಗೂ ಶೇ.೧೦೦ ನೀಡುವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.