ಇಂಡಿ | ಬಸ್, ಲಾರಿ ಮಧ್ಯ ಅಪಘಾತ ನಡೆದಿಲ್ಲ..! ಹಾನಿಯಾಗುವ ಸಂಭವ ಹೆಚ್ಚಿದೆ.! ಆಗಿದ್ದೇನು..?
ಇಂಡಿ : ಸರಕಾರಿ ಬಸ್ ಮತ್ತು ಲಾರಿ ಮಧ್ಯ ಅಪಘಾತ ನಡೆದಿಲ್ಲ. ಆದರೆ ಅಪಘಾತ ನಡೆದಂತೆ ಕಾಣುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನಡೆದಿದೆ.
ಇಂಡಿ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ತೆರಳುತ್ತೀರುವ ಬಸನಾಳ, ಕೊಟ್ನಾಳ್ ಸರಕಾರಿ ಸಾರಿಗೆ ಬಸ್ಸು KA28 – F1937 ಸಂಖ್ಯೆ ಹೊಂದಿರುವ ಬಸ್ಸು ಮತ್ತು ಇಂಡಿ ನಗರಕ್ಕೆ ತೆರಳುತ್ತೀರುವ KA23 -6317 ಸಂಖ್ಯೆ ಹೊಂದಿರುವ ಲಾರಿ ಮಧ್ಯೆ ಅಪಘಾತ ನಡೆದಿಲ್ಲ .ಆದರೆ ಅಪಘಾತ ನಡೆದಂತೆ ಕಾಣುತ್ತದೆ. ಇನ್ನೂ ಹಾನಿಯಾಗುವ ಸಂಭವ ಕೂಡಾ ಹೆಚ್ಚಾಗಿ ಕಾಣುತ್ತಿದೆ.
ಹೌದು ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಸೋಮಯ್ಯ ನಗರ ಹತ್ತೀರ ಎರಡು ವಾಹನಗಳು ಒಂದಕ್ಕೊಂದು ಅಂಟಿಕೊಂಡು ನಿಂತಿವೆ. ಅವುಗಳನ್ನು ಬಿಡಿಸಲು ಅನೇಕ ಹರಸಾಹಸ ಕಾರ್ಯಗಳು ಸ್ಥಳೀಯ ಸಹಕಾರದಿಂದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪ್ರತಿಫಲ ಸಿಗುವ ಭರವಸೆ ಕಾಣುತ್ತಿಲ್ಲ.
ಇದಕ್ಕೆಲ್ಲ ಕಾರಣ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿಸುವ ರಾಷ್ಟ್ರೀಯ ಹೆದ್ದಾರಿ 548(B) ಕಾಮಗಾರಿ ನಿಧಾನಗತಿ ಮತ್ತು ರಸ್ತೆ ಯೋಜಿತ ರೂಪದಲ್ಲಿ ನಡದೆ ಇರುವ ಕಾರಣ.
ಅದಲ್ಲದೇ ಮಳೆ ಬಂದು ಸಂಪೂರ್ಣ ರಸ್ತೆ ಹದಗೆಟ್ಟಿದ್ದು, ವಾಹನಗಳ ಟಾಯರ್ ಜರಿಯುತ್ತಿವೆ. ಆದ್ದರಿಂದ ಒಂದಕ್ಕೊಂದು ವಾಹನಗಳು ಅಂಟಿ ನಿಂತುಕೊಳ್ಳುತ್ತಿವೆ.ಆದರೆ ವಾಹನಗಳ ಅಂಟು ಬಿಡಿಸುವ ತುಂಬಾ ಕಷ್ಟಕರ. ಅದಲ್ಲದೇ ಈ ವಾಹನಗಳು ಹಾನಿ ಅನುಭವಿಸುವ ಸಂಭವ ಕೂಡಾ ಇದೆ.
ಇನ್ನೂ ಬಸ್ಸಲ್ಲಿರು ಪ್ರಯಾಣಿಕರಿಗೆ ಯಾವುದೇ ಹಾನಿ ಯಾಗಿರುವುದಿಲ್ಲ ಎಂದು ಪ್ರಾಥಮಿಕ ಮೂಲದಿಂದ ತಿಳಿದು ಬಂದಿದ್ದು, ಟ್ರಾಪಿಕ್ ನಿಂದ ವಾಹನಗಳು ಹೆಚ್ಚಾಗಿ ನಿಂತಿವೆ ಎಂದು ತಿಳಿದು ಬಂದಿದೆ. ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


















