• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ದ್ವಿತೀಯ ಪಿಯುಸಿಯ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ

    ದ್ವಿತೀಯ ಪಿಯುಸಿಯ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ

    ಸಂಸ್ಕರಿಸಿದ ಶುದ್ಧ ನೀರನ್ನು ಹಂಚಿನಾಳ ಕೆರೆಗೆ ಪುರೈಸಿ: ಜಿಲ್ಲಾ ಉಸ್ತುವಾರಿ‌ ಸಚಿವ ಡಾ.‌ಎಂ.ಬಿ.ಪಾಟೀಲ

    ಸಂಸ್ಕರಿಸಿದ ಶುದ್ಧ ನೀರನ್ನು ಹಂಚಿನಾಳ ಕೆರೆಗೆ ಪುರೈಸಿ: ಜಿಲ್ಲಾ ಉಸ್ತುವಾರಿ‌ ಸಚಿವ ಡಾ.‌ಎಂ.ಬಿ.ಪಾಟೀಲ

    ಭಾರತ ಜನಗಣತಿ-2027 ಸಿದ್ಧರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ

    ಭಾರತ ಜನಗಣತಿ-2027 ಸಿದ್ಧರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ

    ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ: ಸಚಿವ ಡಾ: ಎಂ ಬಿ ಪಾಟೀಲ

    ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ: ಸಚಿವ ಡಾ: ಎಂ ಬಿ ಪಾಟೀಲ

    ವಿಕಸಿತ ಭಾರತದ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮ

    ವಿಕಸಿತ ಭಾರತದ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮ

    ಆಲಮಟ್ಟಿಯಲ್ಲಿ ನಿರ್ಮಾಣವಾದ ಜಲ ಮನೋರಂಜನಾ ಉದ್ಯಾನವನ

    ಆಲಮಟ್ಟಿಯಲ್ಲಿ ನಿರ್ಮಾಣವಾದ ಜಲ ಮನೋರಂಜನಾ ಉದ್ಯಾನವನ

    ಮುದ್ದೇಬಿಹಾಳ ತಾ.ಪಂ. ನೂತನ ಸಹಾಯಕ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕೋರಿ ಅಧಿಕಾರ ಸ್ವೀಕಾರ

    ಮುದ್ದೇಬಿಹಾಳ ತಾ.ಪಂ. ನೂತನ ಸಹಾಯಕ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕೋರಿ ಅಧಿಕಾರ ಸ್ವೀಕಾರ

    ಡಿಜಿಟಲ್ ಸಾಕ್ಷರತೆ ಇಂದಿನ ಅನಿವಾರ್ಯತೆ: ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ

    ಡಿಜಿಟಲ್ ಸಾಕ್ಷರತೆ ಇಂದಿನ ಅನಿವಾರ್ಯತೆ: ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ

    ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

    ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

    ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

    ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ದ್ವಿತೀಯ ಪಿಯುಸಿಯ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ

      ದ್ವಿತೀಯ ಪಿಯುಸಿಯ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ

      ಸಂಸ್ಕರಿಸಿದ ಶುದ್ಧ ನೀರನ್ನು ಹಂಚಿನಾಳ ಕೆರೆಗೆ ಪುರೈಸಿ: ಜಿಲ್ಲಾ ಉಸ್ತುವಾರಿ‌ ಸಚಿವ ಡಾ.‌ಎಂ.ಬಿ.ಪಾಟೀಲ

      ಸಂಸ್ಕರಿಸಿದ ಶುದ್ಧ ನೀರನ್ನು ಹಂಚಿನಾಳ ಕೆರೆಗೆ ಪುರೈಸಿ: ಜಿಲ್ಲಾ ಉಸ್ತುವಾರಿ‌ ಸಚಿವ ಡಾ.‌ಎಂ.ಬಿ.ಪಾಟೀಲ

      ಭಾರತ ಜನಗಣತಿ-2027 ಸಿದ್ಧರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ

      ಭಾರತ ಜನಗಣತಿ-2027 ಸಿದ್ಧರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ

      ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ: ಸಚಿವ ಡಾ: ಎಂ ಬಿ ಪಾಟೀಲ

      ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ: ಸಚಿವ ಡಾ: ಎಂ ಬಿ ಪಾಟೀಲ

      ವಿಕಸಿತ ಭಾರತದ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮ

      ವಿಕಸಿತ ಭಾರತದ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮ

      ಆಲಮಟ್ಟಿಯಲ್ಲಿ ನಿರ್ಮಾಣವಾದ ಜಲ ಮನೋರಂಜನಾ ಉದ್ಯಾನವನ

      ಆಲಮಟ್ಟಿಯಲ್ಲಿ ನಿರ್ಮಾಣವಾದ ಜಲ ಮನೋರಂಜನಾ ಉದ್ಯಾನವನ

      ಮುದ್ದೇಬಿಹಾಳ ತಾ.ಪಂ. ನೂತನ ಸಹಾಯಕ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕೋರಿ ಅಧಿಕಾರ ಸ್ವೀಕಾರ

      ಮುದ್ದೇಬಿಹಾಳ ತಾ.ಪಂ. ನೂತನ ಸಹಾಯಕ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕೋರಿ ಅಧಿಕಾರ ಸ್ವೀಕಾರ

      ಡಿಜಿಟಲ್ ಸಾಕ್ಷರತೆ ಇಂದಿನ ಅನಿವಾರ್ಯತೆ: ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ

      ಡಿಜಿಟಲ್ ಸಾಕ್ಷರತೆ ಇಂದಿನ ಅನಿವಾರ್ಯತೆ: ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ

      ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

      ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

      ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

      ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ರಾಜ್ಯ

      ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ..!

      Voiceofjanata.in

      October 23, 2024
      0
      ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ..!
      0
      SHARES
      191
      VIEWS
      Share on FacebookShare on TwitterShare on whatsappShare on telegramShare on Mail

      ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ..!

       

      ವಿಜಯಪುರ, ಅ. 23: ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಪ್ರಾತಃಸ್ಮರಣೀಯರ ಜನಪರ ಕಾರ್ಯ ಸದಾ ಅಜರಾಮರವಾಗಿರಲಿದೆ ಎಂದು ನಗರದ ಶ್ರೀ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ ಹೇಳಿದ್ದಾರೆ.

      ಇಂದು ಬುಧವಾರ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯ ಕಟ್ಟೆದ ಹೊಸ ಸಭಾಂಗಣದಲ್ಲಿ ನಡೆದ ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ ಮತ್ತು ಸಂಸ್ಥೆಯ ಪ್ರತಿಭಾವಂತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      ಈ ಸಂಸ್ಥೆಯನ್ನು ಕಟ್ಟಿರುವ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಥನಾಳ ಶ್ರೀಗಳು, ದಿ. ಶ್ರೀ ಬಿ. ಎಂ. ಪಾಟೀಲ ಮತ್ತು ಈಗ ಅಧ್ಯಕ್ಷರಾಗಿರುವ ಎಂ. ಬಿ. ಪಾಟೀಲ ಅವರು ಪ್ರಚಾರಕ್ಕಿಂತ ತ್ಯಾಗದಿಂದ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಶಾಶ್ವತವಾಗಿರಲಿವೆ. ವೃತ್ತಿಯಲ್ಲಿ ವಕೀಲರಾಗಿದ್ದರೂ ಸಾಹಿತ್ಯದ ಬಗ್ಗೆ ರುಚಿ ಹೊಂದಿದ್ದ ಹಳಕಟ್ಟಿಯವರು ಶಿಕ್ಷಣ ಮರಿಚಿಕೆಯಾಗಿದ್ದ ಅಂದಿನ ದಿನಗಳಲ್ಲಿ ಸಮಾಜ, ಸಂಸ್ಕೃತಿ ಮತ್ತು ದೇಶದ ಒಳಿತಿಗಾಗಿ ವಚನ ಸಾಹಿತ್ಯ ಸಂಶೋಧನೆ ನಡೆಸಿ, ಸಂಸ್ಥೆ ಪ್ರಾರಂಭಿಸಿ ಶಿಕ್ಷಣದ ಬೀಜ ಬಿತ್ತಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ನಂತರ ಬಂಥನಾಳ ಶ್ರೀಗಳು ಪ್ರವಚನಗಳ ಮೂಲಕ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದ್ದಾರೆ. ಹಳಕಟ್ಟಿ, ಬಂಥನಾಳ ಶ್ರೀಗಳು ಹಾಗೂ ಬಿ. ಎಂ. ಪಾಟೀಲರು ಬಿಲ್ವಪತ್ರಿಯ ತ್ರಿದಳಗಳಿದ್ದಂತೆ. ಅವರ ಕೊಡುಗೆ ಸ್ಮರಿಸುತ್ತ ಗೌರವ ನೀಡುವ ಮೂಲಕ ಎಂ. ಬಿ. ಪಾಟೀಲರು ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಅಷ್ಟೇ ಅಲ್ಲ, ಆಧುನಿಕ ವಿಜಯಪುರ ಜಿಲ್ಲೆಯ ಹರಿಕಾರರಾಗಿದ್ದಾರೆ. ಜನಪ್ರೀಯ ಕೆಲಸಗಳ ಬದಲು ಜನಪರ ಕೆಲಸ ಮಾಡುವ ಮುಂದಿನ ಪೀಳಿಗೆಯೂ ಸ್ಮರಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಜೊತೆಗೆ ಸಮಾಜವನ್ನೂ ಬೆಳೆಸುವ ಮೂಲಕ ಸಮಸಮಾಜವನ್ನು ಬೆಳೆಸುತ್ತಿದ್ದಾರೆ. ಈಗ ಬಿ.ಎಲ್.ಡಿ.ಇ ಜಂಗಮರೂಪಿ ಸಂಸ್ಥೆಯಾಗಿದೆ ಎಂದು ಸ್ವಾಮೀಜಿ ಹೇಳಿದರು.

      ಮುಖ್ಯ ಅತಿಥಿಯಾಗಿ ಪಾಲ್ಗೋಂಡ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ಸಮಾಜದ ಒಳಿತಿಗಾಗಿ ಸಮಯ ಮೀಸಲಿಡುವ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಹಳಕಟ್ಟಿಯವರು ಈ ಸಂಸ್ಥೆಯನ್ನು ಹುಟ್ಟು ಹಾಕಿದರು. ಬಸವನಾಡಿನಲ್ಲಿ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ಬೆಳೆಯಲು ಶ್ರಮಿಸಿದರು. ಬಂಥನಾಳ ಶ್ರೀಗಳು ಸಂಸ್ಥೆಯ ಗಟ್ಟಿಯಾಗಿ ಬೆಳೆಯಲು ಆರ್ಥಿಕವಾಗಿ ಶ್ರಮಿಸಿದರೆ, ದಿ. ಬಿ. ಎಂ. ಪಾಟೀಲರು ಉನ್ನತ ಶಿಕ್ಷಣಕ್ಕಾಗಿ ಭದ್ರ ಬುನಾದಿ ಹಾಕಿದರು. ಅಲ್ಲದೇ, ವೃತ್ತಿಪರ ಮತ್ತು ವೈದ್ಯಕೀಯ ವ್ಯವಸ್ಮೆ ಮಾಡಿದರು. ಈಗ ಎಂ. ಬಿ. ಪಾಟೀಲ ಅವರು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯದ ಉನ್ನತ ಶಿಕ್ಷಣದವರೆಗೆ ಜಾಗತಿಕ ಸ್ಪರ್ಷ ನೀಡುತ್ತಿದ್ದಾರೆ. ಎಲ್ಲ ಸಮುದಾಯದವರಿಗೂ ಗುಣಮಟ್ಟದ ಶಿಕ್ಷಣ ಕೈಗೆಟಕುವಂತೆ ಮಾಡಿದ್ದಾರೆ. ಸಾಮೂಹಿಕ ಹೊಣೆಗಾರಿಕೆ ಮತ್ತು ಆಂತರಿಕ ಸ್ವಾತಂತ್ರ್ಯ ಸಂಸ್ಥೆಯ ಧ್ಯೇಯವಾಗಿದ್ದು, ಭೌತಿಕ ಸಂಪತ್ತಿಗಿಂತ ನೈತಿಕ ಸಂಪತ್ತು ಬಿ.ಎಲ್.ಡಿ.ಇ ಸಂಸ್ಥೆಯ ನೈಜ ಆಸ್ತಿಯಾಗಿದೆ. ಅವರ ಸಮರ್ಥ ನಾಯಕತ್ವದಲ್ಲಿ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಅಲ್ಲದೇ, ಎಂ. ಬಿ. ಪಾಟೀಲರು ರಾಜ್ಯ ಇಂದು ಕೈಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಕಾರಣರಾಗಿದ್ದಾರೆ ಎಂದು ಹೇಳಿದರು.

      ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಅಶೋಕ ವಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಠಮಾನ್ಯಗಳು ಜೋಳಿಗೆ ಹಾಕಿ ಶಾಲೆಗಳನ್ನು ಪ್ರಾರಂಭಿಸದಿದ್ದರೆ ಇಂದು ಯಾರೂ ಸಾಕ್ಷರಸ್ಥರು(ಸಹಿ ಮಾಡುವವರು) ಸಿಗುತ್ತಿರಲಿಲ್ಲ. ಹಳಕಟ್ಟಿ ಅವರ ನಂತರ ಜವಾಬ್ದಾರಿ ವಹಿಸಿಕೊಂಡ ಬಂಥನಾಳ ಶ್ರೀಗಳು ಅಂದು ಸಂಸ್ಥೆಯನ್ನು ಬೆಳೆಸಲುವ ಜವಾಬ್ದಾರಿಯನ್ನು ಬಿ. ಎಂ. ಪಾಟೀಲರಿಗೆ ವಹಿಸಿದ್ದರಿಂದ ಅಭಿವೃದ್ಧಿಯ ಪರ್ವ ಪ್ರಾರಂಭವಾಯಿತು. ನಂತರ ಈಗ ಎಂ. ಬಿ. ಪಾಟೀಲರು ಸಂಸ್ಥೆ ಸಿಹಿಯಾದ ಫಲ ನೀಡಲು ಕಾರಣರಾಗಿದ್ದಾರೆ ಎಂದು ಹೇಳಿದರು.

      ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂದು 10 ಜನ ಶಿಕ್ಷಕರು ಮತ್ತು 80 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 5000 ಶಿಕ್ಷಕರು, 40000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಹೇಳಿದರು.

      ಈ ಕಾರ್ಯಕ್ರಮದಲ್ಲಿ 49 ಜನ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

      ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಜಮಖಂಡಿ ಆಡಳಿತಾಧಿಕಾರಿ ಎಸ್. ಎಚ್. ಲಗಳಿ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಸಂಸ್ಥೆಯ ಆಡಳಿತ ಮಂಡಳಿಯ ನಾನಾ ಪದಾಧಿಕಾರಿಗಳು, ಶಾಲೆ, ಕಾಲೇಜುಗಳ ಪ್ರಾಚಾರ್ಯರ ಉಪಸ್ಥಿತರಿದ್ದರು.

      ಸುನೈನಾ ದೇಶಪಾಂಡೆ ಪ್ರಾರ್ಥಿಸಿದರು. ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಬಿ.ಎಲ್.ಡಿ.ಇ ಗೀತೆ ಹಾಡಿದರು. ಡಾ. ನೀತಾ ಮಠಪತಿ ನಿರೂಪಿಸಿದರು. ಡಾ. ಸಂತೋಶ ಚಪ್ಪರ ವಂದಿಸಿದರು.

      1 ಮತ್ತು 2 ಬಿ.ಎಲ್.ಡಿ.ಇ ಸಂಸ್ಥಾಪನ ದಿನಾಚರಣೆ :

      ವಿಜಯಪುರದಲ್ಲಿ ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ ಮತ್ತು ಸಂಸ್ಥೆಯ ಪ್ರತಿಭಾವಂತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಅರುಣ ಚಂ. ಇನಾಮದಾರ, ಅಶೋಕ ವಾರದ, ಎಸ್. ಎಚ್. ಲಗಳಿ, ಡಾ. ವಿ. ಜಿ. ಸಂಗಮ ಉಪಸ್ಥಿತರಿದ್ದರು.

       

       

      3 ಮತ್ತು 4 ಬಿ.ಎಲ್.ಡಿ.ಇ ಸಂಸ್ಥಾಪನ ದಿನಾಚರಣೆ :ವಿ

      ಜಯಪುರದಲ್ಲಿ ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ ಮತ್ತು ಸಂಸ್ಥೆಯ ಪ್ರತಿಭಾವಂತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಅರುಣ ಚಂ. ಇನಾಮದಾರ, ಅಶೋಕ ವಾರದ, ಎಸ್. ಎಚ್. ಲಗಳಿ, ಡಾ. ವಿ. ಜಿ. ಸಂಗಮ ಉಪಸ್ಥಿತರಿದ್ದರು.

      Tags: #115th Foundation Day of BLDE..!#Public News#Today News#Voice Of Janata#Voiceofjanata.in#ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ..!vijayapur
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಮಕ್ಕಳ ಭಿಷ್ಯ ರೂಪಿಸುವುದು ತಂದೆ-ತಾಯಿ ಹಾಗೂ ಶಿಕ್ಷಕನ ಕರ್ತವ್ಯ ಮುಖ್ಯ..!

      ಮಕ್ಕಳ ಭಿಷ್ಯ ರೂಪಿಸುವುದು ತಂದೆ-ತಾಯಿ ಹಾಗೂ ಶಿಕ್ಷಕನ ಕರ್ತವ್ಯ ಮುಖ್ಯ..!

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ದ್ವಿತೀಯ ಪಿಯುಸಿಯ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ

      ದ್ವಿತೀಯ ಪಿಯುಸಿಯ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ

      March 4, 2026
      ಸಂಸ್ಕರಿಸಿದ ಶುದ್ಧ ನೀರನ್ನು ಹಂಚಿನಾಳ ಕೆರೆಗೆ ಪುರೈಸಿ: ಜಿಲ್ಲಾ ಉಸ್ತುವಾರಿ‌ ಸಚಿವ ಡಾ.‌ಎಂ.ಬಿ.ಪಾಟೀಲ

      ಸಂಸ್ಕರಿಸಿದ ಶುದ್ಧ ನೀರನ್ನು ಹಂಚಿನಾಳ ಕೆರೆಗೆ ಪುರೈಸಿ: ಜಿಲ್ಲಾ ಉಸ್ತುವಾರಿ‌ ಸಚಿವ ಡಾ.‌ಎಂ.ಬಿ.ಪಾಟೀಲ

      March 4, 2026
      ಭಾರತ ಜನಗಣತಿ-2027 ಸಿದ್ಧರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ

      ಭಾರತ ಜನಗಣತಿ-2027 ಸಿದ್ಧರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ

      March 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.