ಇಂಡಿ ಪ್ರತ್ಯೇಕ ಜಿಲ್ಲೆ ಮಾಡದಿದ್ದರೆ ಉಗ್ರ ಹೋರಾಟ: ಮುಖಂಡ ರೈಸ್ ಅಷ್ಟೇಕರ
ಇಂಡಿ :ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಭೀಮಾನದಿ ಈ ಭಾಗದ ಜನರ ಜೀವನಾಡಿಯಾಗಿದ್ದರೂ, ಸದಾ ಭೀಕರ ಬರಗಾಲಕ್ಕೆ ತುತ್ತಾಗುತ್ತಿರುತ್ತದೆ. ಈ ಭಾಗದ ಜನರು ನಾನಾ ಬಗೆಯ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯನ್ನಾಗಿ ರಚನೆ ಮಾಡಿದರೆ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಮುಖಂಡ ರೈಸ್ ಅಷ್ಟೇಕರ ಮಾತಾನಾಡಿದರು.
ಪಟ್ಟಣದಲ್ಲಿ ಇಂಡಿ ಪ್ರತ್ಯೇಕ ಜಿಲ್ಲೆಗಾಗಿ ಮಹಿಳಾ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ಉದ್ದೇಶಿಸಿ ಮಾತಾನಾಡಿದರು. ಪ್ರಪ್ರಥಮವಾಗಿ ನೂತನ ಜಿಲ್ಲೆಯ ಕೂಗು ಮೊಳಗಿಸಿದವರು ಇಂಡಿ ಶಾಸಕರು, ಇಂಡಿ ಉಪ ವಿಭಾಗ ಸರ್ವ ವಿಧದಲ್ಲಿ ಅಭಿವೃದ್ಧಿ ಸಾಧಿಸಲು ವಿಜಯಪುರ ಜಿಲ್ಲೆಯಿಂದ ಇಂಡಿ ಪ್ರತ್ಯೇಕಿಸಿ, ಜಿಲ್ಲಾ ಕೇಂದ್ರ ಹಾಗೂ ಸಂವಿಧಾನದ 371 ಜೆ, ವಿಧಿಗೆ ಸೇರ್ಪಡೆ ಮಾಡಬೇಕು.ಇಂಡಿ ಜಿಲ್ಲೆಗೆ ಬೇಕಾದ ಮೂಲ ಸೌಲಭ್ಯಗಳು ಮಗಳು ಇರುವುದರಿಂದ ಕೂಡಲೆ ಸರ್ಕಾರ ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು. ಇಲ್ಲವಾದರೆ ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.


















