ಇಂಡಿ : ತಾಲೂಕಿನ ಬಬಲಾದ ಗ್ರಾಮದ ವಿಶ್ವಜ್ಞಾನಿ ಗ್ರಂಥಾಲಯದಲ್ಲಿ 73ನೇ ಗಣರಾಜ್ಶೋತ್ಸವ ಆಚರಣೆ ಮಾಡಲಾಯಿತು.ಪೋಟೋ ಪೂಜೆ ಹಣಮಂತ ಎಮ್ ಬಿರಾದಾರ, ದ್ವಜಾರೋಹಣ ಯುವ ಮುಖಂಡ ಬಾಪೂರಾಯಗೌಡ ಬಿರಾದಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಸಾಮಾಜೀಕ ಕಾರ್ಯಕರ್ತ ಪ್ರೀತು ದಶವಂತ ಮಾತನಾಡಿ, ಬ್ರಿಟೀಷ್ ಆಳ್ವಿಕೆಯಿಂದ ನಮ್ಮ ದೇಶ 1947 ರಲ್ಲಿ ಸ್ವತಂತ್ರವಾದ ಬಳಿಕ 1950 ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಅನ್ವಯಿಸಿಕೊಂಡು ಗಣರಾಜ್ಯೋತ್ಸವವೆನಿಸಿಕೊಂಡಿತು.
ಅಲ್ಲಿಂದೀಚೆಗೆ ಪ್ರತಿವರ್ಷ ಜನವರಿ 26 ರಂದು ಅತ್ಯಂತ ಸಡಗರ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಗಣರಾಜ್ಯೋತ್ಸವ ಎಂದು ಕರೆಯಲ್ಪಡುವ ನಮ್ಮ ರಾಷ್ಟ್ರದ ವಿಶೇಷ. ಈ ಸಂದರ್ಭದಲ್ಲಿ ಹೋರಾಟಗಾರರನ್ನ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೆನಪಿಸುವ ಸುದೀನ ವಾಗಿದೆ.
ಈ ಸಂದರ್ಭದಲ್ಲಿ ರಾಜು ಮುಲ್ಲ, ಕಮಲಾ ದಶವಂತ, ಗೌತಮಿ ಮಹಿಳಾ ಸ್ವಸಹಾಯಸಂಘದ ಪದಾಧಿಕಾರಿಗಳು ಹಾಗೂ ಊರಿನ ಗಣ್ಶರು ಮತ್ತು ಯುವಕರು ಬಾಗವಹಿಸಿದ್ದರುˌ