ಅಫಜಲಪುರ: ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ನಡೆದ ಭಾರತ ರತ್ನ, ಮಾಜಿ ರಾಷ್ಟ್ರಪತಿಗಳಾದ ಡಾ.ಎಪಿಜೆ ಅಬ್ದುಲ್ ಕಲಾಂ ಅವರ 92ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಡಾ.ಎಪಿಜೆ ಅಬ್ದುಲ್ ಕಲಾಂ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಚರಿಸಲಾಯಿತು.
ಈ ವೇಳೆ ಶೇಷಗಿರಿ ಗ್ರಾಮದವರಾದ ನೂತನ PSI ಕುಮಾರಿ ರೇಣುಕಾ, ಉಡಗಿ ಅವರಿಗೂ ಹಾಗೂ ನಿವೃತ್ತ ನೀರಾವರಿ ಅಧಿಕಾರಿಗಳಾದ ಸೈಫನಸಾಬ ಚೌಧರಿ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಮಹಿಬೂಬಸಾಬ ಚೌಧರಿ ಉಪಾಧ್ಯಕ್ಷರಾದ ಶಮೀರ ಕಸಾಯಿ ಮಹಾದೇವಗೌಡ ಪೋಲಿಸಪಾಟೀಲ ವಿಠ್ಠಲ ಉಡಗಿ ಸುರೇಶ ಶಿರನಾಳ ಹಣಮಂತ ಮೈಂದರ್ಗಿ ಮಹಿಬೂಬ ಕಸಾಯಿ ಪೈಗಂಬರ್ ಕಸಾಯಿ ಸಂತೋಷ ಅವಟೆ ಶೆಟ್ಟೆಪ್ಪಾ ವಳಸಂಗ ಸುಭಾಷ ಹಿಳ್ಳಿ ಅರ್ಜುನ ಅಂಕಲಗಿ ನಿಂಗು ಪೂಜಾರಿ ಶ್ರೀಶೈಲ ಚಾಂಬರ ಇನ್ನಿತರರಿದ್ದರು.