ಕಿತ್ತೂರು ಚೆನ್ನಮ್ಮ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವ ಸಂಭ್ರಮ.
ಇಂಡಿ: ನಗರದ ಕಿತ್ತೂರು ಚೆನ್ನಮ್ಮ ಶಾಲೆಯಲ್ಲಿ 75ನೆಯ ಗಣರಾಜ್ಯೋತ್ಸವ ಸಂಭ್ರಮವನ್ನು ಆಚರಿಸುವ ಮೂಲಕ, ರಾಷ್ಷಪೀತ ಮಹಾತ್ಮ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬರ ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವಪೂರ್ವಕ ಪೂಜೆಯ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು.
ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿ ಪುರಸಭೆ ಮಾಜಿ ಸದಸ್ಯ ಸಿದ್ದು ಡಂಗಾ ,ಬಿ.ಐ.ಆರ್.ಟಿಗಳಾದ ರಾಜಕುಮಾರ ಛತ್ರಿ. ಮಾತನಾಡಿತ್ತಾ ಭಾರತದ ಸಂವಿಧಾನ ಭಾರತೀಯರಿಗೆ ಡಾ ಬಿ ಆರ್ ಅಂಬಯ ನೀಡಿದ ಅಮೂಲ್ಯ ರತ್ನವಾಗಿದೆ, ಸಂವಿಧಾನದ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಆಕಾಶ ಇಂಡಿ, ವಿನೋದ್ ಚಾಂದಕವಟೆ, ಕೃಷ್ಣ.ಜಾದಲ, ಆರ್ ಎನ್ ಕಾಳೆ ರಾಜು ಜಾದವ್ ಅತಿಥಿಗಳಾಗಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿ ಮುಖ್ಯಗುರುಗಳಾದ ಎಸ್ ಕೆ ಮಿರಗಿ ಧ್ವಜಾರೋಹಣ ನೆರವೇರಿಸಿದರು.ಕೃಷಾ ಗೋಳಸಂಗಿ ನಿರೂಪಿಸಿ ,ಶಿಕ್ಷಕರು ಹಾಗೂ ಗುರು ಮಾತೆಯರು, ವಿದ್ಯಾರ್ಥಿಗಳು ಸಂಭ್ರಮಾಚರಣೆ ಉಪಸ್ಥಿತರಿದ್ದರು