ಸಂತ ಸೇವಾಲಾಲರ ತತ್ವಗಳು ಯುವಕರಿಗೆ
ಆದರ್ಶ
ಇಂಡಿ : ಸಂತ ಸೇವಾಲಾಲರ ತತ್ವ ಆದರ್ಶಗಳು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜ ಬಾಂಧವರು ನಡೆಯಬೇಕೆಂದು ಮಹೇಂದ್ರಕುಮಾರ ನಾಯಿಕ ಹೇಳಿದರು
ಸೋಮವಾರ ತಾಲೂಕಿನ ಆಳೂರ ಗ್ರಾಮದ ಎಲ್.ಟಿ. 1 ರಲ್ಲಿ ಜಗದಂಭಾ ಮತ್ತು ಸಂತ ಸೇವಾಲಾಲ್ ಅವರ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು, ದೇವರನ್ನು ಒಲಿಸಿಕೊಂಡು, ತಮ್ಮ ಜನಾಂಗದ ಸೇವೆಯನ್ನು ಮಾಡಿದ ಮಹಾನ್ ಹಿತಚಿಂತಕರು ದಾರ್ಶನಿಕರು ಸಂತ ಸೇವಾಲಾಲರಾಗಿದ್ದಾರೆ ಎಂದರು.
ಲಿಂಗಸೂರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಬಂಜಾರ ಸಮಾಜದವರು ಧೈರ್ಯ, ಸಾಹಸ, ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನವನ್ನು ಮೂಡಿಸಿದವರು.
ಸೇವಾಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಇಂದು ಏಕತೆಯನ್ನುಂಟು ಮಾಡಿರುವುದು ಸ್ಪಷ್ಟ ಜನರಲ್ಲಿರುವ ಮಿಥ್ಯಾಚರಣೆಗಳನ್ನು ತೊಲಗಿಸಿ, ಅವರ ಬದುಕನ್ನು ಉದ್ಧರಿಸಿದ ಕಾಲಜ್ಞಾನಿ ಅವರು ಎಂದರು.
ಉಮ್ಮಿರಗಡ್ಡದ ಭಾವು ಮಾಹಾರಾಜ ಮಾತನಾಡಿದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸಂಸ್ಕøತಿಕ ಕಾರ್ಯಕ್ರಮದ ಜೊತೆಗೆ ಕೋಲಾಟ, ಅನೇಕ ಸಂಸ್ಕøತಿಯ ಕಾರ್ಯಕ್ರಮ ನಡೆಯಿತು. ಯುವಕರು, ಮಹಿಳೆಯರು, ಪುರುಷರು ಅಪಾರ ಪ್ರಮಾಣದ ಜನಸ್ತೋಮ ಜಾತ್ರೆಯಲ್ಲಿ ಭಾಗಿಯಾಗಿದ್ದರು.
ಆಳೂರದ ಸಿದ್ಧಾರೂಢ ಮಠದ ಶಂರಲಿಂಗ
ಮಾಹಾಸ್ವಾಮಿಗಳು ಸಾನಿದ್ಯವಹಿಸಿದರು. ಶಾಸಕರ
ಪುತ್ರ ವಿಠ್ಠಲಗೌಡ ಪಾಟೀಲ, ಡಾ. ರಾಜೇಂದ್ರ ನಾಯಕ, ಅಶೋಕ ನಾಯಕ್, ಭೀಮಸಿಂಗ್ ರಾಠೋಡ, ರಾಜಶೇಖರ ನಾಟೀಕಾರ, ಹಣಮಂತ ಚಾಬುಕಸವಾರ, ಪಾಂಡುರಂಗ ಕುಲಕರ್ಣಿ, ರಾಜು ಚವ್ಹಾಣ,
ನೀಲಪ್ಪ ವಾಲೀಕಾರ ಮತ್ತಿತರಿದ್ದರು.