ಇಂಡಿ : ಉತ್ತರ ಕರ್ನಾಟಕದಲ್ಲಿ ಎಳ್ಳು ಅಮವಾಸ್ಯೆ ದಿನ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ವರ್ಷಕ್ಕೊಂದು ಬಾರಿ ಕೃಷಿಕರು ತಮ್ಮ ಹೊಲಗಳಿಗೆ ಚರಗದ ಮೂಲಕ ನೈವೇದ್ಯ ಅರ್ಪಿಸುತ್ತಾರೆ. ರೈತರು ಹೊಲಗಳಿಗೆ ತೆರಳಿ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಸೋಮವಾರ ಕಂಡುಬಂದಿತು.
ಎಳ್ಳ ಅಮಾವಾಸ್ಯೆ ದಿನ ಎತ್ತಿನ ಚಕ್ಕಡಿ, ದ್ವಿಚಕ್ರ, ಟ್ರಾö್ಯಕ್ಟರ್, ಟಂಟಂ, ಜೀಪು, ಕಾರು, ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಭಾಗದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯಿಂದ ಈ ವರ್ಷ ನೀರು ಚೆನ್ನಾಗಿ ಬಿದ್ದಿರುವುದರಿಂದ ಬೆಳೆಗಳು ಚೆನ್ನಾಗಿಬೆಳೆದವೆ. ಹೊಲವನ್ನೇ ನೋಡದ ವ್ಯಾಪಾರಿಗಳು ನೌಕರರು ಸಾಂಪ್ರದಾಯಕ ಚರಗ ಚೆಲ್ಲುವ ಉದೇಶದಿಂದ ಹೊಲಗಳಿಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿದರು.
ಶೇಂಗಾ ಹೋಳಿಗೆ, ಸಜ್ಜಿ ಕಡುಬ, ಕಡಕ ರೋಟ್ಟಿ, ಪುಂಡಿಪಲ್ಲೆ, ಜೋಳದ ಕಿಚಡಿ, ಶೇಂಗಾ ಚಟ್ನಿ, ಉಪ್ಪಿನಾಕಾಯಿ ರೈತರ ಮನೆಯಲ್ಲಿ ಎಳ್ಳ ಅಮಾವಾಸ್ಯೆ ಹಬ್ಬಕಾಗಿ ಇಡಿ ರಾತ್ರಿ ಮಹಿಳೆಯರು ವಿವಿಧ ತರಹದ ಅಡುಗೆ ತಯಾರಿಸುವುದರಲ್ಲಿ ನಿರತಂರಾಗಿರುತ್ತಾರೆ. ನಂತರ ಬುಟ್ಟಿಯಲ್ಲಿ ನೈವೇದ್ಯ ಮತ್ತು ಅಡುಗೆ ತುಂಬಿಕೊAಡು, ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ತೊಟ್ಟು, ಮಹಿಳೆಯರು ಇಲಕಲ್ ಸೀರೆಗಳನ್ನು ಉಟ್ಟು ಎತ್ತಿನ ಚಕ್ಕಡಿಯಲ್ಲಿ ಕುಳಿತ್ತು ಹೋಲಗಳಿಗೆ ಸಾಗುತ್ತಾರೆ. ಹೀಗೆ ಗ್ರಾಮೀಣ ಪ್ರದೇಶದಲ್ಲಿ ಸಾಲು ಸಾಲುಗಿ ಹೋಲದ ಕಡೆ ಹೋಗುವುದು ನೋಡಲೆರಡು ಕಣ್ಣು ಸಾಲದು.
ಹೋಲದ ಬನ್ನಿ ಗಿಡದ ಕೆಳಗೆ ಲಕ್ಷಿö್ಮÃ ದೇವರೆಂದು ಕರೆಯುವ ದೇವತೆಯನ್ನು ಐದು ಕಲ್ಲುಗಳನಿಟ್ಟು ಸಾಂಕೇತಿಕವಾಗಿ ಪೂಜೆ ಸಲ್ಲಿಸುತ್ತಾರೆ. ನಂತರ ನೈವೇಧ್ಯವನ್ನು ಅರ್ಪಿಸಿ ಬೆಳೆ ಚನ್ನಾಗಿ ಬೆಳೆಯಲಿ ತಾಯಿ ಎಂದು ಬೇಡಿಕೊಂಡರು. ನಂತರ ಸಜ್ಜಿ ರೊಟ್ಟಿ ಚೋಳಿಕಾಯಿ ಚೋಂಗಿ ಬಲೋ ಎನ್ನುತ್ತಾ ಹೋಲದ ತುಂಬೆಲ್ಲಾ ನೈವೇದ್ಯ ಸಿಂಪರಿಸಿ ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಕುಳಿತು ಸಹ ಭೋಜನೆ ಸವಿಯುತ್ತಾರೆ.
ತಾಂಬಾ ಗ್ರಾಮದಲ್ಲಿ ಸೋಮವಾರ ರೈತರು ಹೋಲದಲ್ಲಿ ಚರಗ ಚೆಲ್ಲಿ ಭೋತಾಯಿಗೆ ನೈವೇಂದ್ಯ ಅರ್ಪಿಸುವ ದೃಶ್ಯ.
ತಾಂಬಾ ಗ್ರಾಮದಲ್ಲಿ ಸೋಮವಾರ ಸಜ್ಜಿ ರೊಟ್ಟಿ ಚೋಳಿಕಾಯಿ ಚೋಂಗಿ ಬಲೋ ಎನ್ನುತ್ತಾ ಹೋಲದ ತುಂಬೆಲ್ಲಾ ನೈವೇದ್ಯ ಸಿಂಪರಿಸಿ ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಕುಳಿತು ಸಹ ಭೋಜನೆಯಲ್ಲಿ ಪಾಲ್ಗೊಂಡಿರುವುದು.