ನಮ್ಮ ಆರೋಗ್ಯಕ್ಕಾಗಿ ತಮ್ಮ ಆರೋಗ್ಯ ಮುಡುಪಾಗಿಡುವ ಪೌರ ಕಾರ್ಮಿಕರನ್ನು ಗೌರವಿಸಿ..
ಇಂಡಿಯಲ್ಲಿ ಸ್ವಚ್ಛ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಪಾಟೀಲ..
ಇಂಡಿ : ಸ್ವಚ್ಚತೆ ಇರುವಲ್ಲಿ ಆರೋಗ್ಯ ವಿರುತ್ತೆದೆ. ಆರೋಗ್ಯವಿದ್ದಲ್ಲಿ ಎಲ್ಲವೂ ವಿರುತ್ತೆದೆ. ಒಂದು ವೇಳೆ ಆರೋಗ್ಯ ವಿರದಿದ್ದರೆ ಎಲ್ಲವೂ ಕಾಣದಂತೆ ಆಗುತ್ತದೆ. ಆದರೆ ನಮ್ಮ ಆರೋಗ್ಯಕ್ಕಾಗಿ, ತಮ್ಮ ಆರೋಗ್ಯ ಮುಡುಪಾಗಿಡುವ ಪೌರ ಕಾರ್ಮಿಕರನ್ನು ನಾವು ಎಲ್ಲರೂ ಗೌರವಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಪಟ್ಟಣದಲ್ಲಿ ಇಂಡಿ ಸ್ವಚ್ಚ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ ದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆನೀಡಿ ಸುತ್ತಮುತ್ತಲಿನ ಪ್ರದೇಶ ಸ್ವಚ್ಛಗೊಳಿಸಿದರು ಹಾಗೂ ಅಂಗಡಿಕಾರರಿಗೆ,ವ್ಯಾಪಾರಸ್ಥರಿಗೆ ಮತ್ತು ಗೂಡಂಗಡಿಗಳ ಹತ್ತೀರ ತೆರಳಿ ಸ್ವಚ್ಚತೆ ಬಗ್ಗೆ ತಿಳಿಸಿ ಹೇಳಿದರು. ಇನ್ನೂ ಸ್ವತಂತ್ರ್ಯೋತ್ಸವ ಹಿನ್ನೆಲೆ 10 ದಿನಗಳ ಕಾಲ ಹಮ್ಮಿಕೊಂಡಿರುವ ಈ ಅಭಿಯಾನ ಕೇವಲ ಕಾರ್ಯಕ್ರಮಕ್ಕೆ ಸೀಮಿತ ವಾಗದೆ ಪ್ರತಿ ದಿನವೂ ಸ್ವಚ್ಚತೆ ಕಡೆ ಗಮನ ಹರಿಸಿದ್ರೆ ಪುರಸಭೆ ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಗೌರವ ಸಿಗುತ್ತದೆ ಎಂದು ಹೇಳಿದರು.
ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ
ಮಾತನಾಡಿ ಪಟ್ಟಣದ ಜನಸಂಖ್ಯೆ ೪೭ ಸಾವಿರ ಇದ್ದು
ಪಟ್ಟಣಕ್ಕೆ ಬೇರೆ ಗ್ರಾಮಗಳಿಂದ ಬರುವವರ ಸಂಖ್ಯೆಯು ಅಷ್ಟೇ ಇದೆ. ಪುರಸಭೆಯಲ್ಲಿ ಕೇವಲ ೭೨ ಕಾರ್ಮಿಕರು ಸ್ವಚ್ಛತೆಗಾಗಿ ಇದ್ದು ಒಬ್ಬ ಕಾರ್ಮಿಕರಿಗೆ ೭೦೦ ಜನರ ಸ್ವಚ್ಛತೆಯ ಕಡೆಗೆ ಗಮನ ನೀಡಬೇಕಾಗುತ್ತದೆ. ಹೀಗಾಗಿ ಜನತೆಯಲ್ಲಿ ತಿಳುವಳಿಕೆ ಮೂಡಿಸಿ ನಾವು ನಮ್ಮ ಕುಟುಂಬದವರು ಸ್ವಚ್ಛತೆಯ ಕಾರ್ಯದಲ್ಲಿ ಸಹಕರಿಸುವದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.