ದೇಶದಲ್ಲಿ ಜ್ಞಾನದ ದೀವಿಗೆ ಹಚ್ಚಿದ ವೀರ ಸನ್ಯಾಸಿ
ಇಂಡಿ: ದೇಶದಲ್ಲಿ ಜ್ಞಾನದ ದೀವಿಗೆ ಹಚ್ಚಿದ ವೀರ ಸನ್ಯಾಸಿ
ಸ್ವಾಮಿ ವಿವೇಕಾನಂದರ ಜಯಂತಿಯನ್ನು ಪ್ರತೀ ವರ್ಷ
ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.
ಯುವಕರೇ ಈ ದೇಶದ ಶಕ್ತಿ ಎಂದು ಯುವ
ಜನಸಮೂಹವನ್ನು ಒಂದುಗೂಡಿಸುವ ಕಾರ್ಯ
ಮಾಡಿದ್ದು ಸ್ವಾಮಿ ವಿವೇಕಾನಂದರು ಎಂದು ಶಿವಾನಂದ
ಕಾಮಗೊಂಡ ಹೇಳಿದರು.
ಶುಕ್ರವಾರ ಪಟ್ಟಣದ ಸಿಂದಗಿ ರಸ್ತೆಯ ಸಿ.ವಿ. ವ್ಹಿರಾಮನ
ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
ಯುವಕರು ದುಶ್ಚಟಗಳಿಂದ ದೂರವಾಗುಬೇಕು. ಈ
ನೆಲದ ಸಂಸ್ಕøತಿ, ಸಂಸ್ಕಾರ, ಬೆಳೆಸಿಕೊಳ್ಳಬೇಕು.
ಯುವಕರು ಮನಸ್ಸು ಮಾಡಿದ್ದಲ್ಲಿ ಜಗತ್ತಿನ ಅತ್ಯಂತ
ಸದೃಢ ದೇಶವನ್ನಾಗಿ ಮಾಡಬಹುದು ಎಂದರು.
ನಿರ್ದೇಶಕ ಮಹಾವೀರ್ ವರ್ಧಮಾನ ಮಾತನಾಡಿದರು.
ವಿದ್ಯಾರ್ಥಿಗಳಾದ ತೇಜಸ್ವಿನಿ ಗೋಳಗಿ, ಶ್ರೇಯಸ್
ಹಿರೇಮಠ, ದಿನಾಚರಣೆ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಾರಿತೋಷಕ ಪಡೆದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಎಬಿವಿಪಿ ಕಾರ್ಯಕರ್ತರಾದ ಕುಮಾರ ಸಚಿನ ಧಾನಗೊಂಡ ಮತ್ತು ಸ್ನೇಹಿತರು ಈ ಸಂದರ್ಭದಲ್ಲಿ ಹಾಜರಿದ್ದರು. ಸನ್ಮತಿ ಹಳ್ಳಿ, ಶೈಲೇಶ ಬೀಳಗಿ, ಪ್ರಸನ್ನ ನಾಡಗೌಡ, ಶೋಭಾ ನರಾಯಣಕರ ಸೇರಿದಂತೆ ಮತ್ತಿತರರು ಇದ್ದರು.
ಇಂಡಿ: ಪಟ್ಟಣದ ಸಿಂದಗಿ ರಸ್ತೆಯ ಸಿ.ವಿ. ವ್ಹಿರಾಮನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಕಾರ್ಯಕ್ರಮದಲ್ಲಿ ಶಿವಾನಂದ ಕಾಮಗೊಂಡ ಮಾತನಾಡಿದರು.




















