ಕುಡಿಯುವ ನೀರಿಗೆ ಕ್ರಮ ವಹಿಸಿ: ಯಶವಂತರಾಯಗೌಡ
ಶಾಸಕ ಯಶವಂತರಾಯಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ
ಇಂಡಿ: ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಮುಂಜಾಗೃತಾ ಕ್ರಮವಾಗಿ ಅಕ್ಟೋಬರ್ 26 ರಂದು ಬೆಳಗ್ಗೆ 11.30ಕ್ಕೆ ಇಲ್ಲಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬರಗಾಲ ಟಾಸ್ಕ್ ಪೋರ್ಸ ಸಮಿತಿಯ ಸಭೆ ಕರೆಯಲಾಗಿದೆ. ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷತೆ ಶಾಸಕ ಯಶವಂತರಾಯಗೌಡ ಪಾಟೀಲ್ ವಹಿಸಿ ಮಾತಾನಾಡಿದರು.
ಮಳೆಯಾಗದ ಹಿನ್ನೆಲೆಯಲ್ಲಿ 2024 ಜೂನ್ 8 ರ
ವರೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ
ಕ್ರಮ ವಹಿಸಬೇಕೆಂದು ಹೇಳಿದರು. ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಟಾಸ್ಕ ಪೋರ್ಸ ಸಮಿತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕುಡಿಯುವ ನೀರಿಗಾಗಿ ಆಣೆಕಟ್ಟಿನಲ್ಲಿ 15 ಟಿಎಂಸಿ ನೀರು ಬೇಕಾಗುತ್ತದೆ. ಕಾರಣ ಜೂನ್ ವರೆಗೆ ನೀರು ಕಾಯದಿರಿಸಲು ಕೇಳಿಕೊಂಡರು. ಮತ್ತು ತಾಲೂಕಿನಲ್ಲಿಯ ಎಲ್ಲ ಕೆರೆಗಳನ್ನು ತುಂಬಬೇಕು ಎಂದರು. ಮತ್ತು ಕಾಲುವೆಗೆ ಕೊನೆಯ ಭಾಗದವರೆಗೂ ನೀರು ಹರಿಸಬೇಕು ಎಂದರು.
ತಾಲೂಕಿನಲ್ಲಿರುವ ಕೆರೆಗಳಿಗೆ ಎಷ್ಟು ನೀರು ಬೇಕು
ಅದನ್ನು ತಿಳಿದುಕೊಂಡು ಈ ಸಲ ಪರಿಸ್ಥಿತಿ ಮತ್ತು
ಸನ್ನಿವೇಶ ಬೇರೆ ಇದ್ದು, ಅದನ್ನು ಹೇಗೆ ನಿರ್ವಹಿಸಲು
ಸಾದ್ಯ ಎಂಬುದನ್ನು ತಿಳಿದುಕೊಂಡು ಬೇಸಿಗೆಯಲ್ಲಿ
ನೀರಿಕ್ಷಿಸಿದಷ್ಟು ಪೂರೈಸಬೇಕಾಗುತ್ತದೆ ಎಂದರು.
ಕೆಂಬಾವಿಯಿಂದ ಇಂಡಿ ಬ್ರಾಂಚ್ ಕಾಲುವೆ ವರೆಗೆ ನೀರಿನ ಹರಿವು 2960 ಕ್ಯೂಸೆಕ್ಸ ಇದೆ. ಇಂಡಿ ತಾಲೂಕಿನಲ್ಲಿ ಒಂದು ಲಕ್ಷ 31 ಹೆಕ್ಟರ್ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಬರುವ ದಿನಗಳಲ್ಲಿ ಹಳ್ಳಿಗಳಿಗೆ ನೀರಿನ ತೊಂದರೆ ಯಾಗದಂತೆ ಕ್ರಮ ವಹಿಸಲು ತಿಳಿಸಿದರು.
ನಾರಾಯಣಪುರ ಜಲಾಶಯದ ಮುಖ್ಯ ಅಬಿಯಂತರಾದ ಆರ್. ಮಂಜುನಾಥ, ಭೀಮರಾಯನಗುಡಿ ಮುಖ್ಯ ಅಭಿಯಂತರ ಪ್ರೇಮಸಿಂಗ್, ರಾಂಪೂರ ಮುಖ್ಯ ಅಭಿಯಂತರ ರವಿಶಂಕರ, ಆಲಮಟ್ಟಿಯ ಶ್ರೀನಿವಾಸ, ರಮೇಶ ರಾಠೋಡ, ಗೋವಿಂದ ರಾಠೋಡ ಮಾತನಾಡಿ,
ಡಿಶೆಂಬರ್ 4 ರ ವರೆಗೆ ರೈತರ ಬೆಳೆಗಳಿಗಾಗಿ
ಕಾಲುವೆಯಲ್ಲಿ ನೀರು ಹರಿಸಲಾಗುತ್ತದೆ. ಅದಲ್ಲದೆ
ಕುಡಿಯುವ ನೀರಿಗಾಗಿ ಬೇಕಾಗುವ 15 ಟಿಎಂಸಿ ನೀರನ್ನು
ಕಾದಿರಿಸಲಾಗುವದು. ಗ್ರಾಮದ ಜನರಿಗೆ, ಅಡವಿ ವಸ್ತಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ಮುಂಜಾಗೃತೆ ಕ್ರಮ ಕೈಕೊಳ್ಳಲಾಗುವದು ಎಂದರು.
ಕೃಷಿ ಇಲಾಖೆಯ ಮಹಾದೇವಪ್ಪ ಏವೂರ ಮಾತನಾಡಿ,
ತಾಲೂಕಿನಲ್ಲಿ 88 ಸಾವಿರ ಹೇಕ್ಟೆರ್ ಪ್ರದೇಶದಲ್ಲಿ ತೊಗರಿ
ಬೆಳೆ ಇದೆ, ಮತ್ತು ಬೆಳೆ ಚೆನ್ನಾಗಿ ಬಂದಿದ್ದು ಹೂವು
ಬಿಡುವ ಹಂತದಲ್ಲಿದೆ. ಒಂದು ವೇಳೆ ನೀರಿನ ಅನಾನುಕೂಲವಾದರೆ ಅಂದಾಜು 44 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಸಾಧಾರಣ ಬರುತ್ತದೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬುರಾವ ರಾಠೋಡ, ಗ್ರೇಡ್-2 ತಹಶಿಲ್ದಾರ ಧನಪಾಲಶೆಟ್ಟಿ ದೇವೂರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಸಿಪಿಐ ಎಂ.ಎಂ. ಡಪ್ಪಿನ, ಎಚ್.ಸ್. ಪಾಟೀಲ, ಎಸ್.ಆರ್. ರುದ್ರವಾಡಿ, ಮಲ್ಲಿಕಾರ್ಜುನ ಏವೂರ
ಸೇರಿದಂತೆ ಕೃಷ್ಣಾ ನೀರಾವರಿ ಇಲಾಖೆ ಅಭಿಯಂತರರು
ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ
ಬಂದ ರೈತರು ಶಾಸಕರಿಗೆ ಕಾಲವೆ ನೀರು ಹರಿಸುವಂತೆ
ಮನವಿ ಮಾಡಿಕೊಂಡರು.