ಇಂಡಿ ಕ್ಷೇತ್ರದಲ್ಲಿ ಜಿಟಿಟಿಸಿ ಕೋರ್ಸ ಆರಂಭಕ್ಕೆ ಕ್ಷಣಗಣನೆ : ಶಿಕ್ಷಣ ಪ್ರೇಮಿ ಮುಜಗೊಂಡ ಹರ್ಷ

ಇಂಡಿ: ಇಂಡಿ ಪಟ್ಟಣದಲ್ಲಿ ವಿದ್ಯಾರ್ಥಿಗಳ ಆಶಾಕಿರಣ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ.( Government tools room nd training centre) ಈ ಭಾಗದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಸದ್ದಿಲ್ಲದ ಪ್ರಯತ್ನದ ಫಲವಾಗಿ ಮಂಜೂರಾಗಿದೆ. ಪಟ್ಟಣದಲ್ಲಿ ಈ ಕೇಂದ್ರ ಸ್ಥಾಪನೆಗೆ ಕಟ್ಟಡ ಕಾಮಗಾರಿ ಭರದಿಂದ ಸಾಗಿದ ಸಂಗತಿ ಈ ಭಾಗದ ಜನರಲ್ಲಿ ಹರ್ಷ ತಂದಿದೆ ಎಂದು ಶಿಕ್ಷಣ ಪ್ರೇಮಿ ಡಿ.ಎ. ಮುಜಗೊಂಡ ಸಂತಸ ವ್ಯಕ್ತಪಡಿಸಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ತಾಂತ್ರಿಕ ಕೌಶಲ್ಯ, ಈಗಿನ ಇಂಡಸ್ಟ್ರೀ ಗಳು ಬಯಸುವ ಇವೇ ಮುಂತಾದ ತರಬೇತಿಗಳನ್ನು ಈ GTTC ಕೇಂದ್ರದ ಮೂಲಕ ಪಡೆದು ನಮ್ಮ ಭಾಗದ ವಿದ್ಯಾರ್ಥಿಗಳು ಉದ್ಯೋಗಿಗಳಾಗಿ ಬದುಕನ್ನು ಕಟ್ಟಿಕೊಳ್ಳಲಿ ! ತನ್ಮೂಲಕ ಯಾರೂ ಬೇಡಿಕೆಯನ್ನಿಡದಿದ್ದರೂ ಗಡಿ ಭಾಗದ ನಮ್ಮ ಇಂಡಿಗೆ ಈ ತರಬೇತಿ ಕೇಂದ್ರವನ್ನು ಮಂಜೂರು ಮಾಡಿಸಿದ ಶಾಸಕರ ಕಾರ್ಯ ಶ್ಲಾಘನೀಯ ಎಂದರು.
ಇದು ಯಾವುದು GTTC ? ನನ್ನಂತವನಿಗೂ ವಿಜಯಪೂರ ಜಿಲ್ಲೆಯ ಹೆಚ್ಚಿನ ಜನರಿಗೂ ಇದು ಹೊಸ ಪರಿಚಯ ವಾಯಿತೇನೋ..? ಇಲ್ಲೇ ಪಕ್ಕದ ಕೂಡಲಸಂಗಮ, ಲಿಂಗಸುಗೂರು ಗಳಂತಹ ಹಿಂದುಳಿದ ಪ್ರದೇಶಗಳಲ್ಲಿಯೂ ಸಹಿತ ಜಿಟಿಟಿಸಿ ಕೇಂದ್ರಗಳಿವೆ. ಆದರೆ ನಮ್ಮ ವಿಜಯಪೂರ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿಯೂ ಸಹಿತ ಈ ಕೇಂದ್ರವಿಲ್ಲ ಎನ್ನುವುದರಲ್ಲಿಯೇ ನಮ್ಮನ್ನಾಳಿದ ನಾಯಕರ ದೂರದೃಷ್ಟಿಯ ಕೊರತೆ, ಸಮಾಜದ ಕಟ್ಟಕಡೆಯ ಉದ್ಯೋಗಾಕಾಂಕ್ಷಿಗಳ ಬಗೆಗಿರುವ ತಾತ್ಸಾರ ಎದ್ದು ತೋರುತ್ತದೆ. ಕೆಳಮಧ್ಯಮ ಮತ್ತು ಕೆಳಹಂತದ ವಿದ್ಯಾರ್ಥಿಗಳೆಲ್ಲರೂ BE, BCA, ಮೊದಲಾದ ಕೋರ್ಸುಗಳನ್ನು ಓದದಾಗದೇ ಇರಬಹುದು, ಅಂತಹ ಪಾಲಕರ ಮಕ್ಕಳ ಹಿತದೃಷ್ಟಿಯಿಂದ ಇಂತಹ ತರಬೇತಿ ಕೇಂದ್ರದ ಅವಶ್ಯಕತೆ ತುಂಬಾ ಇದೆ. ಅತಿಮುಖ್ಯವಾಗಿ ರೋಬೋಟೆಕ್ಸ ಮತ್ತು ಅಟೋಮಷಿನ್ ನಂತಹ ಕೋರ್ಸಗಳಲ್ಲಿ ತಾಂತ್ರಿಕ ತರಬೇತಿ ಪಡೆದವರನ್ನು ಬೆಂಗಳೂರು ಮತ್ತು ಮುಂಬಯಿದಂತಹ ಉದ್ಯೋಗದಾತ ನಗರಗಳು ಕೈ ಬೀಸಿ ಕರೆಯಬಹುದು ಮಾತ್ರವಲ್ಲದೆ ಖಚಿತ ಉದ್ಯೋಗದ ಭರವಸೆ ನೀಡುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















